ಶಾಲಾ ವೇದಿಕೆಗಳನ್ನು ಮಕ್ಕಳು ಬಳಸಿಕೊಳ್ಳುವ ರೀತಿಯನ್ನು ಪ್ರತಿ ಪೋಷಕರೂ ಗಮನಹರಿಸಬೇಕು
(SHIVAMOGA): ಸಾಗರ: ಸ್ಪರ್ಧಾತ್ಮಕ ಯುಗದ ಅಗತ್ಯ ಪೈಪೋಟಿಗೆ ಬೇಕಿರುವ ಆತ್ಮಸ್ಥೈರ್ಯ ನೀಡುವ ಶಾಲಾ ವೇದಿಕೆಗಳನ್ನು ಮಕ್ಕಳು ಬಳಸಿಕೊಳ್ಳುವ ರೀತಿಯನ್ನು ಪ್ರತಿ ಪೋಷಕರೂ ಗಮನಹರಿಸಬೇಕು ಎಂದು ಎಡಜಿಗಳೆಮನೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ನಾಗವೇಣಿ ಪ್ರವೀಣ್ ಹೇಳಿದರು.
ತಾಲೂಕಿನ ಎಡಜಿಗಳೇಮನೆಯ ಇಕ್ಕೇರಿ ವಿದ್ಯಾಸಂಸ್ಥೆಯ ಸದ್ಗುರು ಸ್ಕೂಲ್ ಆಪ್ ವಿಷನ್ನ ಆಶ್ರಯದಲ್ಲಿ ಶಿಕ್ಷಣ ಇಲಾಖೆ ಮಂಗಳವಾರ ಏರ್ಪಡಿಸಿದ್ದ ಎಡಜಿಗಳೆಮನೆ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸೋಲು ಗೆಲುವು ವಿಷಯಕ್ಕಿಂತ ಸ್ಪರ್ಧೆಗಳಲ್ಲಿ ಭಾಗವಹಿಸುವ ಮೂಲಕ ಗಳಿಸಬಹುದಾದ ಅನುಭವವೇ ಮುಖ್ಯ ಎನ್ನುವುನ್ನು ಎಂದೂ ಮರೆಯಬಾರದು. ಗೆಲುವು ಮಾತ್ರ ಸ್ಪರ್ಧೆಯ ಉದ್ದೇಶವಾಗಿರಬಾರದು. ಚಿಕ್ಕ ಮಕ್ಕಳು ವೇದಿಕೆಯಲ್ಲಿ ಯಾವ ಅಭಿನಯ ಮಾಡಿದರೂ ಅದು ಚೆಂದವೆ. ಅದನ್ನು ಎಲ್ಲರೂ ನೋಡಿ ಆನಂದಿಸಬೇಕು ಎಂದರು.
ವಿದ್ಯಾಸಂಸ್ಥೆಯ ಅಧ್ಯಕ್ಷ ಎಸ್.ಟಿ. ರತ್ನಾಕರ್ ಅಧ್ಯಕ್ಷತೆ ವಹಿಸಿದ್ದರು. ಇದೇ ವೇಳೆ ನಿರ್ಗಮಿತ ಸಿಆರ್ಪಿ ನಾಗರಾಜ್ರವರನ್ನು ಸನ್ಮಾನಿಸಲಾಯಿತು. ಬಿಆರ್ಪಿ ನಂದೀಶ್, ಶಿಕ್ಷಕರ ಸಂಘದ ಸಂಘಟನಾ ಕಾರ್ಯದರ್ಶಿ ಎಂ.ವೈ. ಮೂರ್ತಿ, ಸತ್ಯನಾರಾಯಣ ಶಿರವಂತೆ, ಮಾತನಾಡಿದರು. ಬಿಆರ್ಪಿ ಮಲ್ಲಿಕಾರ್ಜುನ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಕಾರ್ಯದರ್ಶಿ ಕೆ. ಜಗನ್ನಾಥ್, ಸಿಆರ್ಪಿ ರವಿ, ಜೆ.ಆರ್. ವೆಂಕಟೇಶ್, ಮುಖ್ಯಶಿಕ್ಷಕ ರಜನೀಶ್, ಮೇಖಲಾ ಎಂ. ಭಟ್, ಶ್ರೀಕಾಂತ, ಅಂಬಿಕಾ, ಸೌಮ್ಯ ಮತ್ತು ಮಧುಶ್ರೀ ಇದ್ದರು.
ವರದಿ: ರಾಘವೇಂದ್ರ ತಾಳಗುಪ್ಪ