ಅರ್ಧ ಗಂಟೆಗಳ ಕಾಲ ಜಗದ್ಗುರುಗಳ ಜೊತೆ ಚರ್ಚೆ ನಡೆಸುತ್ತಿರುವ ಈಶ್ವರಪ್ಪ
(CHIKKAMAGALURU): ಚಿಕ್ಕಮಗಳೂರು ಜಿಲ್ಲೆಯ N.R ಪುರ ತಾಲೂಕಿನ ಬಾಳೆಹೊನ್ನೂರು ರಂಭಾಪುರಿ ಪೀಠಕ್ಕೆ ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಈಶ್ವರಪ್ಪ ಸ್ಪರ್ಧೆ ಬೆನ್ನಲೇ ಬಾಳೆಹೊನ್ನೂರು ರಂಭಾಪುರಿ ಪೀಠಕ್ಕೆ ಈಶ್ವರಪ್ಪ ಭೇಟಿ ನೀಡಿದ್ದಾರೆ.
ವೀರಶೈವ ಲಿಂಗಾಯಿತರ ಪಂಚಪೀಠಗಳಲ್ಲಿ ಮೂಲಪೀಠ ವಾಗಿರುವ ಬಾಳೆಹೊನ್ನೂರು ರಂಭಾಪುರಿ ಪೀಠ. ರಂಭಾಪುರಿ ಪೀಠದ ವೀರ ಸೋಮೇಶ್ವರ ಜಗದ್ಗುರುಗಳ ಜೊತೆ ಚರ್ಚೆ, ಅರ್ಧ ಗಂಟೆಗಳ ಕಾಲ ಜಗದ್ಗುರುಗಳ ಜೊತೆ ಚರ್ಚೆ ನಡೆಸಿದ ಈಶ್ವರಪ್ಪ, ಚುನಾವಣಾ ಸ್ಫರ್ಧೆ ಬಗ್ಗೆ ಮಹತ್ವದ ಚರ್ಚೆ ನಡೆಸಿದ್ರ ಎಂದು ಕುತೂಹಲ ಮೂಡಿದೆ.
ರಂಭಾಪುರಿ ಮಠದಲ್ಲಿ ಬಿಜೆಪಿ ರೆಬಲ್ ನಾಯಕ ಈಶ್ವರಪ್ಪ ಹೇಳಿಕೆ. ಈ ಪವಿತ್ರ ಕ್ಷೇತ್ರದಲ್ಲಿ ಕೆಟ್ಟ ರಾಜಕಾರಣದ ಬಗ್ಗೆ ಮಾತನಾಡುವುದಿಲ್ಲ, ಪವಿತ್ರ ಸ್ಥಳಕ್ಕೆ ಬಂದಿದ್ದೇನೆ, ರಾಜಕಾರಣ ಏನೇ ಇದ್ದರೂ ಹೊರಗಡೆ, ಈ ಸ್ಥಳದಲ್ಲಿ ರಾಜಕಾರಣ ಬಗ್ಗೆ ಮಾತಾಡಿ ಆ ಪಾಪವನ್ನ ಹೊತ್ತುಕೊಳ್ಳಲು ನಾನು ಸಿದ್ಧನಿಲ್ಲ, ನನ್ನ ಚುನಾವಣಾ ಸ್ಪರ್ಧೆ 100ಕ್ಕೆ 100 ಖಚಿತ, ನಾನು ಯಾರ ಜೊತೆಯೂ ಯಾವ ಸಂಧಾನಕ್ಕೂ ಒಪ್ಪುವುದಿಲ್ಲ ಎಂದರು. ಯಡಿಯೂರಪ್ಪನವರ ಬಗ್ಗೆ ಏನೇ ಇದ್ದರೂ ಹೊರಗಡೆ ಮಾತನಾಡುತ್ತೇನೆ. ರಂಭಾಪುರಿ ಶ್ರೀಗಳ ಭೇಟಿ ಬಳಿಕ ಈಶ್ವರಪ್ಪ ಹೇಳಿಕೆ ನೀಡಿದರು. ಶ್ರೀ ರಂಭಾಪುರಿ ಪೀಠ ವೀರಭದ್ರೇಶ್ವರ ಸ್ವಾಮಿ ದರ್ಶನ ಪಡೆದು ಕ್ಷೇತ್ರದ ಉದ್ಭವ ಮೂರ್ತಿ ನಂದಿಗೆ ಕೈ ಮುಗಿದು ತೆರಳಿದ್ದಾರೆ.