ಕೈ ಮಾಜಿ ಸಚಿವ ಸಗೀರ್ ಅಹಮದ್ ಪುತ್ರನ ವಿರುದ್ಧ ವರದಕ್ಷಿಣೆ ಕಿರುಕುಳದ ಆರೋಪ.
(ಚಿಕ್ಕಮಂಗಳೂರು: 1 – ಸೆಪ್ಟೆಂಬರ್ ) ಮಹಿಳಾ ಪೊಲೀಸ್ ಠಾಣೆಯಲ್ಲಿ ಪತಿಯ ವಿರುದ್ಧ ವರದಕ್ಷಿಣೆ ಕಿರುಕುಳ ದೂರು ದಾಖಲಾಗಿದೆ. ಮಾಜಿ ಸಚಿವ ಸಗೀರ್ ಅಹಮದ್ ಪುತ್ರನ ವಿರುದ್ಧ ವರದಕ್ಷಿಣೆ ಕಿರುಕುಳ ನೀಡಿ, ಹಲ್ಲೆ ಮಾಡಿರುವ ಆರೋಪವಿದೆ.
ವರದ್ಷಿಣೆ ಸಂಬಂಧ ಸಗೀರ್ ಅಹಮದ್ ಪುತ್ರ ( ಅತೀ ಉರ್ ರಹಮಾನ್ ) ಪತ್ನಿ ( ಶಿಂಷಿಯಾ ಸಹರ್ ) ಅವರಿಗೆ ಕಿರುಕುಳ ನೀಡಿ ಹಲ್ಲೆ ಮಾಡಿರುವ ಆರೋಪವಿದೆ. ಕೋಟಿ…ಕೋಟಿ.. ರೂ. ಕೆಜಿ ಚಿನ್ನ ಫರ್ಚುನರ್ ಕಾರು ಕೊಟ್ಟರು ಸಕಾಗಿಲ್ಲ ಎಂದು ತಿಳಿಸಿದ್ದಾರೆ. ಶಿಂಷಿಯಾ ಸಹರ್ ಅವರ ಕಾಲು ಮತ್ತು ಕೈಗೆ ಗಂಭೀರವಾಗಿ ಗಾಯವಾಗಿದ್ದು ಚಿಕ್ಕಮಂಗಳೂರು ಮಲ್ಲೇಗೌಡ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಏಳು ವರ್ಷಗಳ ಹಿಂದೆ ಉರ್ ರೆಹಮಾನ್ ಮತ್ತು ಶಿಂಷಿಯಾ ಸಹಾರ್ ಮದುವೆಯಾಗಿತ್ತು. ಮದುವೆ ಸಮಯದಲ್ಲಿ ವರದಕ್ಷಿಣೆ ಕೆಜಿ ಚಿನ್ನ ಮತ್ತು ಫಾರ್ಚುನರ್ ಕಾರು ನೀಡಿದ್ದರು. ಇದು ಸಾಕಾಗದೆ ತವಾರು ಮನೆಯಿಂದ ಹಣ ತರುವಂತೆ ಪೀಡಿಸುತ್ತಿದ್ದ. ಹಾಗೂ ಇತೀಚೆಗೆ ಹಲ್ಲೆ ನಡೆಸಿದ್ದು. ಪತಿಯ ವಿರುದ್ಧ ಶಿಂಷಿಯಾ ಸಾಹರ್ ಡ್ರಗ್ ಅಡಿಕ್ಟ್ ಎಂದು ಚಿಕ್ಕಮಗಳೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರೆ