ಚಿಂತಾಮಣಿಯಲ್ಲಿ ಅದ್ದೂರಿಯಾಗಿ ನಡೆದ ದ್ರೌಪದಿ ಧರ್ಮರಾಯಸ್ವಾಮಿ ಶಕ್ತಿ ಕರಗ ಮಹೋತ್ಸವ
(KOLARA): ಚಿಂತಾಮಣಿ : ನಗರದ ಎಮ್.ಜಿ.ರಸ್ತೆಯಲ್ಲಿರುವ ಶ್ರೀ ದ್ರೌಪದಿ ಧರ್ಮರಾಯ ಸ್ವಾಮಿ ದೇವಾಲಯದಲ್ಲಿ ಹೂವಿನ ಶಕ್ತಿ ಕರಗ ಮಹೋತ್ಸವನ್ನು ಹಮ್ಮಿಕೊಳ್ಳಲಾಯಿತು.
ನಗರದ ಪ್ರಮುಖ ಬೀದಿಗಳಾದ ಎನ್.ಎನ್.ಟಿ.ರಸ್ತೆಯಲ್ಲಿರುವ. ಭಜನೆ ಮಂದಿರ ಮುಂದೆ ಹೂಗಳಿಂದ ಅಲಂಕಾರಿಸಿದ ವೇದಿಕೆ ಮೇಲೆ ಶಕ್ತಿ ಕರಗ ನರ್ತಿಸಿದ ನಂತರ, ಊರಮುಂದೆ, ಶ್ರೀ ಗ್ರಾಮ ದೇವತೆ ಗಂಗಾಭವಾನಿ ಅಮ್ಮನವರ ದೇವಾಲಯ, ಗಜಾನನ ಸರ್ಕಲ್, ಆಜಾದ್ ಚೌಕ, ನಾಗನಾಥೇಶ್ವರ ದೇವಾಲಯ, ಇನ್ನೂ ಮುಂತಾದ ಬೀದಿಗಳಲ್ಲಿ ಹೂವಿನ ಶಕ್ತಿ ಕರಗ ನರ್ತಿಸಿ ನಂತರ ಎಮ್.ಜಿ.ರಸ್ತೆಯಲ್ಲಿರುವ ಶ್ರೀ ದ್ರೌಪದಿ ಧರ್ಮರಾಯಸ್ವಾಮಿ ದೇವಾಲಯಕ್ಕೆ ಶಕ್ತಿ ಕರಗ ತಲುಪಿ ಅಗ್ನಿಗುಂಡ ಪ್ರವೇಶ ಮಾಡುವುದು ಆದಾದನಂತರ ವಸಂತೋತ್ಸವ, ಒನಕೆ ಕರಗ, ಕಳಶ ಕರಗ ನಡೆಸಲಾಯಿತು.
ಇನ್ನೂ ಇದೇ ಸಂದರ್ಭದಲ್ಲಿ ಮಾದ್ಯಮ ಮಿತ್ರ ಸೀನ.ಟಿ, ಗೋವಿಂದ್ ರಾಜ್, ಬಸವರಾಜ್, ಭರತ್, ಅನಿಲ್, ಭಾನು, ನಾರಾಯಣಸ್ವಾಮಿ, ಶ್ರೀನಿವಾಸ್, ಸತಿ, ರಾಮ್ ಕುಮಾರ್ ಇನ್ನೂ ಮುಂತಾದವರು ಹಾಜರಿದ್ದರು.
ವರದಿ: ವಿಷ್ಣು ಕೋಲಾರ