ಕೋಲಾರನ್ಯೂಸ್

ಆಗ್ನೇಯ ಶಿಕ್ಷಕರ ಕ್ಷೇತ್ರದಲ್ಲಿ ಈ ಬಾರಿ ನನಗೆ ಅವಕಾಶ ನೀಡಿ ಪಟ್ಟಣದಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಡಿ.ಟಿ ಶ್ರೀನಿವಾಸ್ ಮನವಿ

ಆಗ್ನೇಯ ಶಿಕ್ಷಕರ ಕ್ಷೇತ್ರದಲ್ಲಿ ಈ ಬಾರಿ ನನಗೆ ಅವಕಾಶ ನೀಡಿ ಪಟ್ಟಣದಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಡಿ.ಟಿ ಶ್ರೀನಿವಾಸ್ ಮನವಿ

(KOLARA): ಬಂಗಾರಪೇಟೆ:ಆಗ್ನೇಯ ಶಿಕ್ಷಕರ ಕ್ಷೇತ್ರದಲ್ಲಿ ಒಬ್ಬರಿಗೇ 18ವರ್ಷಗಳ ಕಾಲ ಅವಕಾಶ ಕಲ್ಪಿಸಿಕೊಡಲಾಗಿದ್ದು,ಬದಲಾವಣೆಗಾಗಿ ಈ ಬಾರಿ ಕಾಂಗ್ರೆಸ್ ಅಭ್ಯರ್ಥಿಯಾದ ನನಗೆ ಅವಕಾಶ ನೀಡಿದರೆ ಶಿಕ್ಷಕರ ಎಲ್ಲಾ ಸಮಸ್ಯೆಗಳಿಗೆ ನ್ಯಾಯಕೊಡಲು ಶ್ರಮಿಸಲಾಗುವುದೆಂದು ಆಗ್ನೇಯ ಶಿಕ್ಷಕರ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಧಿಕೃತ ಅಭ್ಯರ್ಥಿ ಡಿ. ಟಿ ಶ್ರೀನಿವಾಸ್ ಮನವಿ ಮಾಡಿದರು.

ಈಗಾಗಲೇ ಡಿ. ಟಿ ಶ್ರೀನಿವಾಸ್ ಹೆಸರು ಕಾಂಗ್ರೆಸ್ ಪಕ್ಷ ಪ್ರಕಟಿಸಿದ ಬಳಿಕ ಈಗನಿಂದಲೇ ಪ್ರಚಾರ ಆರಂಭಿಸಿದ್ದಾರೆ, ಮಂಗಳವಾರ ಡಿ. ಟಿ ಶ್ರೀನಿವಾಸ್ ಪಟ್ಟಣದ ವಿದ್ಯಾಸಂಸ್ಥೆಗಳಿಗೆ ತೆರಳಿ ಮತಯಾಚನೆ ಮಾಡಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ,ಅವರು ಕಳೆದ ಬಾರಿ ನಾನು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಅಲ್ಪಮತಗಳಿಂದ ಸೋತೆ,ಈ ಬಾರಿ ಕಾಂಗ್ರೆಸ್ ನನಗೆ ಟಿಕೆಟ್ ಘೋಷಣೆ ಮಾಡಿದೆ,ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತ ಪಕ್ಷವಾಗಿರುವುದರಿಂದ ಶಿಕ್ಷಕರ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಲು ಕಾಂಗ್ರೆಸ್‌ಗೆ ಬೆಂಬಲ ನೀಡಿದರೆ ಹೆಚ್ಚು ಅನುಕೂಲವಾಗಲಿದೆ ಎಂದರು.

ಕಳೆದ 18ವರ್ಷಗಳಿಂದ ಆಗ್ನೇಯ ಶಿಕ್ಷಕರ ಕ್ಷೇತ್ರ ಒಬ್ಬರಿಗೇ ಅವಕಾಶ ನೀಡಿದೆ,ಆದರೆ ಶಿಕ್ಷಕರ ಸಮಸ್ಯೆಗಳು ಮಾತ್ರ ಇನ್ನೂ ಜೀವಂತವಾಗಿದೆ,ಅಲ್ಲದೆ 2006ರಿಂದ ಎನ್‌ಪಿಎಸ್ ಜಾರಿಯಾದಾಗಿನಿಂದ ಶಿಕ್ಷಕರಿಗೆ ಹೊಸ ಸಮಸ್ಯೆ ಬಂದಿದೆ,ನಿವೃತ್ತಿ ಬಳಿಕ ಪೆನ್ಷನ್ ಇಲ್ದೆ ಸಮಸ್ಯೆಯಾಗಿದೆ.ಇನ್ನು ಬಗೆಹರಿಸಿ ಹಳೇ ಪೆನ್ಷನ್ ಜಾರಿಗೊಳಿಸಲು ಕಾಂಗ್ರೆಸ್ ಸರ್ಕಾರ ಬದ್ದವಾಗಿದೆ,ಈ ಹಿನ್ನೆಲೆಯಲ್ಲಿ ಶಿಕ್ಷಕರು ಕಾಂಗ್ರೆಸ್ ಅಭ್ಯರ್ಥಿಯಾದ ನನಗೆ ಮತ ನೀಡಿ ಗೆಲ್ಲಿಸಿದರೆ ಎನ್‌ಪಿಎಸ್ ಬಗ್ಗೆ ಎಲ್ಲಾ ಶಾಸಕರು ಸಂಘಟಿತರಾಗಿ ಸರ್ಕಾರದ ಮೇಲೆ ಒತ್ತಡ ಹೇರಿ ಎನ್‌ಪಿಎಸ್ ರದ್ದತಿಗೆ ಹೋರಾಡಲು ಸಹಕಾರಿಯಾಗಲಿದೆ,ಆದ್ದರಿಂದ ನನಗೆ ಅವಕಾಶ ನೀಡಬೇಕೆಂದು ಶಿಕ್ಷಕರಲ್ಲಿ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಮೇಸ್ತ್ರಿ ಶ್ರೀನಿವಾಸ್ , ರವಿಕುಮಾರ್, ಚಂದ್ರಣ್ಣ, ಜಯರಾಮ್ ,ಕೇಶವ,ವೆಂಕಟೇಶಗೌಡ,ಶಂಕರಪ್ಪ, ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಹಾಗೂ ಹಾಲಿ ಸದಸ್ಯ ಶ್ರೀನಿವಾಸ್ ಮೊದಲಾದವರು ಇದ್ದರು.

ವರದಿ ವಿಷ್ಣು ಕೋಲಾರ

Leave a Reply

Your email address will not be published. Required fields are marked *

Scan the code