ತಾಲೂಕಿನ ಯರಗೋಳ ಜಲಾಶಯಕ್ಕೆ ಜಿಲ್ಲಾಧಿಕಾರಿ ಅಕ್ರಂಪಾಶ ಬೇಟಿ, ಸಿಎಂ ಕಾರ್ಯಕ್ರಮಕ್ಕೆ ಸ್ಥಳ ಪರಿಶೀಲನೆ
(KOLARA): ಬಂಗಾರಪೇಟೆ : ಕೋಲಾರ ಜಿಲ್ಲೆ ಜನತೆಗೆ ಬಹುದಿನಗಳ ಬೇಡಿಕೆಯಾದ ಯರಗೋಳ್ ಯೋಜನೆ ಅಣೆಕಟ್ಟು ಉದ್ಘಾಟನೆಗೆ ನವಂಬರ್ 10ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ರವರಿಂದ ಲೋಕಾರ್ಪಣೆಯಾಗಲಿದೆ ಅದಕ್ಕಾಗಿ ಇಂದು ಸ್ಥಳ ಪರಿಶೀಲನೆ ಮಾಡಲು ಬಂದಿದ್ದೇವೆ ಎಂದು ಜಿಲ್ಲಾಧಿಕಾರಿ ಅಕ್ರಂಪಾಷ ತಿಳಿಸಿದರು.
ತಾಲೂಕಿನ ಯರಗೋಳ ಜಲಾಶಯವನ್ನು ವೀಕ್ಷಣೆ ಮಾಡಿ ಮಾತನಾಡುತ್ತಾ, ಈ ಯರಗೋಲ ಜಲಾಶಯ ಹಲವು ವಿಘ್ನಗಳ ಮಧ್ಯಯು ಸಹ ಮಾನ್ಯ ಶಾಸಕರುಗಳು ಹಾಗೂ ಜಿಲ್ಲಾ ಮಂತ್ರಿಗಳ ಪ್ರಯತ್ನದಿಂದ ಲೋಕಾರ್ಪಣೆಗೆ ಸಿದ್ಧವಾಗಿದೆ. ಈಗಾಗಲೇ ಯರಗೋಳ ಡ್ಯಾಮ್ ನಲ್ಲಿ ನೀರಿನ ಸಂಗ್ರಹ ಪೂರ್ಣವಾಗಿದೆ. ಇದನ್ನು ನಾವು ಕುಡಿಯುವ ನೀರಿಗಾಗಿ ಬಳಸಿಕೊಳ್ಳುವುದಕ್ಕೆ ಬಂಗಾರಪೇಟೆ,ಕೋಲಾರ ಮತ್ತು ಮಾಲೂರು ಮೂರು ತಾಲೂಕಗಳಿಗೆ ಕುಡಿಯುವ ನೀರಿನ ಯೋಜನೆಯನ್ನು ರೂಪಿಸಿ ಪ್ರಾಯೋಗಿಕವಾಗಿ ಈಗಾಗಲೇ ನೀರನ್ನು ಸರಬರಾಜು ಮಾಡಲಾಗಿದೆ ಎಂದರು.
ಈಗ ಬಿಟ್ಟಿರುವಂತಹ ನೀರು ಕೇವಲ ಪ್ರಾಯೋಗಿಕವಾಗಿ ಮಾತ್ರ ಕುಡಿಯುವುದಕ್ಕೆ ಯೋಗ್ಯವಲ್ಲ ಆದರಿಂದ ನಾವು ಅದನ್ನು ಪರಿಶೀಲನೆ ಮಾಡುತಿದ್ದೇವೆ, ಸತತವಾಗಿ 10 ದಿನಗಳ ಕಾಲ ಪರಿಶೀಲನೆ ಮಾಡಿ, ನಂತರ ಗುಣಮಟ್ಟವನ್ನು ಪರಿಶೀಲಿಸಿ ಕುಡಿಯುವುದಕ್ಕೆ ಯೋಗ್ಯವಾಗಿದೆ ಇಲ್ಲ ಎಂದು ತಿಳಿಸುತ್ತೇವೆ ಎಂದು ಹೇಳಿದರು.
