ಮಾಜಿ ಸಚಿವ ಡಿ.ಎನ್ ಜೀವರಾಜ್ ಅವರ ಮೇಲೆ 10 ವರ್ಷಗಳ ಹಿಂದೆ ದಾಖಲದ ಅತ್ಯಾಚಾರದ ಆರೋಪ ಇಂದು ನಿರ್ದೋಷಿ. ಮಹಿಳೆಗೆ ಶಿಕ್ಷೆ
(CHIKKAMAGALURU): ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಕ್ಷೇತ್ರದ ಮಾಜಿ ಸಚಿವರಾದ ಡಿ. ಎನ್ ಜೀವರಾಜ್ ಅವರ ಮೇಲೆ 2013ರಲ್ಲಿ ಅತ್ಯಚಾರದ ಆರೋಪಮಾಡಿದ ಮಹಿಳೆಗೆ ಇಂದು ನರಸಿಂಹರಾಜಪುರ ನ್ಯಾಯಾಲಯ ಶಿಕ್ಷೆ ನೀಡಿದೆ. ಹಿಂದೆ ಅರಣ್ಯ ಎಂಬುವವರು ಡಿ ಎನ್ ಜೀವರಾಜ್ ವಿರುದ್ಧ ಅತ್ಯಾಚಾರದ ಆರೋಪದಾಡ್ಡಿಯಲ್ಲಿ ದೂರು ನೀಡಿದ್ದರು. ಕೋರ್ಟ್ ಅದಕ್ಕೆ ಈ ಪ್ರಕರಣದಲ್ಲಿ ಸತ್ಯ ವಿಲ್ಲವೆಂದು ಕೇಸ್ ವಜಾ ಗೊಳಿಸಿತ್ತು.
ಡಿ.ಎನ್ ಜೀವರಾಜ್, ಮಾಜಿ ಪಟ್ಟಣ ಪಂಚಾಯಿತಿ ಅಧ್ಯಕ್ಷ ಆಶಿಶ್ ಕುಮಾರ್, ಮಾಜಿ ತಾಲೂಕು ಪಂಚಾಯಿತಿ ಅಧ್ಯಕ್ಷ ನಾಗರಾಜ್ ಅವರು ನೀಡಿದ್ದ ಪ್ರತ್ಯೇಕ ಮೂರು ಪ್ರಕರಣಗಳಲ್ಲಿ ಅರಣ್ಯ ಮತ್ತು ಮನು ಎಂಬತನ ಮೇಲೆ ಮಾನಹಾನಿ ಪ್ರಕರಣವನ್ನು ದಾಖಲಿಸಿದ್ದರು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಗುರುವಾರ ನರಸಿಂಹರಾಜಪುರ ನ್ಯಾಯಾಲಯ ಅರಣ್ಯ ಮತ್ತು ಮನು ತಪ್ಪಿಸಸ್ಥರು ಎಂದು ತೀರ್ಪು ನೀಡಿದೆ.