ಪ್ರತಿಯೊಬ್ಬರ ಜೀವನಕ್ಕೆ ಒಂದಷ್ಟು ಭೂಮಿ ಅವಶ್ಯಕತೆ ಇದೆ
…ಡಿ.ಮಂಜುನಾಥ
(SHIVAMOGA): ಸಾಗರದ ರಾಮನಗರ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ದತ್ತಿ ಕಾರ್ಯಕ್ರಮ
ಸಾಗರ: ಸಾಮಾಜಿಕ ಸುಧಾರಣೆಗೆ ಸಾಹಿತ್ಯ ಅತಿ ಮುಖ್ಯವಾಗಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾದ ಡಿ.ಮಂಜುನಾಥ ಹೇಳಿದರು.
ಅವರು ಇಲ್ಲಿಗೆ ಸಮೀಪದ ರಾಮನಗರದ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಇವರು ಆಯೋಜಿಸಿದ್ದ ದತ್ತಿ ಕಾರ್ಯಕ್ರಮದಲ್ಲಿ ಕಾಗೋಡು ಹೋರಾಟ ಒಂದು ಚಿಂತನೆ ದತ್ತಿ,ಹಾಗೂ ಅಬ್ಬಾಸ ಅಬ್ಬಲಗೆರೆ ದತ್ತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ನಮ್ಮ ಹಿರಿಯರ ಹೋರಾಟ ಪರಿಶ್ರಮ ಅದೆಷ್ಟು ಇತ್ತು ಎನ್ನುವುದನ್ನು ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ, ಸ್ವಾತಂತ್ರ್ಯ ನಂತರದಲ್ಲಿ ನಡೆದ ಕಾಗೋಡು ಹೋರಾಟ ಭೂಮಿಗಾಗಿ ನಡೆದ ಚಳುವಳಿ ಅತ್ಯಂತ ಮುಖ್ಯವಾದ ಘಟ್ಟ ವಾಗಿತ್ತು ಗಣಪತಿಯಪ್ಪ ನವರು ಮುಂಚೂಣಿಯಲ್ಲಿ ನಿಂತು ಹೋರಾಟವನ್ನು ನಡೆಸುತ್ತಾರೆ ಇಂತಹ ಹೋರಾಟಗಾರರ ನೆಲೆಯಿದು.ಇಂದು ಭೂಸುಧಾರಣೆಯಾಗಿ 50ವರ್ಷಗಳು ಸಂದಿವೆ ನಮ್ಮ ಈ ಸುದೀರ್ಘ ಹೋರಾಟ ನಿಮಗೆಲ್ಲರಿಗೂ ಸ್ಪೂರ್ತಿ ಆಗಿದೆ. ಇನ್ನೂ ವಿಶೇಷವೆಂದರೆ ಭಾವೈಕ್ಯತೆಯನ್ನು ಸಾಹಿತ್ಯದ ಮೂಲಕ ಸಾರಿದ ಅಬ್ಬಾಸ್ ಅಬ್ಬಲಗೆರೆ ಅವರು ಸಾಹಿತ್ಯಕ್ಕೆ ನೀಡಿದ ಕೊಡುಗೆ ಅಪಾರ ಓದಿನ ಜೊತೆಗೆ ನಮ್ಮ ಸಾಂಸ್ಕೃತಿಕ ಅಭಿರುಚಿಯನ್ನು ಬೆಳೆಸಿಕೊಳ್ಳಬೇಕು ಎಂದರು.
ಭೂಮಿ ಈ ಹೊತ್ತಿನ ಆತಂಕ ಕುರಿತು ಸಾಮಾಜಿಕ ಚಿಂತಕ ಶಿವಾನಂದ ಕುಗ್ವೆ ಮಾತನಾಡಿ ಇಂದು ಭೂಮಿ ಮಾರಾಟದ ಸರಕಾಗುತ್ತಿದೆ ಇದರಿಂದ ಭೂಮಿ ಉಳ್ಳವರ ಪಾಲಾಗುತ್ತಿದೆ,ತುಂಡು ಭೂಮಿಗಾಗಿ ನಡೆದ ಹೋರಾಟ ಕಾಗೋಡು ಚಳುವಳಿ ಅತ್ಯಂತ ಮುಖ್ಯವಾದ ಹಂತವಾಗಿತ್ತು,ಭೂಮಿ ಕೆಲವರ ಪಾಲಾಗುತ್ತಿರುವುದನ್ನು ತಪ್ಪಿಸುವ ನಿಟ್ಟಿನಲ್ಲಿ ಚಳುವಳಿಗಳು ನಡೆದವು, ಸರ್ವರಿಗೂ ಸಮಪಾಲು ಎನ್ನುವ ಆಶಯದೊಂದಿಗೆ ನಡೆದ ಕಾಗೋಡು ಹೋರಾಟದಲ್ಲಿ ಗಣಪತಿಯಪ್ಪ ಅಂತಹ ಅನೇಕರು ಭಾಗವಹಿಸಿದ್ದರು ಅಂದು ಭೂಮಿ ಎನ್ನುವುದು ಭಾವನಾತ್ಮಕತೆಯನ್ನು ಮೂಡಿಸಿತ್ತು ಆದರೆ ಇಂದು ಭೂಮಿ ಉಳ್ಳವರ ಪಾಲಾಗುತ್ತಿದೆ, ಮಾರಾಟದ ಸರಕಾಗುತ್ತಿದೆ ಎನ್ನುವುದು ಅತ್ಯಂತ ಆತಂಕದ ವಿಷಯವಾಗಿದೆ, ನಮ್ಮ ಬದುಕಿಗೆ ಬೇಕಾದ ಆಹಾರ ಬೆಳೆಯುವುದು ಬಿಟ್ಟು ಕೈಗಾರಿಕಕರಣವಾತ್ತಿದೆ ಇದರಿಂದ ಜೀವನ ನಿರ್ವಹಣೆ ದುಸ್ತರವಾಗುತ್ತದೆ.ನಮಗೆ ಭೂಮಿ ಬೇಕಾಗಿದೆ ಸಾವಿರಾರು ಎಕರೆ ಹೊಂದಿರುವವರ ಸಂಖ್ಯೆ ಹೆಚ್ಚುತ್ತಿದೆ ಇದರಿಂದ ವಾಸಕ್ಕೆ ಬೇಕಾದ ಅಂಗೈ ಅಗಲ ಜಾಗ ಸಿಗದಂತಾಗುತ್ತಿದೆ ಇಂದಿನ ಯುವ ಪೀಳಿಗೆ ಇಂತಹ ಆತಂಕಗಳನ್ನು ಅರ್ಥ ಮಾಡಿಕೊಳ್ಳಬೇಕಾಗಿದೆ ಎಂದರು.
