ಶಾಲೆಗಳಲ್ಲಿ ಬಾಂಬ್ ಬೆದರಿಕೆ ದುಷ್ಕರ್ಮಿಗಳ ಪತ್ತೆ ಮಾಡಿ ಗಲ್ಲಿಗೇರಿಸಿ: ಸೂಲಿಕುಂಟೆ ಆನಂದ್ ಆಗ್ರಹ
(KOLARA):ಬಂಗಾರಪೇಟೆ: ಬೆಂಗಳುರಿನಲ್ಲಿ 70 ಶಾಲೆಗಳಿಗೆ ದುಷ್ಕರ್ಮಿಗಳು ಬಾಂಬ್ ಹಾಕುವ ಬಗ್ಗೆ ಬೆದರಿಕೆ ಇ.ಮೇಲ್ ರವಾನಿಸಿರುವುದುನ್ನು ತೀವ್ರವಾಗಿ ಖಂಡಿಸಿ ಪೊಲೀಸರು ಕೂಡಲೇ ಬೆದರಿಕೆ ಹಾಕಿರುವ ದುಷ್ಕರ್ಮಿಗಳನ್ನು ಪತ್ತೆ ಮಾಡಿ ಸಾರ್ವಜನಿಕವಾಗಿ ಗಲ್ಲಿಗೇರಿಸಬೇಕೆಂದು ಒತ್ತಾಯಿಸಿ ದಲಿತ ಸಮಾಜ ಸೇನೆ ಕರ್ಯಕರ್ತರು ತಾಲೂಕು ಕಚೇರಿ ಮುಂದೆ ಕೆಲಕಾಲ ಪ್ರತಿಭಟನೆ ಮಾಡಿ ಮನವಿ ಸಲ್ಲಿಸಿದರು.
ಸಂಘದ ರಾಜ್ಯಾಧ್ಯಕ್ಷ ಸೂಲಿಕುಂಟೆ ಆನಂದ್ ಮಾತನಾಡಿ ಕಳೆದ ವಾರ ಬೆಂಗಳೂರಿನ ಸುಮಾರು 70 ಖಾಸಗಿ ಶಾಲೆಗಳಿಗೆ ಬಾಂಬ್ ಹಾಕಿ ಸ್ಪೋಟಿಸುವ ಬಗ್ಗೆ ಬೆದರಿಕೆ ಮೇಲ್ ಸಂದೇಶ ನೀಡಿರುವುದನ್ನು ನೋಡಿದರೆ ರಾಜ್ಯ ಸರ್ಕಾರದ ಆಡಳಿತ ಎತ್ತ ಸಾಗಿದೆ ಎಂಬುದು ತಿಳಿಯುತ್ತದೆ. ದುಷ್ಕರ್ಮಿಗಳ ಈ ಬೆದರಿಕೆಯಿಂದ ಪೋಷಕರನ್ನು ಬೆಚ್ಚಿ ಬೀಳಿಸಿದೆ. ಘಟನೆ ಬಳಿಕ ತಮ್ಮ ಮಕ್ಕಳನ್ನು ಪೋಷಕರು ಶಾಲೆಗಳಿಗೆ ಕಳುಹಿಸಲು ಹಿಂದೆ ಮುಂದು ನೋಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಟೀಕಿಸಿದರು.
ಭವಿಷ್ಯದ ಪ್ರಜೆಗಳನ್ನು ರೂಪಿಸು ಶಾಲೆಗಳಿಗೆ ಈ ರೀತಿ ಬೆದರಿಕೆ ಹಾಕಿದರೆ ಹೇಗೆ ಎಂದು ಪ್ರಶ್ನಿಸಿದರು. ಇದರಿಂದ ಮಕ್ಕಳು ನಿಭೀರ್ತಿಯಿಂದ ಶಾಲೆಗಳಲ್ಲಿ ಓದಲು ಸಾಧ್ಯನಾ ಎಂದು ಹೇಳಿದ ಅವರು ಬೆಂಗಳೂರು ನಗರ ಎಲ್ಲದಕ್ಕೂ ಉತ್ತಮ ಸ್ಥಳವಾಗಿದೆ ಎಂದು ಹಾಗೂ ಇಲ್ಲಿ ಎಲ್ಲ ಜನರು ಸಹಬಾಳ್ವೆಯಿಂದ ಜೀವನ ನಡೆಸುತ್ತಿದ್ದು, ಈ ಸಾಮರಸ್ಯವನ್ನು ಕೆಡಿಸಲು ದುಷ್ಕರ್ಮಿಗಳು ಈ ರೀತಿ ಸಂಚು ಮಾಡಿದ್ದಾರೆ. ಸರ್ಕಾರ ಈ ಪ್ರಕರಣವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿ ಪ್ರಕರಣನ್ನು ಭೇದಿಸಿ ಆರೋಪಿಗಳಿಗೆ ತಕ್ಕ ಶಿಕ್ಷೆ ನೀಡಬೇಕು ಮತ್ತು ಪೊಲೀಸರೂ ಸಹ ಅಪರಾಧ ಪ್ರಕರಣಗಳನ್ನು ಭೇದಿಸುವಲ್ಲಿ ಎತ್ತಿದ ಕೈಯಾಗಿದ್ದು,ಶಾಲೆಗಳಿಗೆ ಬೆದರಿಕೆ ಹಾಕಿರುವದುಷ್ಟರನ್ನು ಪತ್ತೆ ಮಾಡಿ ಸಾರ್ವಜನಿಕವಾಗಿ ಗಲ್ಲಿಗೇರಿಸಬೇಕೆಂದು ಒತ್ತಾಯಿಸಿದರು.
ಈ ವೇಳೆ ನಕ್ಕನಹಳ್ಳಿ ವೆಂಕಟೇಶ್, ಆಟೋಕರ್ಣ, ಮಂಜುನಾಥ್, ಸುಬ್ರಮಣಿ, ಸರವಣ, ಮಂಜುನಾಥ್, ಮತ್ತಿತರರು ಇದ್ದರು.
ವರದಿ ವಿಷ್ಣು ಕೋಲಾರ