ಜಿಲ್ಲೆನ್ಯೂಸ್

ತಾಳ್ಮೆ, ಆತ್ಮಸ್ಥೈರ್ಯ ಮತ್ತು ಧೈರ್ಯ ಈ ಮೂರು ಪದಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವುದರಿಂದ ಪ್ರತಿಯೊಬ್ಬರು ಸ್ವಾಮಿ ವಿವೇಕಾನಂದ ರೀತಿಯಲ್ಲಿ ಬದುಕಬಹು.

ತಾಳ್ಮೆ, ಆತ್ಮಸ್ಥೈರ್ಯ ಮತ್ತು ಧೈರ್ಯ ಈ ಮೂರು ಪದಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವುದರಿಂದ ಪ್ರತಿಯೊಬ್ಬರು ಸ್ವಾಮಿ ವಿವೇಕಾನಂದ ರೀತಿಯಲ್ಲಿ ಬದುಕಬಹು.

(KOLARA): ಬಂಗಾರಪೇಟೆ: ತಾಳ್ಮೆ, ಆತ್ಮಸ್ಥೈರ್ಯ ಮತ್ತು ಧೈರ್ಯ ಈ ಮೂರು ಪದಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವುದರಿಂದ ಪ್ರತಿಯೊಬ್ಬರು ಸ್ವಾಮಿ ವಿವೇಕಾನಂದ ರೀತಿಯಲ್ಲಿ ಬದುಕಬಹುದೆಂದು ಕನ್ನಡ ಸಂಘದ ಅಧ್ಯಕ್ಷ ಡಾ|| ಪಲ್ಲವಿ ಮಣಿ ಮಾತನಾಡಿದರು.
ಪಟ್ಟಣದ ಕುಪ್ಪುಸ್ವಾಮಿ ಮೊದಲಿಯರ್ ಬಡಾವಣೆಯಲ್ಲಿ ಮಾಜಿ ಪುರಸಭಾ ಸದಸ್ಯ ವೈ.ವಿ.ರಮೇಶ್ ನೇತೃತ್ವದಲ್ಲಿ ಮಾರ್ಸ್ ಡಿಜಿಟಲ್ ಗ್ಲೋಬಲ್ ಸ್ಕೂಲ್ ಮಕ್ಕಳ ಸಹಯೋಗದೊಂದಿಗೆ ಸ್ವಾಮಿ ವಿವೇಕಾನಂದರ 161ನೇ ಜನ್ಮದಿನಾಚರಣೆಯನ್ನು ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮವನ್ನುದ್ದೆಶಿಸಿ ಮಾತನಾಡಿದ ಅವರು ಮನುಷ್ಯನ ಜೀವನದಲ್ಲಿ ತಾಳ್ಮೆಗಿಂತ ತಪಸ್ಸಿಲ್ಲ, ತಾಳಿದವನು ಬಾಳಿಯನು ಎನ್ನುವ ಗಾಧೆ ಮಾತಿನ ಪ್ರಕಾರವಾಗಿ ಪ್ರತಿಯೊಬ್ಬರು ವಿವೇಕಾನಂದರ ರೀತಿ ತಾಳ್ಮೆಯನ್ನು ದಿನನಿತ್ಯದ ಬದುಕಿನಲ್ಲಿ ರೂಡಿಸಿಕೊಳ್ಳಬೇಕು ಎಜುಕೇಶನ್ ಈಸ್ ಟು ಮೈಂಡ್ ಎಕ್ಸ್ಪ್ರೆಸ್ ಈಸ್ ಟು ಬಾಡಿ ಎಲ್ಲರೂ ವಿವೇಕಾನಂದರ ಆದರ್ಶಗಳನ್ನು ಅಳವಡಿಸಿಕೊಳ್ಳಬೇಕೆಂದು ಈ ಸಂಧರ್ಭದಲ್ಲಿ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದರು.
ಇದೇ ಸಂಧರ್ಭದಲ್ಲಿ ಪುರಸಭಾ ಮುಖ್ಯಾಧಿಕಾರಿ ಮೀನಾಕ್ಷಿ ಮಾತನಾಡಿ ಸ್ವಾಮಿ ವಿವೇಕಾನಂದರವರ ಜನ್ಮದಿನವನ್ನು ರಾಷ್ಟ್ರೀಯ ಯುವ ದಿನವನ್ನಾಗಿ ಆಚರಿಸುತ್ತೇವೆ. ದೇಶದ ಪ್ರತಿಯೊಬ್ಬ ಪ್ರಜೆಯು ಅವರ ಆದರ್ಶ-ತತ್ವಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುತ್ತಾ ದೇಶಕ್ಕೆ ವಿವೇಕಾನಂದರ ರೀತಿ ಹೆಸರು ತರಬೇಕೆಂದು ಈ ಸಂಧರ್ಭದಲ್ಲಿ ತಿಳಿಸಿದರು.


