ಸರ್ಕಾರದ ವೈಫಲ್ಯಗಳ ವಿರುದ್ಧ ಕೆಂಡ ಕಾರಿದ ಡಿ.ಎಸ್.ಎಸ್.
(KOLARA): ಬಂಗಾರಪೇಟೆ:ಕಾಂಗ್ರೆಸ್ ಮತ್ತು ಬಿಜೆಪಿ ಸರ್ಕಾರಗಳು ಜನರ ಕಲ್ಯಾಣಕ್ಕಾಗಿ ಕೋಟಿಗಟ್ಟಲೆ ಬಜೆಟ್ ಮಂಡನೆ ಮಾಡುತ್ತಿದೆಯೇ ಹೊರತು ಯೋಜನೆಗಳನ್ನು ಅನುಷ್ಠಾನ ಗೊಳಿಸದೆ ತನ್ನ ಗೊಸುಂಬೆತನದ ನಾಟಕ ಪ್ರದರ್ಶನ ಮಾಡುತ್ತಿದೆ ಎಂದು ಡಿ ಎಸ್ ಎಸ್ ಜಿಲ್ಲಾ ಮುಖಂಡ ಹೂವಾರಸನಹಳ್ಳಿ ರಾಜಪ್ಪ ಸರ್ಕಾರದ ವೈಫಲ್ಯಗಳ ವಿರುದ್ಧ ಕೆಂಡ ಕಾರಿದರು.
ಪಟ್ಟಣದ ತಾಲೂಕು ಆಡಳಿತ ಕಛೇರಿಯ ಮುಂಭಾಗದಲ್ಲಿ ದಲಿತ ಸಂಘರ್ಷ ಸಮಿತಿ ವತಿಯಿಂದ ಸರ್ಕಾರದ ಜನವಿರೋಧಿ ಆಡಳಿತ ಹಾಗೂ ತಾಲೂಕಿನ ಭ್ರಷ್ಟ ಅಧಿಕಾರಿಗಳ ವಿರುದ್ಧ ಹಮ್ಮಿಕೊಂಡಿದ್ದ ಬೃಹತ್ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿ. ಸರ್ಕಾರಗಳು ಅವೈಜ್ಞಾನಿಕ ಕಾನೂನುಗಳನ್ನು ಜಾರಿಗೆ ತರುವುದರ ಮೂಲಕ ಸರ್ಕಾರಿ ಭೂಮಿಯಲ್ಲಿ ಉಳುಮೆ ಮಾಡುವವರಿಗೆ ಕಾನೂನು ಬದ್ಧವಾಗಿ ದಾಖಲೆಗಳನ್ನು ನೀಡಿದೆ ವಂಚಿಸುತ್ತಿದ್ದಾರೆ ಹಾಗೂ ಪ್ರಸ್ತುತ ಸರ್ಕಾರದಲ್ಲಿ ಸತ್ತವರನ್ನು ಹೂಳಲು ಸ್ಮಶಾನಕ್ಕೆ ಜಾಗ ನೀಡದೆ ಜನರು ಪರದಾಡುತ್ತಿದ್ದಾರೆ ಎಂದು ಆಕ್ರೋಶ ಹೊರಹಾಕಿದರು.
