ಅಬಕಾರಿ ಇಲಾಖೆ ಅಧಿಕಾರಿಗಳಿಂದ ಪಟ್ಟಣದ ಮೆಡಿಕಲ್ ಸ್ಟೋರ್ ಗಳಿಗೆ ಭೇಟಿ, ಔಷಧಿಗಳ ಪರಿಶೀಲನೆ
(KOLARA) ಬಂಗಾರಪೇಟೆ :ಕೋಲಾರ ಜಿಲ್ಲಾ ಅಬಕಾರಿ ಹೆಚ್ ರಮೇಶ್ ಕುಮಾರ್ ಉಪ ಆಯುಕ್ತರು ನಿರ್ದೇಶನದ ಮೇರೆಗೆ ಬಂಗಾರಪೇಟೆ ವಲಯದ ಅಬಕಾರಿ ನಿರೀಕ್ಷಕರಾದ ಅರುಣ್ ಕುಮಾರ್ ನೇತೃತ್ವದಲ್ಲಿ ನಗರದ ಮೇಡ್ ಪ್ಲಸ್, ಅಪೋಲೋ, ಅನುಗ್ರಹ, ಬಾಲಾಜಿ, ಮತ್ತು ಕೆ.ಎಚ್. ಮೆಡಿಕಲ್ ಶಾಪ್ ಗಳು ಸೇರಿದಂತೆ ಇತರೆ ಮೆಡಿಕಲ್ ಶಾಪ್ ಗಳ ಮೇಲೆ ದಾಳಿ ನಡೆಸಿ ಪರಿಶೀಲನೆ ಮಾಡಿದರು.
ಈ ವೇಳೆ ಅಬಕಾರಿ ನಿರೀಕ್ಷಕರಾದ ಅರುಣ್ ಕುಮಾರ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಯುವ ಜನತೆ ವಿವಿಧ ದುಶ್ಚಟಗಳಿಗೆ ಮಾರುಹೋಗುತ್ತಿರುವುದರಿಂದ ಸಮಾಜದಲ್ಲಿ ಅಪರಾಧ ಪ್ರಕರಣಗಳು ಹೆಚ್ಚುತ್ತಿದೆ. ಕಾನೂನು ಪ್ರಕಾರ ಮಾದಕ ವಸ್ತುಗಳ ಮಾರಾಟ ಹಾಗೂ ಬಳಕೆ ಮಾಡುವುದು ಅಪರಾಧ, ತಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ಮಾದಕ ವಸ್ತುಗಳ ಮಾರಾಟ ಹಾಗೂ ಸೇವನೆ ಬಗ್ಗೆ ತಿಳಿದರೆ,ಸಾರ್ವಜನಿಕರು ಅಬಕಾರಿ ಇಲಾಖೆಯವರಿಗೆ ಇಲ್ಲವೇ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಬೇಕೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಅಬಕಾರಿ ಉಪನಿರೀಕ್ಷಕ ರವೀಂದ್ರ ಆರ್, ಪ್ರಕೃತಿ ಪಿ,ಜೈನ್, ಸಿಬ್ಬಂದಿಗಳಾದ ಭರತ್,ಲಕ್ಷ್ಮಣ್, ನವೀನ್ ಇದ್ದರು.
ವರದಿ ವಿಷ್ಣು ಕೋಲಾರ