ನ್ಯೂಸ್ಶಿವಮೊಗ್ಗ

‘ವೀರಶೈವ’ ಪದ ಕೈಬಿಟ್ಟಿರುವುದು ಕಾಂಗ್ರೆಸ್‌ನ ಒಡೆದಾಳುವ ನೀತಿಗೆ ಹಿಡಿದ ಕನ್ನಡಿ

‘ವೀರಶೈವ’ ಪದ ಕೈಬಿಟ್ಟಿರುವುದು ಕಾಂಗ್ರೆಸ್‌ನ ಒಡೆದಾಳುವ ನೀತಿಗೆ ಹಿಡಿದ ಕನ್ನಡಿ

(SHIVAMOGA): ಸೊರಬ: ಪಠ್ಯಪುಸ್ತಕದಲ್ಲಿ ವೀರಶೈವ ಪದ ಕೈಬಿಟ್ಟಿರುವುದು ರಾಜ್ಯದಲ್ಲಿ ಆಡಳಿತರೂಢ ಕಾಂಗ್ರೆಸ್ ಸರ್ಕಾರದ ಒಡೆದು ಆಳುವ ನೀತಿಗೆ ಹಿಡಿದ ಕನ್ನಡಿ ಎಂದು ವೀರಶೈವ ಲಿಂಗಾಯತ ಸಂಘಟನಾ ವೇದಿಕೆ ಮಧ್ಯ ಕರ್ನಾಟಕ ಮಧ್ಯ ಕರ್ನಾಟಕ ಅಧ್ಯಕ್ಷ ಸಿ.ಪಿ.ಈರೇಶಗೌಡ ಖಂಡಿಸಿದ್ದಾರೆ.

ಈ ವರ್ಷ ಪರಿಷ್ಕೃತಗೊಂಡಿರುವ ಒಂಭತ್ತನೇ ತರಗತಿ ಪಠ್ಯದಲ್ಲಿ ವೀರಶೈವ ಪದವನ್ನು ಸರ್ಕಾರ ಕೈಬಿಟ್ಟಿರುವುದಕ್ಕೆ ವ್ಯಾಪಕ ಖಂಡನೆ ವ್ಯಕ್ತವಾಗುತ್ತಿದೆ. ಪಠ್ಯ ಪುಸ್ತಕಗಳಲ್ಲಿ ವೀರಶೈವ ಪದ ತೆಗದು ಕಾಂಗ್ರೆಸ್ ರಾಜ್ಯ ಸರ್ಕಾರ ಮತ್ತೆ ಒಡೆದು ಆಳುವ ನೀತಿ ಪ್ರಾರಂಭ ಮಾಡುತ್ತಿದೆ.

ಕಾಂಗ್ರೆಸ್ ಪಕ್ಷ ಹಲವಾರು ಬಾರಿ ವೀರಶೈವ ಲಿಂಗಾಯತ ಸಮಾಜವನ್ನು ಒಡೆದು ಆಳುತ್ತಾ ತಮ್ಮ ಅಸ್ತಿತ್ವ ಗಟ್ಟಿ ಮಾಡಿಕೊಳ್ಳಲಿಕ್ಕೆ ಪ್ರಯತ್ನ ಮಾಡುತ್ತಿದೆ. ಪಠ್ಯ ಪುಸ್ತಕಗಳಲ್ಲಿ ವೀರಶೈವ ಪದ ತೆಗೆದು ಹಾಕಿದ್ದು ಒಂದು ದುರಂತ. ಇದರ ವಿರುದ್ಧ ಅಖಂಡ ಸಮುದಾಯ ಗಟ್ಟಿ ಧ್ವನಿಯಲ್ಲಿ ಹೋರಾಡುವ ಅವಶ್ಯಕತೆ ಇದೆ. ಪದೇ-ಪದೇ ಈ ತರಹ ಆಗುತ್ತಿರುವುದು ನೋವಿನ ಸಂಗತಿ. ಇಂದಿನಿ0ದ ಎಲ್ಲರೂ ಸರ್ಕಾರಕ್ಕೆ ವೀರಶೈವ ಲಿಂಗಾಯತ ವೇದಿಕೆ ಮೂಲಕ ಸರ್ಕಾರದ ನಡೆಯನ್ನು ಉಗ್ರವಾಗಿ ವಿರೋಧಿಸಬೇಕು. ಸರ್ಕಾರ ಕೂಡಲೇ ಈ ನೀತಿಯನ್ನು ಕೈ ಬಿಡಬೇಕು ಎಂದು ಪತ್ರಿಕಾ ಹೇಳಿಕೆಯಲ್ಲಿ ಒತ್ತಾಯಿಸಿದ್ದಾರೆ.

ವರದಿ: ಸಂದೀಪ್ ಯು ಎಲ್ ಸೊರಬ

Leave a Reply

Your email address will not be published. Required fields are marked *

Scan the code