ತಾಲೂಕಿನಾದ್ಯಂತ ಭ್ರಷ್ಟಾಚಾರ ರುದ್ರ ನರ್ತನವಾಡುತ್ತಿದೆ,
ತಾಲೂಕಿನಲ್ಲಿ ಬಹುಸಂಖ್ಯಾತರಿಗೆ ಸಾಗುವಳಿ ಚೀಟಿ ನೀಡಿದ್ದರೂ ಸೂಕ್ತ ದಾಖಲೆಗಳನ್ನು ನೀಡಲು ಮೀನಾಮೇಷ ಎನಿಸುತ್ತಿದ್ದಾರೆ ಹಾಗೂ ಮೂಲ ಕಡತಗಳು ನಾಪತ್ತೆಯಾಗಿದೆ ಎಂದು ತಿಳಿಸಿದ್ದಾರೆ ಇಂತಹ ಅಧಿಕಾರಿಗಳ ಬೇಜವಾಬ್ದಾರಿತನ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು, ಹಾಗೂ ತಾಲ್ಲೂಕಿನಾದ್ಯಂತ ಅಧಿಕಾರಿಗಳು ಭೂ ಮಾಫಿಯಾದವರ ಬೆನ್ನಿಗೆ ನಿಂತು ನಕಲಿ ದಾಖಲೆಗಳನ್ನು ಸೃಷಿಸಿ ಕಾರಣ ಇಂದು ಗುಂಡು ತೋಪು, ಓಣಿ, ಬಂಡಿ ದಾರಿ, ಕೆರೆ, ಓಣಿ, ರಾಜಕಾಲುವೆ ಕುಂಟೆಗಳು ಭೂ ಮಾಫಿಯದವರ ಪಾಲಾಗಿದೆ , ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಪಿಡಿಓ ಗಳು ಖಾತೆ ಮಾಡಿಕೊಳ್ಳಲು 10 ಸಾವಿರ ಲಂಚ ಪಡೆಯುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.
ಕಾನೂನು ಸುವ್ಯವಸ್ಥೆ ಸಂಪೂರ್ಣ ವಿಫಲವಾಗಿದೆ:
ತಾಲೂಕಿನಲ್ಲಿ ಇತ್ತೀಚೆಗೆ ಕೊಲೆ ದರೋಡೆ ಹಲೆ ಅತ್ಯಾಚಾರ ಪ್ರಕರಣಗಳು ಹೆಚ್ಚಾಗುತ್ತಿದೆ, ಹಾಗೂ ಇಸ್ಪೀಟ್, ಕೋಳಿ ಪಂದ್ಯ, ಅಕ್ರಮ ಮಧ್ಯಮಾರಾಟ ನಡೆಯುತ್ತಿದ್ದರೂ ಅಧಿಕಾರಿಗಳು ಮಾಸಿಕ ಇಂತಿಷ್ಟು ಪ್ರಮಾಣದ ಲಂಚದ ಹಣ ಪಡೆದು ಮೌನಕ್ಕೆ ಜಾರಿದ್ದಾರೆ,
ವಸತಿ ಯೋಜನೆ ಮೂಲೆಗುಂಪು, ವಿಧ್ಯಾರ್ಥಿ ವೇತನಕ್ಕೆ ಕತ್ತರಿ:
ಆಳುವ ಸರ್ಕಾರಗಳ ನಿರ್ಲಕ್ಷತನದಿಂದಾಗಿ ಸರ್ಕಾರಿ ಶಾಲೆಗಳಲ್ಲಿ ಮೂಲಭೂತ ಸೌಲಭ್ಯಗಳು ಕಣ್ಮರೆಯಾಗಿದೆ ಸಮಾಜಕಲ್ಯಾಣ ಇಲಾಖೆ ಮತ್ತು ದೇವರಾಜ್ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ಇಲಾಖೆ ವತಿಯಿಂದ ಲಭ್ಯವಾಗಬೇಕಾಗದ ಯೋಜನೆಗಳು ಫಲಪ್ರದವಾಗಿಲ್ಲ, ಹಾಗೂ ಸತತ 8 ವರ್ಷಗಳಿಂದ ಬಡ ವಿದ್ಯಾರ್ಥಿಗಳಿಗೆ ನೀಡುತ್ತಿದ್ದ ವಿಧ್ಯಾರ್ಥಿ ವೇತನಕ್ಕೆ ಕತ್ತರಿ ಬಿದ್ದಿದೆ ಇದರೊಟ್ಟಿಗೆ ವಸತಿ ಹೀನರಿಗೆ ನೀಡಬೇಕಾಗಿದ್ದ ಮಾಸ್ತಿ ಯೋಜನೆಯ ಮನೆ ಹಂಚಿಕೆ ಮೂಲೆ ಗುಂಪಾಗಿದೆ, ಕೇವಲ ಪುರಸಭೆಯಲ್ಲಿ 17 ಸಾವಿರ ಅರ್ಜಿಗಳು ತುಕ್ಕು ಹಿಡಿಯುತ್ತಿದೆ ಎಂದರು.
