ಸರ್ವಾಧಿಕಾರಿ ಧೋರಣೆ ಖಂಡಿಸಿ ಕರ್ನಾಟಕ ರಿಪಬ್ಲಿಕನ್ ಸಂಘ ಸ್ಥಾಪನೆ:
(BENGALURU): ಸಾಮಾಜಿಕ, ಮಾನವೀಯ ಹಕ್ಕುಗಳಿಗಾಗಿ ನವೋತ್ಸಾಹದಲ್ಲಿ ಹೊಸ ಪರ್ವ ಉಗಮ. ಎಂದು ಕರ್ನಾಟಕ ರಿಪಬ್ಲಿಕನ್ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಚಿಕ್ಕ ನಾರಾಯಣ ಅಭಿಮತ
ಬೆಂಗಳೂರು : ನಗರದ ಶಿವಾನಂದ ವೃತದ ಬಳಿಯಿರುವ ಗಾಂಧಿ ಭವನದಲ್ಲಿ ಕರ್ನಾಟಕ ರಿಪಬ್ಲಿಕನ್ ಸಂಘ ಆಯೋಜಿಸಿದ್ದ ರಾಜ್ಯಮಟ್ಟದ ಸಭೆ ಹಾಗೂ ಪದಾಧಿಕಾರಿಗಳ ಆಯ್ಕೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು
ಕರ್ನಾಟಕ ರಿಪಬ್ಲಿಕನ್ ಸೇನೆ ಪಕ್ಷದ ನಿಕಟಪೂರ್ವ ರಾಜ್ಯಾಧ್ಯಕ್ಷರಾದ ದಿವಂಗತ ಜಿಗಣಿ ಶಂಕರ್ ರವರ ದೈವಾದೀನರಾದ ನಂತರ ಕರ್ನಾಟಕ ರಿಪಬ್ಲಿಕನ್ ಸೇನೆ ರಾಜ್ಯದಲ್ಲಿ ಆನಾಥವಾಗಿದೆ, ಪಕ್ಷವನ್ನು ಸಂಘಟಿಸಿ ರಾಜ್ಯದಲ್ಲಿ ಬಲಿಷ್ಠ ಹಾಗೂ ಸದೃಢವಾಗಿ ಬೆಳೆಸಬೇಕು ಎಂಬ ಸದುದ್ದೇಶದಿಂದ ಜಿಗಣಿ ಶಂಕರ್ ರವರ ಮಗನಾದ ಪ್ರಜ್ವಲ್ ರವರನ್ನು ತಾತ್ಕಾಲಿಕವಾಗಿ ರಾಜ್ಯಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿತ್ತು, ವಿಪರ್ಯಾಸ ಅನುಭವದ ಕೊರತೆಯಿಂದಾಗಿ ಪಕ್ಷ ಅವತಿಯ ಹಂತವನ್ನು ತಲುಪಿದೆ, ಹಾಗೂ ಏಕಪಕ್ಷೀಯ ನಿರ್ಧಾರಕ್ಕೆ ಬೇಸತ್ತು ಹಲವು ಮುಖಂಡರು ಹೊರಬಂದು ನೂತನವಾಗಿ ಕರ್ನಾಟಕ ರಿಪಬ್ಲಿಕನ್ ಸಂಘ ಸ್ಥಾಪಿಸಲಾಗಿದೆ, ಎಂದರು.
ನಂತರ ಮಾತನಾಡಿದ ಕರ್ನಾಟಕ ರಿಪಬ್ಲಿಕನ್ ಸಂಘದ ನೂತನ ರಾಜ್ಯಾಧ್ಯಕ್ಷ ಬೆಲ್ತೂರು ವೆಂಕಟೇಶ್ ಮಾತನಾಡಿ ಪ್ರಜ್ವಲ್ ರವರ ಸರ್ವಾಧಿಕಾರಿ ಧೋರಣೆಯಿಂದಾಗಿ ರಾಜ್ಯದ ಬಹುತೇಕ ಜಿಲ್ಲಾಧ್ಯಕ್ಷರು, ಮುಖಂಡರು ಪಕ್ಷದಿಂದ ಹೊರಬಂದು ನಮ್ಮ ಹಕ್ಕುಗಳಿಗಿಗಿ ಸಮಾಜದ ಒಳತಿಗಾಗಿ ನೂತನ ಸಂಘ ಸ್ಥಾಪನೆ ಅನಿವಾರ್ಯವಾಗಿದೆ ಈ ಹಿನ್ನೆಲೆಯಲ್ಲಿ ನೂತನವಾಗಿ ಕರ್ನಾಟಕ ರಿಪಬ್ಲಿಕನ್ ಸಂಘ ಸ್ಥಾಪಿಸಲಾಗಿದೆ ಎಂದರು.