ಭಾವೈಕ್ಯತೆಗೆ ಸಾಹಿತ್ಯದ ಕೊಡುಗೆ ಬಗ್ಗೆ ಸಾಹಿತಿ ಡಿ.ಹೆಚ್.ಸೂರ್ಯಪ್ರಕಾಶ್ ಮಾತನಾಡಿ ಸಾಹಿತ್ಯ ಸಂಸ್ಕಾರವನ್ನು ಕಲಿಸುತ್ತದೆ, ಮನಸುಗಳನ್ನು ಬೆಸೆಯುತ್ತದೆ, ಭಾವೈಕ್ಯತೆಯನ್ನು ಮೂಡಿಸುವ ಶಕ್ತಿ ಇದೆ ಎಂದಾದರೆ ಅದು ಸಾಹಿತ್ಯಕ್ಕೆ ಇದೆ, ಅದರಲ್ಲೂ ಮುಖ್ಯವಾಗಿ ವಚನಸಾಹಿತ್ಯ, ದಾಸ ಸಾಹಿತ್ಯ, ಆಧುನಿಕ ಸಾಹಿತ್ಯ, ದಲಿತ ಸಾಹಿತ್ಯ ಮುಖ್ಯವಾಗಿ ಗುರುತಿಸಿಕೊಂಡಿದ್ದು ನಮ್ಮ ಬದುಕನ್ನು ಸದಾ ಸ್ಪೂರ್ತಿ ಮಾಡುವಲ್ಲಿ ಸಾಹಿತ್ಯ ಅತಿ ಮುಖ್ಯವಾಗಿದೆ ಎಂದರು.
ಕಾಲೇಜಿನ ಪ್ರಾಂಶುಪಾಲರಾದ ಬಿ.ಟಿ.ಶೇಖರಪ್ಪ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು, ವೇದಿಕೆಯಲ್ಲಿ ತಾಲೂಕು ಕಸಾಪ ಅಧ್ಯಕ್ಷರಾದ ವಿ.ಟಿ.ಸ್ವಾಮಿ, ಸಂಸ್ಥೆಯ ಆಡಳಿತಾಧಿಕಾರಿ ರಘು ವಿ.ಎಂ, ಕಜಾಪ ಪ್ರಧಾನ ಕಾರ್ಯದರ್ಶಿ ಉಮೇಶ್ ಹಿರೇನೆಲ್ಲೂರು, ಸಾಂಸ್ಕೃತಿಕ ವೇದಿಕೆ ಅಧ್ಯಕ್ಷೆ ಕಸ್ತೂರಿ ಸಾಗರ, ನೌಕರರ ಸಂಘದ ಸಂಘಟನಾ ಕಾರ್ಯದರ್ಶಿ ಅಣ್ಣಪ್ಪ, ಪ್ರಭಾರ ತರಬೇತಿ ಅಧಿಕಾರಿ ರಮೇಶ್ ಮಣ್ಣೂರು, ಡಾ.ಪ್ರಸನ್ನ, ಮೊದಲಾದವರು ಉಪಸ್ಥಿತರಿದ್ದರು ಆರಂಭದಲ್ಲಿ ಕಾಲೇಜಿನ ಅನಿತಾ ಮತ್ತು ಸಂಗಡಿಗರು ಪ್ರಾರ್ಥಿಸಿದರು ಶಶಿಧರ ಸ್ವಾಗತಿಸಿ ರಮೇಶ್ ಎಲ್.ಬಿ ವಂದಿಸಿ ಭಾಗೀರಥಿ ಎನ್.ಎಂ ಕಾರ್ಯಕ್ರಮ ನಿರೂಪಿಸಿದರು.
ಈ ಸಂದರ್ಭದಲ್ಲಿ ವಸಂತ ಕುಗ್ವೆ ಹಾಗೂ ಲಕ್ಷ್ಮಣ್ ಕುಗ್ವೆ ಹೋರಾಟ ಗೀತೆಗಳನ್ನು ಹಾಡಿದರು.
ವರದಿ: ರಾಘವೇಂದ್ರ ತಾಳಗುಪ್ಪ