ಕೋಲಾರನ್ಯೂಸ್

3 ಎಕರೆಗಿಂತ ಕಡಿಮೆ ಭೂಮಿಯಲ್ಲಿ ವ್ಯವಸಾಯ ಮಾಡುವ ರೈತರನ್ನು ತೆರೆವುಗೊಳಿಸಬಾರದು ;ಶಾಸಕ ಎಸ್ಎನ್ ನಾರಾಯಣಸ್ವಾಮಿ

3 ಎಕರೆಗಿಂತ ಕಡಿಮೆ ಭೂಮಿಯಲ್ಲಿ ವ್ಯವಸಾಯ ಮಾಡುವ ರೈತರನ್ನು ತೆರೆವುಗೊಳಿಸಬಾರದು ;ಶಾಸಕ ಎಸ್ಎನ್ ನಾರಾಯಣಸ್ವಾಮಿ

(KOLARA): ಬಂಗಾರಪೇಟೆ :ಕೋಲಾರ ಜಿಲ್ಲೆಯ ಅರಣ್ಯ ಭೂಮಿಯ ಸುತ್ತಮುತ್ತಲಿರುವ ರೈತರು ಮತ್ತು ಮೂರು ಎಕರೆಗಿಂತ ಕಡಿಮೆ ಭೂಮಿಯಲ್ಲಿ ವ್ಯವಸಾಯ ಮಾಡುವ ರೈತರನ್ನು ತೆರೆವುಗೊಳಿಸಬಾರದು ಎಂದು ಅರಣ್ಯ ಮಂತ್ರಿಗಳಾದ ಈಶ್ವರ್ ಕಂಡ್ರೆ ರವರ ಸಮಕ್ಷದಲ್ಲಿ ಅರಣ್ಯ ಇಲಾಖೆಯ ಅಧಿಕಾರಿ ಏಡುಕೊಂಡಳು ರವರಿಗೆ ತಿಳಿಸಿರುವ ಹಿನ್ನೆಲೆ ಕಂದಾಯ ಇಲಾಖೆ ಹಾಗೂ ಅರಣ್ಯ ಇಲಾಖೆ ಜಂಟಿ ಸರ್ವೆ ಮಾಡುವವರೆಗೂ ಯಾವುದೇ ರೈತರ ಜಮೀನು ತೆರವು ಮಾಡಬಾರದೆಂದು ಶಾಸಕ ಎಸ್ಎನ್ ನಾರಾಯಣಸ್ವಾಮಿ ಆಗ್ರಹಿಸಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಜಿಲ್ಲೆಯಲ್ಲಿ ರೈತರು ಬಹಳ ವರ್ಷಗಳಿಂದ ಸಾಗುವಳಿ ಮಾಡಿಕೊಂಡು ಬರುತ್ತಿದ್ದಾರೆ. ಅಂತಹ ಜಮೀನುಗಳನ್ನು ಅರಣ್ಯ ಅಧಿಕಾರಿಗಳು ತೆರವುಗೊಳಿಸುವ ಕಾರ್ಯಚರಣೆ ಮಾಡಿದ್ದಾರೆ. ಈ ವೇಳೆ ಅನೇಕ ರೈತರ ಬೆಳೆ ನಷ್ಟ ಉಂಟಾಗಿದೆ ಮಾನಸಿಕವಾಗಿ ನೋವಿಗೆ ತುತ್ತಾಗಿದ್ದಾರೆ. ಸುಮಾರು ವರ್ಷಗಳಿಂದ ರೈತರು ಜಮೀನನ್ನೇ ನಂಬಿಕೊಂಡು ವ್ಯವಸಾಯ ಮಾಡಿಕೊಂಡು ಬಂದಿದ್ದಾರೆ.ಅವರಿಗೆ ಬೆಳೆ ನಷ್ಟವಾಗಿದೆ.ರೈತರಿಗೆ ಆಗಿರುವ ಅನ್ಯಾಯಕ್ಕೆ ನಾವು ಸ್ಪಂದಿಸುತ್ತೇವೆ ಈ ಸಂದರ್ಭದಲ್ಲಿ ನಾನು, ಕೋಲಾರ ಶಾಸಕ ಕೊತ್ತೂರು ಮಂಜುನಾಥ್ ಹಾಗೂ ಕೆ ವೈ ನಂಜೇಗೌಡ ವಿಷಾದವನ್ನು ವ್ಯಕ್ತಪಡಿಸುತ್ತೇವೆ ಎಂದರು.