ಪ್ರಜಾಪ್ರಭುತ್ವ ತಲಹದಿಯ ಆಧಾರದ ಮೇಲೆ ಕಾರ್ಯಪ್ರವೃತವಾಗಬೇಕಾದ ಪಕ್ಷದಲ್ಲಿ ಸರ್ವಾಧಿಕಾರ ನಿರಂಕುಶ ಪ್ರಭುತ್ವ ತಾಂಡವಾಡುತ್ತಿದ್ದು ಯಾವುದೇ ಸಭೆ ಸಮಾರಂಭಗಳಲ್ಲಿ ಹಿರಿಯ ನಾಯಕರನ್ನು ಮುಖಂಡರನ್ನು ಕಡೆಗಣಿಸಿ ದಮನ ಮಾಡಲು ಹೊರಟ್ಟಿದ್ದಾರೆ, ಹಾಗೂ ಮುಖಂಡರ ಘನತೆಗೆ ಧಕ್ಕೆ ತಂದು ಕಾರಣವಿಲ್ಲದೆ ಅನಗತ್ಯವಾಗಿ ನಾಯಕರನ್ನು ಉಚ್ಛಾಟನೆ ಮಾಡಲಾಗುತ್ತಿದೆ, ಪಕ್ಷಕ್ಕಾಗಿ ತಲ ಮಟ್ಟದಿಂದ ಕಟ್ಟಿ ಬೆಳೆಸಿದ ನಾಯಕರನ್ನು ಮೂಳೆ ಗುಂಪು ಮಾಡಿ ದಮನ ಮಾಡಲು ಹೊರಟ್ಟಿದ್ದಾರೆ ಇದರಿಂದ ನೂತನ ಸಂಘದ ಅವಶ್ಯಕತೆ ಇದೆ ಎಂದರು..
ಈ ಸಂದರ್ಭದಲ್ಲಿ ರಾಜ್ಯಾಧ್ಯಕ್ಷರಾಗಿ ಬೆಳ್ತೂರು ವೆಂಕಟೇಶ್, ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಜಿ ಚಿಕ್ಕನಾರಾಯಣ, ರಾಜ್ಯ ಯುವ ಘಟಕ ಅಧ್ಯಕ್ಷರಾಗಿ ಚಿಂಟು ರಾಮಚಂದ್ರ, ರಾಜ್ಯ ಮಹಿಳಾ ಘಟಕದ ಪ್ರಧಾನ ಕಾರ್ಯದರ್ಶಿಯನ್ನಾಗಿ ಅಶ್ವಿನಿ ರಾಜ್, ಕಾರ್ಮಿಕ ಘಟಕದ ಅಧ್ಯಕ್ಷರಾಗಿ ಸೊನ್ನಪ್ಪ, ಖಜಾಂಚಿಯಾಗಿ ಕುಮಾರ್, ಬೆಂಗಳೂರು ನಗರದ ಜಿಲ್ಲಾಧ್ಯಕ್ಷರಾಗಿ ಶಿರೀಶ ಕೋಲಾರ ಜಿಲ್ಲಾ ಕಾರ್ಮಿಕ ಘಟಕದ ಅಧ್ಯಕ್ಷರಾಗಿ ಅಂಬರೀಶ್, ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಶ್ರೀನಾಥ್, ಬಂಗಾರಪೇಟೆ ತಾಲೂಕು ಅಧ್ಯಕ್ಷರಾಗಿ ತಿಪ್ಪಯ್ಯ ರವರನ್ನು ನೇಮಕ ಮಾಡಲಾಯಿತು.
ವರದಿ: ವಿಷ್ಣು ಕೋಲಾರ