ನ್ಯೂಸ್ಶಿವಮೊಗ್ಗ

ವ್ಯೆದ್ಯರು ಯಾವುದೇ ಕಾರಣಕ್ಕು ನಿರ್ಲಕ್ಷ ವಹಿಸಬಾರದು:ಗೋಪಾಲ ಕೃಷ್ಣ ಬೆಳೂರು.

ವ್ಯೆದ್ಯರು ಯಾವುದೇ ಕಾರಣಕ್ಕು ನಿರ್ಲಕ್ಷ ವಹಿಸಬಾರದು:ಗೋಪಾಲ ಕೃಷ್ಣ ಬೆಳೂರು.

(SHIVAMOGA): ಸಾಗರ : ಡೆಂಗ್ಯೂ ಸೇರಿದಂತೆ ಅತಿ ಹೆಚ್ಚು ಅನಾರೋಗ್ಯ ಪೀಡಿತರು ಆಸ್ಪತ್ರೆಗೆ ಬರುತ್ತಿರುವ ಈ ಹೊತ್ತಿನಲ್ಲಿ ಆಸ್ಪತ್ರೆಗೆ ವೈದ್ಯರುಗಳು ಸಕಾಲಕ್ಕೆ ಬರದಿದ್ದರೆ ಹೇಗೆ, ಡೆಂಗ್ಯೂವಿನಿಂದ ಆಸ್ಪತ್ರೆಯ ಸಿಬ್ಬಂದಿಯೇ ನಿಧನ ಹೊಂದಿದ್ದಾನೆ ಎಂದರೆ ಈಗ ಜಾಗೃತಿವಹಿಸಬೇಕಾದ ಸಮಯ ಹಾಗಿದ್ದೂ ನಿರ್ಲಕ್ಷ ಏಕೆ ಎಂದು ಶಾಸಕ ಬೇಳೂರು ಗೋಪಾಲಕೃಷ್ಣ ಅಸಮಾಧಾನವ್ಯಕ್ತಪಡಿಸಿದರು.


ಇಲ್ಲಿನ ಪ್ರವಾಸಿ ಮಂದಿರದಲ್ಲಿ ಕರೆದಿದ್ದ ವೈದ್ಯಾಧಿಕಾರಿಗಳ ಸಭೆಯಲ್ಲಿ ಮಾತಾನಾಡುತ್ತಾ ಅವರು, ಸಾಗರ ಉಪವಿಭಾಗೀಯ ಆಸ್ಪತ್ರೆಯಲ್ಲಿ ಸಮಯಕ್ಕೆ ಸರಿಯಾಗಿ ವೈದ್ಯರು ಕರ್ತವ್ಯದಲ್ಲಿರುವುದಿಲ್ಲ ಎನ್ನುವ ವಿಷಯ ಪ್ರಸ್ತಾಪಿಸಿ ಆಡಳಿತ ವೈದ್ಯಾಧಿಕಾರಿ ಪರಪ್ಪನವರಿಗೆ ತರಾಟೆ ತೆಗೆದುಕೊಂಡರು. ನಿಮಗೂ ಸೇರಿ ನೋಟಿಸ್ ಜಾರಿ ಮಾಡಿದರೆ ವ್ಯವಸ್ಥೆ ಸರಿಯಾಗಬಹುದಾ ಎಂದು ಪ್ರಶ್ನಿಸಿದ ಶಾಸಕರು, ಇಲ್ಲಿ ಕರ್ತವ್ಯ ಮಾಡುವುದಕ್ಕೆ ಆಸಕ್ತಿ, ಇಷ್ಟ ಇದ್ದವರು ಇರಲಿ ಸುಮ್ಮನೆ ಅಲಂಕಾರಕ್ಕೆ ಇಲ್ಲಿ ವೈದ್ಯರ ಅಗತ್ಯವಿಲ್ಲ, ನಿಮ್ಮ ಜಾಗಕ್ಕೆ  ಬೇರೆಯಾರಾದರೂ ಬರುತ್ತಾರೆ ಎಂದು ಹೇಳಿದ ಅವರು, ಎಂಸಿಎಚ್ ಆಸ್ಪತ್ರೆಯಲ್ಲಿ ದೂರು ಬಂದಿರುವ ವೈದ್ಯರನ್ನು ಪಕ್ಕದ ತಾಲೂಕಿಗೆ ವರ್ಗಾವಣೆ ಮಾಡಿ ಅಲ್ಲಿರುವ ವೈದ್ಯರನ್ನು ಇಲ್ಲಿಗೆ ಹಾಕುವಂತೆ ಜಿಲ್ಲಾ ವೈದ್ಯಾಧಿಕಾರಿಗಳಿಗೆ ಸೂಚಿಸಿದರು.
ಇನ್ನು ರಕ್ತ ಪರೀಕ್ಷೆಯ ವರದಿ ವಿಳಂಬದಿಂದಾಗಿ ಡೆಂಗ್ಯೂ ರೋಗಿಗಳಿಗೆ ತೊಂದರೆಯಾಗುತ್ತಿರುವ ಪ್ರಸ್ತಾಪ ಸಭೆಯಲ್ಲಿ ಚರ್ಚೆಯಾಗಿ, ಎಲ್ಲ ವರದಿಗಳನ್ನು ಮದ್ಯಾಹ್ನ  ಕಾಯ್ದಿರಿಸಿ ಒಂದೇ ವೇಳೆ ಕೊಡುವ ಕ್ರಮ ನಿಲ್ಲಿಸಿ ಶೀಘ್ರವಾಗಿ ವರದಿ ಕೊಡುವಂತೆ ಆದೇಶಿಸಿದರು
ಈ ವೇಳೆ ಆಸ್ಪತ್ರೆ ಸಮಿತಿಯ ಗಣಪತಿ ಮಂಡಗಳಲೆ, ಮಧು ಮಾಲತಿ, ಜಯರಾಮ ಹಾಗು ವ್ಯೆದ್ಯಾದಿಕಾರಿಗಳು ಮತ್ತಿತರರು ಇದ್ದರು.

ವರದಿ‌: ರಾಘವೇಂದ್ರ ತಾಳಗುಪ್ಪ

Leave a Reply

Your email address will not be published. Required fields are marked *

Scan the code