ವಿಶೇಷವಾಗಿ ಮಹಾತ್ಮ ಗಾಂಧಿಜೀ ಹಾಗೂ ಲಾಲ್ ಬಹಾದ್ದೂರ್ ಶಾಸ್ತ್ರಿ ಜಯಂತಿ ಆಚರಣೆ.
(KOPPALA):- ಮಹಾತ್ಮ ಗಾಂಧಿಜೀ ಹಾಗೂ ಲಾಲ್ ಬಹಾದ್ದೂರ್ ಶಾಸ್ತ್ರಿ ಜಯಂತಿ ಆಚರಣೆ. ಬಳ್ಳಾರಿಯ ಪ್ರತಿಷ್ಠಿತ ವೀರಶೈವ ವಿದ್ಯಾವರ್ಧಕ ಸಂಘದ ಮುನಿರಾಬಾದ್ ನ ವಿಜಯನಗರ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಮಹಾತ್ಮ ಗಾಂಧಿಜೀ ಹಾಗೂ ಲಾಲ್ ಬಹಾದ್ದೂರ್ ಶಾಸ್ತ್ರಿಯವರ ಜನ್ಮಾ ದಿನಾಚರಣೆಯನ್ನು ಪ್ರಾಚಾರ್ಯರಾದ ಬಸವರಾಜ ಹಾಗೂ ಪ್ರೌಢಶಾಲಾ ವಿಭಾಗದ ಮುಖ್ಯೋಪಾಧ್ಯಾಯ ರಾದ ಶಿವಪ್ರಕಾಶ್ ಪೂಜೆಯನ್ನು ಮಾಡಿದ್ದರು, ಪೂಜೆಯನ್ನು ನೆರವೇರಿಸಿ ಮಾತನಾಡಿದ ಪ್ರಾಚಾರ್ಯರಾದ ಬಸವರಾಜ
ಮಹಾತ್ಮ ಗಾಂಧಿಜೀಯವರು ಭಾರತದ ಸ್ವಾತಂತ್ರ್ಯ ಹೋರಾಟಕ್ಕಾಗಿ ದೇಶಕ್ಕೆ ಶ್ರಮಿಸಿದರು ಎಂದರು,ಶಿವಪ್ರಕಾಶ್ ಮಾತನಾಡಿ ಲಾಲ್ ಬಹಾದ್ದೂರ್ ಶಾಸ್ತ್ರಿ ಸರಳ ಸಜ್ಜನಿಕೆಯ ವ್ಯಕ್ತಿತ್ವವನ್ನು ಹೊಂದಿರುವ ಇವರು ಭಾರತದ ಎರಡನೇ ಪ್ರಧಾನ ಮಂತ್ರಿ ದೇಶಕ್ಕೆ ಮಾದರಿ ಆಗಿದ್ದರು ಎಂದರು, ಈ ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಚನ್ನಬಸಪ್ಪ, ತಿರುಪತಿ ನಾಯಕ, ಅಂಬಳಿ ವೀರೇಂದ್ರ, ಪವಿತ್ರ, ಮಂಜುನಾಥ, ಪ್ರೌಢಶಾಲಾ ಶಿಕ್ಷಕರಾದ ವಿಜಯಕುಮಾರ್, ಎಲ್.ಡಿ ಶಿವಕುಮಾರ್, ಹುಲಿಗೇಮ್ಮ, ಲಲಿತಾ, ಪ್ರತಿಮಾ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು, ನಂತರ ಸ್ವಚ್ಚತಾ ಕಾರ್ಯವನ್ನು ಹಮ್ಮಿಕೊಳ್ಳಲಾಗಿತ್ತು,ಉಪನ್ಯಾಸಕ ಅಂಬಳಿ ವೀರೇಂದ್ರ ನಿರೂಪಿಸಿ, ವಂದಿಸಿದ್ದರು.
ವರದಿ:- ಸುನಿಲ್ ಕುಮಾರ್ ಎಂ NSD