ಬೇಡಿಕೆಗಳು:
ಹಿರೆಕರಪನಹಳ್ಳಿ ಗ್ರಾಮದ ಸರ್ವೆ ನಂಬರ್ 65ರಲ್ಲಿ 35 ಜನ ಫಲಾನುಭವಿಗಳಿಗೆ ಸಾಗುವಳಿ ಚೀಟಿ ನೀಡಿದ್ದು ಅವರಿಗೆ ಪಹಣಿ ಮುಟೇಷನ್ ನೀಡಬೇಕು, ಹಾಗೂ ಬೂದಿಕೋಟೆ, ಉಕ್ಕುಂದ, ಅತ್ತಿಗಿರಿ, ಸಿಂಗರ ಹಳ್ಳಿ ,ಇತರ ಗ್ರಾಮಗಳಲ್ಲಿ ಫಾರಂ 53 ಹಾಗೂ57 ರಲ್ಲಿ ಸಾಗುವಳಿ ಚೀಟಿ ನೀಡಬೇಕು. ತಾಲೂಕಿನಾದ್ಯಂತ ದಲಿತರಿಗೆ ಸ್ಮಶಾನ ಭೂಮಿ ಮಂಜೂರು ಮಾಡಿ ದಾರಿ ಒದಗಿಸಬೇಕು, ಸರ್ಕಾರಿ ಜಮೀನು ಒತ್ತುವರಿ ತೆರವುಗೊಳಿಸಬೇಕು, ಚಿಕ್ಕವಲಗಮಾದಿ ಗ್ರಾಮದ ಸರ್ವೆ ನಂಬರ್ 5 ರಲ್ಲಿರುವ 15 ಎಕ್ಕರೆ 15 ಗುಂಟೆ ಕೆರೆ ಜಮೀನಿನ ಅಕ್ರಮ ದಾಖಲೆಗಳನ್ನು ರದ್ದುಪಡಿಸಬೇಕು.
ಬಂಗಾರಪೇಟೆ ಹಾಗೂ ಕೆಜಿಎಫ್ ತಾಲೂಕುಗಳಲ್ಲಿ ಅಕ್ರಮ ಭೂ ದಾಖಲೆ ಸೃಷ್ಟಿ ಮಾಡಿದ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು, ಒಳಗೊಂಡಂತೆ ಒಟ್ಟು ವಿವಿಧ ಇಲಾಖೆಗಳ 25 ಬೇಡಿಕೆಗಳು ಇಡೇರಿಸಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಸಮಿತಿ ಮುಖಂಡರಾದ ಹೆಚ್ ಮುನಿವೆಂಕಟಪ್ಪ, ಸಿ.ವಿ.ನಾಗರಾಜು, ತಾಲೂಕು ಸಮಿತಿ ಮುಖಂಡರಾದ ಹಿರೇಕರಪನಹಳ್ಳಿ ರಾಮಪ್ಪ, ಸಿದ್ದನಹಳ್ಳಿ ಯಲ್ಲಯ್ಯ, ಮಧುಸೂದನ್, ಪುರ ರಮೇಶ್, ಮಹಿಳಾ ಘಟಕದ ಮುಖಂಡರಾದ ಕವಿತಾ, ವಿಜಯ ಲಕ್ಷ್ಮಿ, ಕಾಮಾಕ್ಷಿ, ಪ್ರತೀಭಾ, ಸುಕನ್ಯಾ, ಇತರರು ಉಪಸ್ಥಿತರಿದ್ದರು.
ವರದಿ: ವಿಷ್ಣು ಕೋಲಾರ