News & Updatesಜಿಲ್ಲೆನ್ಯೂಸ್

ವಿಶೇಷವಾಗಿ ಮಹಾತ್ಮ ಗಾಂಧಿಜೀ ಹಾಗೂ ಲಾಲ್ ಬಹಾದ್ದೂರ್ ಶಾಸ್ತ್ರಿ ಜಯಂತಿ ಆಚರಣೆ.

ವಿಶೇಷವಾಗಿ ಮಹಾತ್ಮ ಗಾಂಧಿಜೀ ಹಾಗೂ ಲಾಲ್ ಬಹಾದ್ದೂರ್ ಶಾಸ್ತ್ರಿ ಜಯಂತಿ ಆಚರಣೆ.

(KOPPALA):- ಮಹಾತ್ಮ ಗಾಂಧಿಜೀ ಹಾಗೂ ಲಾಲ್ ಬಹಾದ್ದೂರ್ ಶಾಸ್ತ್ರಿ ಜಯಂತಿ ಆಚರಣೆ. ಬಳ್ಳಾರಿಯ ಪ್ರತಿಷ್ಠಿತ ವೀರಶೈವ ವಿದ್ಯಾವರ್ಧಕ ಸಂಘದ ಮುನಿರಾಬಾದ್ ನ ವಿಜಯನಗರ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಮಹಾತ್ಮ ಗಾಂಧಿಜೀ ಹಾಗೂ ಲಾಲ್ ಬಹಾದ್ದೂರ್ ಶಾಸ್ತ್ರಿಯವರ ಜನ್ಮಾ ದಿನಾಚರಣೆಯನ್ನು ಪ್ರಾಚಾರ್ಯರಾದ ಬಸವರಾಜ ಹಾಗೂ ಪ್ರೌಢಶಾಲಾ ವಿಭಾಗದ ಮುಖ್ಯೋಪಾಧ್ಯಾಯ ರಾದ ಶಿವಪ್ರಕಾಶ್ ಪೂಜೆಯನ್ನು ಮಾಡಿದ್ದರು, ಪೂಜೆಯನ್ನು ನೆರವೇರಿಸಿ ಮಾತನಾಡಿದ ಪ್ರಾಚಾರ್ಯರಾದ ಬಸವರಾಜ

ಜಾಹೀರಾತು/Advertisement

ಮಹಾತ್ಮ ಗಾಂಧಿಜೀಯವರು ಭಾರತದ ಸ್ವಾತಂತ್ರ್ಯ ಹೋರಾಟಕ್ಕಾಗಿ ದೇಶಕ್ಕೆ ಶ್ರಮಿಸಿದರು ಎಂದರು,ಶಿವಪ್ರಕಾಶ್ ಮಾತನಾಡಿ ಲಾಲ್ ಬಹಾದ್ದೂರ್ ಶಾಸ್ತ್ರಿ ಸರಳ ಸಜ್ಜನಿಕೆಯ ವ್ಯಕ್ತಿತ್ವವನ್ನು ಹೊಂದಿರುವ ಇವರು ಭಾರತದ ಎರಡನೇ ಪ್ರಧಾನ ಮಂತ್ರಿ ದೇಶಕ್ಕೆ ಮಾದರಿ ಆಗಿದ್ದರು ಎಂದರು, ಈ ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಚನ್ನಬಸಪ್ಪ, ತಿರುಪತಿ ನಾಯಕ, ಅಂಬಳಿ ವೀರೇಂದ್ರ, ಪವಿತ್ರ, ಮಂಜುನಾಥ, ಪ್ರೌಢಶಾಲಾ ಶಿಕ್ಷಕರಾದ ವಿಜಯಕುಮಾರ್, ಎಲ್.ಡಿ ಶಿವಕುಮಾರ್, ಹುಲಿಗೇಮ್ಮ, ಲಲಿತಾ, ಪ್ರತಿಮಾ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು, ನಂತರ ಸ್ವಚ್ಚತಾ ಕಾರ್ಯವನ್ನು ಹಮ್ಮಿಕೊಳ್ಳಲಾಗಿತ್ತು,ಉಪನ್ಯಾಸಕ ಅಂಬಳಿ ವೀರೇಂದ್ರ ನಿರೂಪಿಸಿ, ವಂದಿಸಿದ್ದರು.

ವರದಿ:- ಸುನಿಲ್ ಕುಮಾರ್ ಎಂ NSD

Leave a Reply

Your email address will not be published. Required fields are marked *

Scan the code