ಸಂವಿಧಾನದ ನ್ಯಾಯಲಯದಲ್ಲಿ ಶಿಕ್ಷೆ ಪ್ರಕಟವಾಗಿದೆ, ದೇವರ ನ್ಯಾಯಲಯದಲ್ಲಿ ಅತೀಘೋರ ಶಿಕ್ಷೆ ಪ್ರಕಟ ಇನ್ನೂ ಬಾಕಿಯಿದೆ. : DN ಜೀವರಾಜ್
(CHIKKAMAGALURU): ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಕ್ಷೇತ್ರದ ಮಾಜಿ ಸಚಿವರಾದ ಡಿ. ಎನ್ ಜೀವರಾಜ್ ಅವರ ಮೇಲೆ 2013ರಲ್ಲಿ ಅತ್ಯಚಾರದ ಆರೋಪಮಾಡಿದ ಮಹಿಳೆಗೆ ನರಸಿಂಹರಾಜಪುರ ನ್ಯಾಯಾಲಯ ಶಿಕ್ಷೆ ನೀಡಿದೆ. 2013 ನವೆಂಬರ್ 8 ರಂದು ಅಪರಾಧಿ ಮನು ಹಾಗೂ ಅರಣ್ಯ ಅಂದು ಮೂರನೇ ಬಾರಿಗೆ ಗೆದ್ದು ಶಾಸಕರಾಗಿ ಆಯ್ಕೆಯಾಗಿದ್ದ ಡಿ.ಎನ್.ಜೀವರಾಜ್ ಅವರ ಮೇಲೆ ಸುಳ್ಳು ಅತ್ಯಾಚಾರ ಆರೋಪ ಮಾಡುತ್ತಾರೆ. ಈ ಆರೋಪವನ್ನ ತನಿಖೆ ಮಾಡಿದ್ದ CID ಅಪರಾಧಿ ಮನು ಹಾಗೂ ಅರಣ್ಯ ಮಾಡಿದ್ದ ಆರೋಪದಲ್ಲಿ ಯಾವುದೇ ನಿಜಾಂಶವಿಲ್ಲ ಎಂದು ಬಿ-ರಿಪೋರ್ಟ್ ಸಲ್ಲಿಕೆ ಮಾಡುತ್ತದೆ.
CID ಸಲ್ಲಿಸಿದ ಬಿ-ರಿಪೋರ್ಟ್ ವಿರುದ್ದ ಅಪರಾಧಿ ಮನು ಹಾಗೂ ಅರಣ್ಯ ನರಸಿಂಹರಾಜಪುರದ ನ್ಯಾಯಾಲಯದ ಮೊರೆ ಹೋಗುತ್ತಾರೆ. ಸಂಪೂರ್ಣ ಸಾಕ್ಷಿಯನ್ನ ಪರಿಶೀಲನೆ ಮಾಡಿದ್ದ ನ್ಯಾಯಲಯ 2014 ರಲ್ಲಿ ಮನು ಹಾಗೂ ಅರಣ್ಯ ಮಾಡಿರುವ ಆರೋಪದಲ್ಲಿ ಯಾವುದೇ ಹುರುಳಿಲ್ಲ, ಡಿ.ಎನ್.ಜೀವರಾಜ್ ಅವರು ನಿರಪರಾಧಿ ಎಂದು ಆದೇಶ ನೀಡುತ್ತದೆ.
ಅಪರಾಧಿ ಮನು ಹಣಕ್ಕೆ ಬೇಡಿಕೆಯಿಟ್ಟು ಸುಳ್ಳು ಮೊಕದೊಮ್ಮೆ ದಾಖಲು ಮಾಡಿದ್ದ ಹಿನ್ನಲೆ ಆಗಸ್ಟ್ 20,2013 ರಂದೇ ಡಿ.ಎನ್.ಜೀವರಾಜ್ ಅವರು ಸಂಪೂರ್ಣ ಸಾಕ್ಷಿಗಳ ಸಮೇತರಾಗಿ ನ್ಯಾಯಾಲಯಕ್ಕೆ ಮೊರೆ ಹೋಗಿದ್ದರು.
10 ವರ್ಷ 2 ತಿಂಗಳ ಬಳಿಕ ವಾದ – ವಿವಾದಗಳನ್ನ ಪರಿಶೀಲನೆ ಮಾಡಿದ ನ್ಯಾಯಲಯ ಅಪರಾಧಿ ಮನುವಿಗೆ 3 ಪ್ರತ್ಯೇಕ ಪ್ರಕರಣಗಳಲ್ಲಿ 8 ವರ್ಷ ಜೈಲು, ದಂಡ, ಅರಣ್ಯ ಅವರಿಗೆ 2 ವರ್ಷ ಜೈಲು ದಂಡ ವಿಧಿಸಿದೆ.