ಮುಂದಿನ ಲೋಕಸಭೆಯಲ್ಲಿ ಭೋವಿ ಸಮುದಾಯದ ಒಬ್ಬರನ್ನು ಸಂಸದರನ್ನಾಗಿಸುವ ನಿಟ್ಟಿನಲ್ಲಿ ಶ್ರಮಿಸಬೇಕು.
(KOLARA): ಬಂಗಾರಪೇಟೆ: ಪಟ್ಟಣದ ಪುರಸಭೆ ಆವರಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣ ಸಮಿತಿ ಮತ್ತು ಭೋವಿ ಸಮುದಾಯದ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಶ್ರೀ ಸಿದ್ದರಾಮೇಶ್ವರ ಜಯಂತಿ ಕಾರ್ಯಕ್ರಮದಲ್ಲಿ ಭೋವಿ ಸಮುದಾಯಕ್ಕೆ ಸಾಮಾಜಿಕ ಹಾಗೂ ರಾಜಕೀಯ ನ್ಯಾಯಸಿಗುವ ಸಾಧ್ಯತೆ ಇದ್ದು ಮುಂದಿನ ಲೋಕಸಭೆಯಲ್ಲಿ ಭೋವಿ ಸಮುದಾಯದ ಒಬ್ಬರನ್ನು ಸಂಸದರನ್ನಾಗಿಸುವ ನಿಟ್ಟಿನಲ್ಲಿ ಶ್ರಮಿಸಬೇಕು ಎಂದು ಶ್ರೀ ಇಮ್ಮಡಿ ಸಿದ್ದರಾಮಯ್ಯ ಭವಿಷ್ಯದ ಆಶೀರ್ವಚನ ನೀಡಿದರು. ಶಾಸಕ ಎಸ್.ಎನ್.ನಾರಾಯಣಸ್ವಾಮಿಯವರು ತನ್ನ ಅರ್ಹತೆಗೆ ಅನುಗುಣವಾಗಿ ಮೂರು ಬಾರಿ ಶಾಸಕರಾಗಿ ರಾಜ್ಯದ ಶಾಸಕಾಂಗ ಸಭೆಯನ್ನು ಪ್ರತಿನಿಧಿಸುತ್ತಿದ್ದಾರೆ, ಅದರಂತೆಯೇ ಈ ಭಾರಿ ಲೋಕಸಭಾ ಚುನಾವಣೆಯಲ್ಲಿ ಭೋವಿ ಸಮುದಾಯದ ಮಲ್ಲೇಶ್ ಬಾಬುರವರನ್ನು ಸಂಸದರನ್ನಾಗಿ ಲೋಕಸಭೆಗೆ ನಿಯೋಜಿಸಬೇಕೆಂದು ಶಾಸಕರನ್ನು ಒಳಗೊಂಡAತೆ ಸಭಿಕರಲ್ಲಿ ಮನವಿ ಮಾಡಿದರು.
ಅವರು ಮಾತನಾಡಿ, ಬಹುತೇಕರು ತನ್ನ ಪಾಪ ಕರ್ಮಗಳ ವಿಮೋಚನೆಗಾಗಿ ಯಂತ್ರ, ಮಂತ್ರ, ತಂತ್ರಗಳ ಮೊರೆ ಹೋಗುತ್ತಾರೆ ಅದರೊಟ್ಟಿಗೆ ದಾನ-ಧರ್ಮ ಮಾಡುವುದರಲ್ಲಿ ನಿರತರಾಗುತ್ತಾರೆ, ಆದರೆ ವಾಸ್ತವಿಕ ಸ್ಥಿತಿಯಲ್ಲಿ ಇದರಿಂದ ಪುಣ್ಯ ಲಭಿಸುವುದಿಲ್ಲ. ಸಿದ್ದರಾಮೇಶ್ವರರವರ ವಚನದಂತೆ ಪಾಪ ಮಾಡದಿರುವುದೇ ಪುಣ್ಯ, ಒಬ್ಬರ ಮನಸ್ಸನ್ನು ನೋಯಿಸಿ, ಒಬ್ಬರ ಮನೆಯನ್ನೂ ನಾಶ ಮಾಡಿ ಪವಿತ್ರ ಗಂಗೆಯಲ್ಲಿ ಮಿಂದೆದ್ದರೆ ಪ್ರಯೋಜನವಿಲ್ಲ, ಯಾವುದೇ ಪಾಪವನ್ನು ಮಾಡದೆ ಸರ್ವರ ಹಿತ ಬಯಸ್ಸುವುದೇ ಪುಣ್ಯ ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ ಕರ್ನಾಟಕ ಮೂಲಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮದ ಅಧ್ಯಕ್ಷ ಹಾಗೂ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಅವರು ಮಾತನಾಡಿ ರಾಜಕಾರಣ ಚುನಾವಣೆಗೆ ಸೀಮಿತವಾಗಬೇಕು ಅಭಿವೃದ್ಧಿಯಲ್ಲಿ ತಾರತಮ್ಯ ಸಮಂಜಸವಲ್ಲ, ಭೋವಿ ಸಮಾಜದ ಒಳತಿಗಾಗಿ ಭೋವಿ ನಿಗಮವನ್ನು ಸ್ಥಾಪಿಸಲಾಗಿದೆ ಆ ಮೂಲಕ ೨೪.೧ರಲ್ಲಿ ಅನೇಕ ಸೌಲಭ್ಯಗಳನ್ನು ಒದಗಿಸಲಾಗಿದೆ, ನಾನು ಶಾಸಕನಾಗಿ ೧೧ವರ್ಷದಲ್ಲಿ ಬಹುತೇಕ ಬೋವಿ ಸಮುದಾಯದವರನ್ನು ಜಿಲ್ಲಾಪಂಚಾಯಿತಿ, ತಾಲೂಕುಪಂಚಾಯಿತಿ, ಗ್ರಾಮಪಂಚಾಯಿತಿ, ಪುರಸಭೆ ಒಳಗೊಂಡAತೆ ಅನೇಕರನ್ನು ಸದಸ್ಯರನ್ನಾಗಿ ಮತ್ತು ಅಧ್ಯಕ್ಷರನ್ನಾಗಿ ಮಾಡಿದ್ದೇನೆ, ಹಾಗೂ ಸಾವಿರಾರು ಜನರಿಗೆ ನೇರ ಸಾಲಸೌಲಭ್ಯ, ಕೊಳವೆ ಬಾವಿಗಳನ್ನು ಮತ್ತು ನಿರಾಶ್ರಿತರಿಗೆ ನೂರಾರು ಎಕ್ಕರೆ ಜಮೀನುಗಳನ್ನು ಮಂಜೂರು ಮಾಡಿಸಿದ್ದೇನೆ, ಮತ್ತು ಸಮುದಾಯದ ಐಕ್ಯತೆಗಾಗಿ ೧೦ ಕೋಟಿ ಬೆಲೆಬಾಳುವ ನಿವೇಶನವನ್ನು ಭವನ ನಿರ್ಮಾಣಕ್ಕೆ ನೀಡಲಾಗಿದೆ ಎಂದರು.