ಇಂದು ಮುಂಜಾನೆ ನಾವು ಬೆಂಗಳೂರಿಗೆ ತೆರಳಿ ಮಾನ್ಯ ಮುಖ್ಯಮಂತ್ರಿಗಳನ್ನ ಹಾಗೂ ಅರಣ್ಯ ಸಚಿವರಾದ ಈಶ್ವರ್ ಖಂಡ್ರೆ ರವರನ್ನು ಖುದ್ದಾಗಿ ಭೇಟಿ ಮಾಡಿದ್ದೇವೆ, ನಮ್ಮ ಜಿಲ್ಲೆಯ ಜನರು ಅನುಭವಿಸುತ್ತಿರುವ ಕಷ್ಟಗಳನ್ನು ಎಳೆಯಲೆಯಾಗಿ ಅವರ ಮುಂದೆ ಬಿಚ್ಚಿಟ್ಟಿದ್ದೇವೆ. ಇದಕ್ಕೆ ಸ್ಪಂದನೆ ಕೊಟ್ಟ ಅರಣ್ಯ ಸಚಿವರು ಸ್ಥಳದಲ್ಲೇ ಇದ್ದ ಅರಣ್ಯ ಅಧಿಕಾರಿ ಏಡುಕೊಂಡಳು ಅವರಿಗೆ ಕಂದಾಯ ಇಲಾಖೆ ಮತ್ತು ಅರಣ್ಯ ಇಲಾಖೆ ಜಂಟಿ ಸರ್ವೆ ಮಾಡುವವರೆಗೂ ಅರಣ್ಯ ಅಧಿಕಾರಿ ಏಡುಕೊಂಡಲು ಯಾವ ರೈತರನ್ನು ಒಕ್ಕಲಿಬ್ಬಿಸಬಾರದು ಹಾಗೂ ಜಮೀನಿಗೆ ಪ್ರವೇಶಸಬಾರದೆಂದು ಕಟ್ಟಪ್ಪಣೆ ನೀಡಿದ್ದಾರೆ ಎಂದು ತಿಳಿಸಿದರು.

ಮೂರು ಎಕರೆಗಿಂತ ಕಡಿಮೆ ಜಮೀನಿನಲ್ಲಿ ವ್ಯವಸಾಯ ಮಾಡುತ್ತಿರುವಂತಹ ರೈತರ ಹೆಸರಿಗೆ ಪಣಿ ಅಥವಾ ಖಾತೆಯಾಗಿದ್ದರೆ. ಅಂತವರನ್ನ ಯಾವುದೇ ಕಾರಣಕ್ಕೂ ಒಕ್ಕಲಿಬ್ಬಿಸಬಾರದೆಂದು ಎಂದರು. ಗೌರವಾನ್ವಿತ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್, ಸಚಿವರಾದ ಈಶ್ವರ್ ಖಂಡ್ರೆ ರವರು ರೈತಪರ ಹಾಗೂ ಬಡವರ ಪರವಾಗಿ ಸ್ಪಷ್ಟ ನಿಲುವನ್ನು ತೆಗೆದುಕೊಂಡಿದ್ದಾರೆ ಯಾವುದೇ ಕಾರಣಕ್ಕೂ ಮೂರು ಎಕರೆಗಿಂತ ಕಡಿಮೆ ಹೊಂದಿರುವ ಭೂಮಿಯ ರೈತರ ತಂಟೆಗೆ ಹೋಗಬಾರದೆಂದು ತಿಳಿಸಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಕೋಲಾರ ಶಾಸಕ ಕೊತ್ತೂರು ಮಂಜುನಾಥ್, ಮಾಲೂರು ಶಾಸಕ ಕೆ ವೈ ನಂಜೇಗೌಡ ಇದ್ದರು.

ವರದಿ: ವಿಷ್ಣು ಕೋಲಾರ

Leave a Reply

Your email address will not be published. Required fields are marked *

Scan the code