ಜಿಲ್ಲೆನ್ಯೂಸ್

ಮಾನವ ಸಂಕುಲದಲ್ಲಿ ಅರಿವಿನ ಕೊರತೆಯಿಂದಾಗಿ ಸಂವಿಧಾನ ಕೆಲವೇ ವರ್ಗಕ್ಕೆ ಸೀಮಿತ.

ಮಾನವ ಸಂಕುಲದಲ್ಲಿ ಅರಿವಿನ ಕೊರತೆಯಿಂದಾಗಿ ಸಂವಿಧಾನ ಕೆಲವೇ ವರ್ಗಕ್ಕೆ ಸೀಮಿತ.

(KOLARA): ಬಂಗಾರಪೇಟೆ : ಮಾನವ ಸಂಕುಲದಲ್ಲಿ ಅರಿವಿನ ಕೊರತೆಯಿಂದಾಗಿ ಸಂವಿಧಾನ ಕೆಲವೇ ವರ್ಗಕ್ಕೆ ಸೀಮಿತ ಎಂಬ ಪರಿಕಲ್ಪನೆಯನ್ನು ಹೊಂದಿರುವುದು ಸಮಾಜಸ ವಲ್ಲ. ಸಂವಿಧಾನ ಸಮಾನತೆ ಭ್ರಾತೃತ್ವ ತಲಹದಿಯಲ್ಲಿ ರಚಿತವಾಗಿದ್ದು ದೇಶವನ್ನು ಪ್ರಗತಿಯ ಪಥದತ್ತ ಕೊಂಡೊಯ್ಯುವ ಪ್ರಮುಖ ಅಸ್ತ್ರವಾಗಿದೆ, ಎಂದು ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಶ್ರೀನಿವಾಸ್ ರವರು ಅಭಿಪ್ರಾಯಪಟ್ಟರು.

ತಾಲೂಕಿನ ಆಲಂಬಾಡಿ ಜೊತೇನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಆಗಮಿಸಿದ ಸಂವಿಧಾನ ಜಾಗೃತಿ ಜಾಥ ರಥಯಾತ್ರೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ವಂಶ ಪಾರಂಪರ್ಯ ಆಡಳಿತಕ್ಕೆ ತಿಲಾಂಜಲಿ ಇಟ್ಟು ಪ್ರಜಾಪ್ರಭುತ್ವ ವ್ಯವಸ್ಥೆಯ ಅಡಿಯಲ್ಲಿ ಸಮಾನತೆ ಮತ್ತು ಭ್ರಾತೃತ್ವದ ನೆಲಗಟ್ಟಿನಲ್ಲಿ ಪ್ರತಿಯೊಬ್ಬರಿಗೂ ಹಕ್ಕುಗಳನ್ನು ಒದಗಿಸಿಕೊಟ್ಟು ಜೀವನಕ್ಕೆ ಸ್ಫೂರ್ತಿದಾಯಕವಾದ ಬೃಹತ್ ಗ್ರಂಥ ಸಂವಿಧಾನವಾಗಿದೆ.


ಸಂವಿಧಾನ ಜಾರಿಗೆ ಬಂದು 75 ವರ್ಷಗಳ ಸುವರ್ಣ ಮಹೋತ್ಸವ ಆಚರಣೆ ಮಾಡುತ್ತಿದ್ದರೂ ಇಂದಿಗೂ ಸಹ ಸಂವಿಧಾನ ಎಂಬುದು ಒಂದು ವರ್ಗಕ್ಕೆ ಸೀಮಿತ ಎಂಬ ಪರಿಕಲ್ಪನೆ ಬೆಳೆದಿರುವುದು ಸಮಂಜಸವಲ್ಲ, ಒಂದು ಮಗುವಿನ ಜನನ ದಿಂದದ ಹಿಡಿದು ಮರಣದ ಅವರಿಗೆ ಸಂವಿಧಾನ ನಮ್ಮನ್ನು ರಕ್ಷಾ ಕವಚದಂತೆ ರಕ್ಷಣೆ ನೀಡುತ್ತದೆ. ಸಂವಿಧಾನದ ಬಗ್ಗೆ ಇರುವಂತಹ ಮನೋಭಾವನೆಗಳನ್ನು ಪ್ರತಿಯೊಬ್ಬರು ಆತ್ಮವಿಮರ್ಶೆನೆ ಮಾಡಿಕೊಳ್ಳುವುದು ಅತ್ಯಗತ್ಯ, ಮಾನವನ ಜೀವಕ್ಕೆ ಹೃದಯ ಮತ್ತು ಆತ್ಮ ಎಷ್ಟು ಮುಖ್ಯವೋ, ಜೀವನಕ್ಕೆ ಸಂವಿಧಾನ ಅಷ್ಟೇ ಮುಖ್ಯವಾಗಿರುತ್ತದೆ ಎಂದರು. ಹುನುಕುಂದ ಗ್ರಾಮ ಪಂಚಾಯಿತಿ ಅಧ್ಯಕ್ಷರು ಇದೆ ಸಂದರ್ಭದಲ್ಲಿ ವಿಶೇಷ ಚೇತನ ಮಕ್ಕಳಿಗೆ ಸಹಾಯಧನದ ಚೆಕ್ಕುಗಳನ್ನು ವಿತರಿಸಿದರು

