ಚಿತ್ರದುರ್ಗನ್ಯೂಸ್

ಸಮಯಕ್ಕೆ ಸರಿಯಾಗಿ ಬಾರದ ವೈದ್ಯರು…!!

ಸಮಯಕ್ಕೆ ಸರಿಯಾಗಿ ಬಾರದ ವೈದ್ಯರು…!!

(CHITRADURGA): ಮೊಳಕಾಲ್ಮೂರು: ಪಟ್ಟಣದ ನಾಗಸಮುದ್ರ ಗ್ರಾಮದ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸಮಯಕ್ಕೆ ಸರಿಯಾಗಿ ವೈದ್ಯರು ಬಾರದ ಹಿನ್ನೆಲೆಯಲ್ಲಿ ರೋಗಿಗಳು ಪರದಾಡುವಂಥ ಪರಿಸ್ಥಿತಿ ಎದುರಾಗಿದೆ..

ಈ ಆಸ್ಪತ್ರೆ ವ್ಯಾಪ್ತಿಗೆ ಸುಮಾರು 10ಕ್ಕೂ ಹೆಚ್ಚು ಗ್ರಾಮಗಳು ಒಳಪಡಲಿದ್ದು, ವೈದ್ಯರ ಬರುವಿಕೆಗಾಗಿ 2ರಿಂದ 3 ಗಂಟೆಗಳು ಕಾಯಲೇಬೇಕು, ಆದರೂ ಕೂಡ ವೈದ್ಯರು ಬರುತ್ತಾರೆ ಎನ್ನುವ ನಂಬಿಕೆ ಇಲ್ಲ, ಇನ್ನು ಕೆಲವರು ವೈದ್ಯರ ಬರುವುವಿಕೆಗೆ ಕಾಯಲಾರದೆ, ರಾಂಪುರ, ಮೊಳಕಾಲ್ಮೂರು, ಬಳ್ಳಾರಿಯ, ಖಾಸಗಿ ಆಸ್ಪತ್ರೆಗಳಿಗೆ ತೆರಳುತ್ತಿದ್ದಾರೆ. ಇಲ್ಲಿನ ಚಿಕಿತ್ಸೆಗೆ ಬೇಕಾದ ವೈದ್ಯೋಪಕರಣಗಳು ಇದ್ದರೂ ಕೂಡ ಇಲ್ಲದಂತಾಗಿವೆ. ಹೆರಿಗೆ ಮಾಡಿಸಲು ಅವಕಾಶಗಳಿದ್ದು ಕೂಡ ವೈದ್ಯರು ಬರುವುದು ಮಾತ್ರ ತಡವೇಕೆ? ಇನ್ನು ಸಮರ್ಪಕ ಸೌಲಭ್ಯ ಸಿಗುವುದು ಯಾವಾಗ? ಎಂದು ಸ್ಥಳೀಯರು ಪ್ರಶ್ನಿಸುತ್ತಿದ್ದಾರೆ.
ಇನ್ನು ಈ ಸಂದರ್ಭದಲ್ಲಿ ತಾಲೂಕು ವೈದ್ಯಾಧಿಕಾರಿಗಳ ಡಾಕ್ಟರ್ ಬಿ ಮಧುಕುಮಾರ್, ಮಾತನಾಡಿ  ತಿಂಗಳಿಗೆ 5 ರಿಂದ 6 ಹೆರಿಗೆಗಳು ಮಾಡಲಾಗುತ್ತದೆ,ವೈದ್ಯರು ತಡವಾಗಿ ಬರುವುದು ನನ್ನ ಗಮನಕ್ಕೆ ಬಂದಿಲ್ಲ ಅದರ ಬಗ್ಗೆ ಈಗ ಮಾತನಾಡಿ ಸಮಯಕ್ಕೆ ಸರಿಯಾಗಿ ಕರ್ತವ್ಯಕ್ಕೆ ಹಾದುರಾಗುವಂತೆ ಸೂಚಿಸುತ್ತೇನೆ ಎಂದು ತಿಳಿಸಿದರು.

ವರದಿ: ಸಿದ್ದೇಶ ಜಿ ಮೊಳಕಾಲ್ಮೂರು.

Leave a Reply

Your email address will not be published. Required fields are marked *

Scan the code