ಈ ಸಂಧರ್ಭದಲ್ಲಿ ಕಾರ್ಯಕ್ರಮದ ಆಯೋಜಕ ಮತ್ತು ಮಾಜಿ ಪುರಸಭಾ ಸದಸ್ಯ ವೈ.ವಿ ರಮೇಶ್ ಮಾತನಾಡಿ, ನಾನು ಪುರಸಭಾ ಸದಸ್ಯನಾಗಿದ್ದ ಸಂಧರ್ಭದಲ್ಲಿ ಸ್ವಾಮಿ ವಿವೇಕಾನಂದರ ಆದರ್ಶ-ತತ್ವಗಳು ಎಲ್ಲರಲ್ಲೂ ಬೆಳೆಯಬೇಕು, ಅವರ ತಾಳ್ಮೆ ಮತ್ತು ಏಳಿ ಎದ್ದೇಳಿ ಗುರಿ ಮುಟ್ಟುವ ತನಕ ಹೋರಾಡಿ ಎನ್ನುವ ಮಾತುಗಳು ಎಲ್ಲಾ ಯುವಕರಿಗೂ ಸ್ಪೂರ್ತಿಯಾಗಬೇಕೆಂದು ತಿಳಿದು ಈ ಸ್ಥಳದಲ್ಲಿ ಸ್ವಾಮಿ ವಿವೇಕಾನಂದರ ಪ್ರತಿಮೆಯನ್ನು ಸ್ಥಾಪಿಸಿದೆವು. ಅಂದಿನಿoದ ಇಲ್ಲಿಯವರೆಗೂ ಪ್ರತಿ ವರ್ಷವೂ ಸ್ವಾಮಿ ವಿವೇಕಾನಂದರ ಜನ್ಮದಿನಾಚರಣೆಯನ್ನು ಆಚರಿಸುತ್ತಿದ್ದೇವೆಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಮಾರ್ಸ್ ಡಿಜಿಟಲ್ ಗ್ಲೋಬಲ್ ಸ್ಕೂಲ್‌ನ ವಿದ್ಯಾರ್ಥಿಗಳಾದ ರಿಷಿ.ಎಂ, ವಿಕಾಸ್ ಕಾಂತ್, ದೀಕ್ಷಾ ಮತ್ತು ಆಕಾಶ ವಿದ್ಯಾರ್ಥಿಗಳು ಸ್ವಾಮಿ ವಿವೇಕಾನಂದರ ಜೀವನ ಚರಿತ್ರೆಯನ್ನು ಸ್ವ-ವಿವರವಾಗಿ ವಿವರಿಸಿ ಜನಮೆಚ್ಚುಗೆ ಪಡೆದರು.
ಈ ಕಾರ್ಯಕ್ರಮದಲ್ಲಿ ಮಾಜಿ ಪುರಸಭಾ ಸದಸ್ಯ ರಂಗರಾಮಯ್ಯ ಮಾತನಾಡಿದರು.


ಈ ಸಂಧರ್ಭದಲ್ಲಿ ಪ್ರೆಂಡ್ಸ್ ಚಾರಿಟ್ರಬಲ್ ಟ್ರಸ್ಟ್ನ ಅದ್ಯಕ್ಷ ಮಧುಸೂದನ್, ಆರ್.ಭಾಗ್ಯಲಕ್ಷ್ಮಿ, ವೆಂಕಟ್‌ಕೃಷ್ಣಯ್ಯ, ಎಸ್.ಚರಿತ, ಸತ್ಯನಾರಾಯಣ, ಶ್ರೀಹರಿ, ವಿಘ್ನೇಶ್, ವಿಕ್ರಮ್, ಪ್ರಸಾಧ್, ಮಾರ್ಸ್ ಡಿಜಿಟಲ್ ಗ್ಲೋಬಲ್ ಸ್ಕೂಲ್‌ನ ಕಾರ್ಯದರ್ಶಿ ಟೈಗರ್ ಮಂಜುನಾಥ್, ಶಿಕ್ಷಕಿಯರಾದ ಪ್ರಸನ್ನ ಕುಮಾರಿ, ಭಾನುಪ್ರಿಯಾ, ಸಂಗೀತ ಮತ್ತು ಶಾಲೆಯ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದರು.

ವರದಿ: ವಿಷ್ಣು ಕೋಲಾರ

Leave a Reply

Your email address will not be published. Required fields are marked *

Scan the code