ಈಗ ಮಾನ್ಯ ಮುಖ್ಯಮಂತ್ರಿಗಳು ಲೋಕಾರ್ಪಣೆಗೆ ಬರುವುದರಿಂದ ಆದರಿಂದ ಇಂದು ಮಾನ್ಯ ಶಾಸಕರು, ಸಿಓ, ಪೋಲಿಸ್ ಇಲಾಖೆಯ ಎಸ್ ಪಿ,ತಹಶೀಲ್ದಾರ್, ನೀರು ಸರಬರಾಜು ಇಲಾಖೆಯ ಅಧಿಕಾರಿಗಳು ಸ್ಥಳವನ್ನು ತನಿಖೆ ಮಾಡಿದ್ದೇವೆ, ಈ ಸ್ಥಳ ಪರಿಶೀಲನೆ ನಂತರ ನಾವು ಕಾರ್ಯಕ್ರಮ ಮಾಡುವಂತಹ ಸ್ಥಳವನ್ನು, ಹೆಲಿಪ್ಯಾಡ್, ಸಾರ್ವಜನಿಕರಿಗೆ ಅನುಕೂಲವಾಗುವಂತಹ ಸ್ಥಳ, ಎಲ್ಲಾ ವ್ಯವಸ್ಥೆಗಳನ್ನು ನೋಡಿಕೊಂಡು ಮುಂದಿನ ದಿನಗಳಲ್ಲಿ ಕಾರ್ಯ ಗತಕ್ಕೆ ತರಲಾಗುವುದು.
ಈಗ ಸಮಯ ಬಹಳ ಕಡಿಮೆ ಇದೆ ಅದಕ್ಕಾಗಿ ಎಲ್ಲಾ ವ್ಯವಸ್ಥೆಯನ್ನು ಸರಿಯಾದ ಸಮಯಕ್ಕೆ ಮಾಡಬೇಕು ಎನ್ನುವ ಸಲವಾಗಿ,ಈ ಒಂದು ಸ್ಥಳ ಪರಿಶೀಲನೆಯನ್ನು ಮಾಡುತಿದ್ದೇವೆ ಲೋಕಾರ್ಪಣೆ ಕಾರ್ಯಕ್ರಮ ಯಶಸ್ವಿಯಾಗಿ ನಡೆಸಿಕೊಡಲು ಎಲ್ಲಾ ಅಧಿಕಾರಿಗಳು ಭಾಗಿಯಾಗಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಬಂಗಾರಪೇಟೆ ಶಾಸಕರಾದ ಎಸ್ ಎನ್ ನಾರಾಯಣಸ್ವಾಮಿ, ಜಿಲ್ಲಾ ಪಂಚಾಯಿತಿ ಸಿ ಈ ಓ ಪದ್ಮ ಬಸವಂತಪ್ಪ, ಎಸಿ ವೆಂಕಟಲಕ್ಷ್ಮಿ, ಕೆಜಿಎಫ್ ಎಸ್.ಪಿ ಶಾಂತಕುಮಾರ್, ತಹಶೀಲ್ದಾರ್ ರಶ್ಮಿ, ಇಓ ರವಿಕುಮಾರ್, ಪುರಸಭೆಯ ಮುಖ್ಯ ಅಧಿಕಾರಿ ಮೀನಾಕ್ಷಿ, ಬೂದಿಕೋಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಾಗರಾಜ್, ಮುಖಂಡರಾದ ಮಹದೇವಪ್ಪ, ಧೋನಿ ಮಡಗು ಗ್ರಾಮ ಪಂಚಾಯಿತಿ ಅಧ್ಯಕ್ಷ ಮಂಜುಳಾ ಜಯಣ್ಣ, ಕಂದಾಯ ಇಲಾಖೆಯ ಪವನ್ ಕುಮಾರ್ ಹಾಗೂ ನೀರು ಸರಬರಾಜು ಇಲಾಖೆಯ ಅಧಿಕಾರಿಗಳು ಇದ್ದರು.
ವರದಿ: ವಿಷ್ಣು ಕೋಲಾರ