ಸದೃಢ ಭಾರತ ಸಂಕಲ್ಪಕ್ಕೆ ವಿಕಸಿತ ಭಾರತ ಸಂಕಲ್ಪ ಯಾತ್ರೆ: ಕಪಾಲಿ ಶಂಕರ್
(KOLARA): ಬಂಗಾರಪೇಟೆ: ದೇಶದ ಜನರ ಆರ್ಥಿಕ ಸ್ಥಿತಿ ಸುಧಾರಿಸುವ ಸದುದ್ದೇಶ ಹಾಗೂ ಭಾರತ ಆರ್ಥಿಕವಾಗಿ ಸದೃಢವಾಗಬೇಕೆಂಬ ಸಂಕಲ್ಪದೊಂದಿಗೆ ಹೆಮ್ಮೆಯ ಪ್ರಧಾನಿ ಮೋದಿ ಅವರು ‘ವಿಕಸಿತ ಭಾರತ ಸಂಕಲ್ಪ ಯಾತ್ರೆ’ ಬೃಹತ್ ಅಭಿಯಾನವನ್ನು ಆರಂಭಿಸಿದ್ದಾರೆ ಎಂದು ಪುರಸಭೆ ಸದಸ್ಯರಾದ ಕಪಾಲಿ ಶಂಕರ್ ಅಭಿಪ್ರಾಯ ಪಟ್ಟರು.
ತಾಲೂಕಿನ ಬನಹಳ್ಳಿ ಗ್ರಾಮದಲ್ಲಿ ಲೀಡ್ ಬ್ಯಾಂಕ್ ವತಿಯಿಂದ ಹಮ್ಮಿಕೊಂಡಿದ್ದ “ವಿಕಸಿತ ಭಾರತ ಸಂಕಲ್ಪ ಯಾತ್ರೆ” ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕೇಂದ್ರದ ಮುದ್ರಾ, ಜನಧನ್, ಪಿ.ಎಂ.ವಿಶ್ವಕರ್ಮ, ಪ್ರಧಾನಮಂತ್ರಿ ಸುರಕ್ಷ ಭೀಮ ಯೋಜನೆ, ಜೀವನಜ್ಯೋತಿ ಭೀಮಾ ಯೋಜನೆ, ಸುಕನ್ಯ ಸಮೃದ್ಧಿ, ಅಟಲ್ ಪಿಂಚಣಿ, ಜೀವನ ಜ್ಯೋತಿ ವಿಮಾ, ಉಜ್ವಲ ಸೇರಿದಂತೆ ವಿವಿಧ ಯೋಜನೆಗಳ ಮಾಹಿತಿಯನ್ನು ಎಲ್ಇಡಿ ವಾಹನಗಳ ಮೂಲಕ ಎಲ್ಲಾ ಗ್ರಾಮ ಪಂಚಾಯಿತಿ ಹಾಗೂ ನಗರ ಪ್ರದೇಶದ ವಾರ್ಡ್ಗಳಲ್ಲಿ ಸಂಚರಿಸಿ ಜನರಿಗೆ ಜಾಗೃತಿ ಮೂಡಿಸುವ ಮೂಲಕ ಸರ್ಕಾರದ ಯೋಜನೆಗಳ ಲಾಭ ಪಡೆದ ಫಲಾನುಭವಿಗಳನ್ನು ಒಗ್ಗೂಡಿಸಿ, ಈ ಯೋಜನೆಗಳಿಂದ ವಂಚಿತರಾದ ಫಲಾನುಭವಿಗಳಿಗೆ ಅದರ ಲಾಭ ಸಿಗುವಂತೆ ಮಾಡುವ ಈ ಕಾರ್ಯಕ್ರಮವಾಗಿದ್ದು ಕೇಂದ್ರ ಸರ್ಕಾರದ ಯೋಜನೆಗಳನ್ನು ಮನೆಬಾಗಿಲಿಗೆ ತಲುಪಿಸುವ ಗುರಿಯಾಗಿದೆ ಎಂದರು.
ಜಾತಿ, ಮತ, ಧರ್ಮ, ಪಕ್ಷ, ಬೇಧ ಮರೆತು ದೇಶದ 140 ಕೋಟಿ ಜನರ ಆಶಯಕ್ಕೆ ಬದ್ಧರಾಗಿ ಸಮಗ್ರ ಅಭಿವೃದ್ಧಿಗೆ ತಾರತಮ್ಯ ನಿರಪೇಕ್ಷಿತ ಆಡಳಿತಕ್ಕೆ ಮುನ್ನುಡಿ ಬರೆದು ಯೋಜನೆಗಳನ್ನು ಅನುಷ್ಠಾನಗೊಳಿಸಿ ದೇಶದ ಜನತೆಗೆ ಅರಿವು ಮೂಡಿಸುವ ಉದ್ದೇಶವೇ “ವಿಕಸಿತ ಭಾರತ ಸಂಕಲ್ಪ ಯಾತ್ರೆ” ಎಂದರು.