ಕಾರ್ಯಕ್ರಮದ ವಿಶೇಷತೆ : ಕಲಾವಿದ ಯಲ್ಲಪ್ಪನವರ ನೇತೃತ್ವದಲ್ಲಿ ದೇಶಭಕ್ತಿ ಗೀತೆ ಹಾಗೂ ಅಂಬೇಡ್ಕರ್ ಅವರ ಬಗೆಗಿನ ಮನಮೋಹಕ ಗೀತೆಗಳು ಗಮನ ಸೆಳೆಯಿತು.


ಗ್ರಾಮದ ಪ್ರಮುಖ ಬೀದಿಗಳಲ್ಲಿ ತಳಿರು ತೋರಣ ಕಟ್ಟಿ ವಿಶೇಷ ದೀಪಾಲಂಕಾರ ಮಾಡಿ, ಸಂವಿಧಾನ ಜಾಗೃತಿ ರಥವನ್ನು ಸ್ವಾಗತಿಸಲಾಯಿತು. ಡಾ.ಬಿ. ಆ‌ರ್. ಅಂಬೇಡ್ಕರ್ ಭಾವಚಿತ್ರ, ಸಂವಿಧಾನ ಜಾಗೃತಿ ಬ್ಯಾನರ್, ನೀಲಿ ಧ್ವಜಗಳು ರಾರಾಜಿಸಿದವು ನೂರಾರು ಮಹಿಳೆಯರು ಪೂರ್ಣಕುಂಭ ಕಲಶಗಳನ್ನು ಹೊತ್ತು ಗ್ರಾಮದ ಪ್ರಮುಖ ಬೀದಿಗಳಲ್ಲಿ ಬಣ್ಣ ಬಣ್ಣದ ರಂಗೋಲಿ ಬಿಡಿಸಲಾಗಿತ್ತು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ನಾರಾಯಣಮ್ಮ, ಉಪಾಧ್ಯಕ್ಷರಾದ ರಾಮಚಂದ್ರಪ್ಪ, ಸದಸ್ಯರಾದ ವೆಂಕಟೇಶ್, ಅನಿತಾಮುನಿಯಪ್ಪ, ಸುರೇಶ್, ಕೃಷ್ಣಪ್ಪ,ಬಾಬುರೆಡ್ಡಿ, ಆಲಂಬಾಡಿ ಸುರೇಶ್, ಪದ್ಮಾವತಿ ನಾರಾಯಣಸ್ವಾಮಿ, ಯಶೋದಮ್ಮ, ಸೀತಾರಾಮಪ್ಪ, ಮಮತಾ, ಲಿಂಗಮ್ಮ, ಶೋಭಾ, ಅಮರೇಶ್ ಯುವ ಮುಖಂಡರಾದ ರಮೇಶ್, ದಲಿತ ಮುಖಂಡರಾದ ಚಿಕ್ಕನಾರಾಯಣ, ಹುಣಸನಹಳ್ಳಿ ವೆಂಕಟೇಶ್, ಜೀವಿಕ ರಾಮಚಂದ್ರಪ್ಪ, ಚಿಂಟು ಆರ್ಟ್ಸ್ ರಾಮಚಂದ್ರ, ಇನ್ನು ಮೊದಲಾದವರು ಭಾಗವಹಿಸಿದ್ದರು.

ವರದಿ: ವಿಷ್ಣು ಕೋಲಾರ

Leave a Reply

Your email address will not be published. Required fields are marked *

Scan the code