ಮಾಜಿ ಮಾಜಿ ಶಾಸಕ ಎಂ.ನಾರಾಯಣಸ್ವಾಮಿ ಮಾತನಾಡಿ, ಸಮುದಾಯದ ಒಳಿತಿಗಾಗಿ ಸಂಘಟಿತರಾಗಿ ಇತರ ಸಮುದಾಯದವರೊಂದಿಗೆ ವಿರೋಧ ಬಾಸತ್ಯಜಿಸಿ ಸಾಮರಸ್ಯದೊಂದಿಗೆ ಜೀವಿಸಿದಾಗ ಬದುಕಿಗೆ ನೈಜ ಅರ್ಥ ಸಿಗುತ್ತದೆ, ಭೋವಿ ಸಮುದಾಯವನ್ನು ಸಶಕ್ತರನ್ನಾಗಿಸುವ ನಿಟ್ಟಿನಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ ಮತ್ತು ಸದಾನಂದ ಗೌಡರು ಭೋವಿ ನಿಗಮ ಮಂಡಳಿಯನ್ನು ಸ್ಥಾಪಿಸಿದರು, ಸದಾಶಿವ ಆಯೋಗ ಏಕ ಪಕ್ಷಿಯವಾಗಿದ್ದು ಸರ್ಕಾರ ಮತ್ತೊಮ್ಮೆ ಪರಿಶೀಲಿಸಬೇಕು, ಭೋವಿ ಸಮುದಾಯದ ವಿರುದ್ಧ ದೊಡ್ಡ ಪ್ರಮಾಣದಲ್ಲಿ ಷಡ್ಯಂತರ ನಡೆಯುತ್ತಿದ್ದು, ಎಸ್ಸಿ ಸಮುದಾಯದಿಂದ ಹೊರ ಹಾಕುವ ತಂತ್ರಗಾರಿಕೆ ನಡೆಯುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಮುಖಂಡರಾದ ಮಲ್ಲೇಶ್ಬಾಬು, ವಿ.ಶೇಷು, ಸಂಘದ ಜಿಲ್ಲಾ ಉಪಾಧ್ಯಕ್ಷ ರಾಮಚಂದ್ರಪ್ಪ, ಸಂಘದ ತಾಲೂಕು ಅಧ್ಯಕ್ಷ ಎಸ್ ನಾರಾಯಣ್, ಜೆಸಿಪಿ ನಾರಾಯಣಪ್ಪ, ಡಿಸಿಸಿ ಬ್ಯಾಂಕ್ ನಿರ್ದೇಶಕ ಗೋವಿಂದರಾಜು, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಮಹೇಶ್, ಕೆ ಚಂದ್ರಾರೆಡ್ಡಿ, ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಆದಿನಾರಾಯಣ ಕುಟ್ಟಿ, ಪುರಸಭಾ ಸದಸ್ಯ ವೈ.ಸುನಿಲ್ಕುಮಾರ್, ಬಿಂದು ಮಾಧವ, ಹುಣಸನಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ಶ್ರೀನಿವಾಸ್, ಪ್ರಸನ್ನ, ತಾಹಸೀಲ್ದಾರ್ ರಶ್ಮಿ, ಪುರಸಭೆ ಮುಖ್ಯಾಧಿಕಾರಿ ಮೀನಾಕ್ಷಿ, ಇಓ ರವಿಕುಮಾರ್, ಪೊಲೀಸ್ ನಿರೀಕ್ಷಕ ನಂಜಪ್ಪ, ಪಿಎಸ್ಐ ಸುನಿಲ್, ಶಿಕ್ಷಕರಾದ ಸಂಜೀವರಾಯಪ್ಪ, ಪುರಸಭೆ ಸಿಬ್ಬಂದಿ ಜಯರಾಮ್, ಹಾಗೂ ಎಲ್ಲಾ ಅಧಿಕಾರಿಗಳು ಸಮುದಾಯದ ಮುಖಂಡರು ಉಪಸ್ಥಿತರಿದ್ದರು.
ವರದಿ: ವಿಷ್ಣು ಕೋಲಾರ