ಸೇವೆಗಾಗಿ ಕಂಕಣ ಬದ್ದ ಸಂಸದ ಮುನಿಸ್ವಾಮಿ
ಅಧಿಕಾರ ಶಾಶ್ವತ ಅಲ್ಲ ತಾತ್ಕಾಲಿಕ, ಅದರೇ ಸಿಕ್ಕ ಅವಕಾಶದಲ್ಲಿ ಬಡವರ ದಲಿತರ ಅಲ್ಪಸಂಖ್ಯಾತರ ನೊಂದವರ ಪಾಲಿನ ಧ್ವನಿಯಾಗಿ ಕೆಲಸ ಮಾಡಿದಾಗ ಬದುಕಿಗೆ ನೈಜ್ಯ ಅರ್ಥ ಸಿಗುತ್ತದೆ, ಎಂಬ ದೂರ ದೃಷ್ಟಿಯ ಚಿಂತನ ಲಹರಿಗಳ ಮೂಲಕ ನಿರಂತರವಾಗಿ ಸಮಾಜಮುಖಿ ಕೆಲಸದಲ್ಲಿ ತೊಡಗಿರುವ ಅಪರೂಪದ ಮಾಣಿಕ್ಯ ಕೋಲಾರದ ಸಂಸದ ಎಸ್ ಮುನಿಸ್ವಾಮಿ,.
ಸಂಸದರು ಎಂದಿಗೂ ಸಹ ಅಧಿಕಾರದ ಆಸೆ ಮತ್ತು ಅಮಲಿನಲ್ಲಿ ಮೆರೆದವರಲ್ಲ ಬಡವರ ರೈತರ ಶ್ರಮಿಕರ ಶೋಷಿತರ ವೃದ್ಧರ ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸಲು ಕಂಕಣ ಬದ್ಧರಾಗಿ ಸೇವಾ ಮನೋಭಾವದ ಪ್ರವೃತ್ತಿಯಲ್ಲಿ ತೊಡಗಿದ್ದಾರೆ.
ತೋಟಗಾರಿಕೆ ಇಲಾಖೆಯ ಅಧಿಕಾರಿ ವಿಶ್ವನಾಥ್ ಮಾತನಾಡಿ ಭಾರತ ಕೃಷಿ ಪ್ರಧಾನ ರಾಷ್ಟ್ರವಾಗಿದ್ದು ರೈತರ ಅಭ್ಯುದಯಕ್ಕಾಗಿ ಸರ್ಕಾರ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ
ತೋಟಗಾರಿಕೆ ಇಲಾಖೆಯ ಮುಖ್ಯ ಯೋಜನೆಗಳಾದ ಪ್ರಧಾನ ಮಂತ್ರಿ ಕೃಷಿ ಸಿಂಚನ್ ಯೋಜನೆ ಅಡಿಯಲ್ಲಿ ಸಬ್ಸಿಡಿ ದರದಲ್ಲಿ ಡ್ರಿಪ್ ಒದಗಿಸಲಾಗುವುದು, ಒಂದು ಎಕರೆಗೆ 3300 ಲ್ಯಾಟರ್ಸ್ ಫಿಲ್ಟರ್ ಒಳಗೊಂಡಂತೆ ನೀಡಲಾಗುವುದು ಎಸ್ಸಿ ಎಸ್ಟಿ ರೈತರು ಏಳು ವರ್ಷದ ಹಿಂದೆ ಸೌಲಭ್ಯ ಪಡೆದುಕೊಂಡಿದ್ದರೆ ಪುನಹ ಸೌಲಭ್ಯ ಪಡೆದುಕೊಳ್ಳಬಹುದು, ಉದ್ಯೋಗ ಖಾತ್ರಿ ಯೋಜನೆಯಲ್ಲಿ ಮಾವು, ಸೇಬು, ರೋಜು, ಬಾಳೆ, ದಾಳಿಂಬೆ ಬೆಳೆಗಳಿಗೆ ಅನುದಾನ ನೀಡಲಾಗುವುದು, ರಾಷ್ಟ್ರೀಯ ತೋಟಗಾರಿಕೆ ಮಿಷನ್ ನಿಂದ ಕೃಷಿ ಹೊಂಡ ಪಾಲಿಹೌಸ್ ನಿರ್ಮಾಣಕ್ಕೆ 50ರ ದರದಲ್ಲಿ ಅನುದಾನ ನೀಡಲಾಗುವುದು, ತರಕಾರಿ ಬೆಳೆಗಳಿಗೆ ಉಚಿತ ಗೊಬ್ಬರ ನೀಡಲಾಗುವುದು ಎಂದು ತಿಳಿಸಿದರು.
ಬ್ಯಾಂಕ್ ವ್ಯವಸ್ಥಾಪಕರಾದ ದೀಪ್ತಿ ಉನ್ನಿಕೃಷ್ಣನ್, ವಿಶ್ವನಾಥ್ ತೋಟಗಾರಿಕೆ, ಪಿಡಿಓ ವಸಂತ್, ಆರೋಗ್ಯ ಇಲಾಖೆ ಸಂಜನಾ, ಗ್ರಾಮ, ಪಂಚಾಯಿತಿ ಸದಸ್ಯರಾದ ನಾರಾಯಣಮ್ಮ , ಕೃಷ್ಣಪ್ಪ, ಶ್ರೀನಿವಾಸ ರೆಡ್ಡಿ, ರೈತ ಮೋರ್ಚಾ ಕಾರ್ಯದರ್ಶಿ ಶಿವಕುಮಾರ್ , ಕೃಷಿ ಅಧಿಕಾರಿ ವಿಜಿಕುಮಾರ್ , ರೇಷ್ಮೆ ಇಲಾಖೆ ಲಕ್ಷ್ಮಿ, ಎನ್ ಜಿ ಓ ರೇಣುಕಾ, ಬನಹಳ್ಳಿ ಮಂಜು, ಚಲಪತಿ ಇತರರು ಉಪಸ್ಥಿತರಿದ್ದರು.
ವರದಿ: ವಿಷ್ಣು ಕೋಲಾರ