ಚಿಕ್ಕಮಗಳೂರುನ್ಯೂಸ್

ಕರ್ನಾಟಕ ಬ್ಯಾಂಕ್ ಎಟಿಎಂ ನಲ್ಲಿ ಬೆಂಕಿ ಅವಘಡ. 5 ಲಕ್ಷ ಹಣ ಬಸ್ಮ…..!

ಕರ್ನಾಟಕ ಬ್ಯಾಂಕ್ ಎಟಿಎಂ ನಲ್ಲಿ ಬೆಂಕಿ ಅವಘಡ. 5 ಲಕ್ಷ ಹಣ ಬಸ್ಮ…..!

(CHIKKAMAGALURU): ಚಿಕ್ಕಮಗಳೂರು ಜಿಲ್ಲೆಯ ಐಜಿ ರಸ್ತೆಯ ಸಾರಗೋಡು ಆರ್ಕೆಡ್ ನಲ್ಲಿರುವ ಕರ್ಣಾಟಕ ಬ್ಯಾಂಕ್ ಎಟಿಎಂ ನಲ್ಲಿದ್ದ 15 ಲಕ್ಷ ಮೌಲ್ಯದ ಎಟಿಎಂ ಯಂತ್ರದೊಂದಿಗೆ 5 ಲಕ್ಷ ಹಣ ಸಂಪೂರ್ಣವಾಗಿ ಸುಟ್ಟು  ಭಸ್ಮವಾಗಿದೆ.

ಈ ಅವಘಡಕ್ಕೆ ಕಾರಣ ಶಾರ್ಟ್ ಸರ್ಕ್ಯೂಟ್‌
ಎಂದು ಊಹಿಸಲಾಗಿದೆ. ಎಟಿಎಂಗೆ ಬೆಂಕಿ ಹೊತ್ತಿಕೊಂಡ ಉರಿಯುವುದನ್ನು ಕಂಡ ಹೈದರಾಬಾದ್‌ ಬ್ಯಾಂಕ್ ಕಂಟ್ರೋಲ್ ರೂಮ್ ಅಗ್ನಿಶಾಮಕ ದಳಕ್ಕೆ ಈ ಮಾಹಿತಿಯನ್ನು ತಕ್ಷಣವೆ ರವಾನಿಸಿದ್ದು ಸ್ಥಳಕ್ಕೆ ಆಗಮಿಸಿದ ಚಿಕ್ಕಮಗಳೂರು ಅಗ್ನಿಶಾಮಕ ದಳ ಸಿಬ್ಬಂದಿ ಬೆಂಕಿಯನ್ನು ನಂದಿಸಿದ್ದಾರೆ. ಆದರೆ  ಅವಘಡದಿಂದ ಆದಾಗಲೆ ನಗದು ಸಹಿತ ಎಟಿಎಂ ಮಷೀನ್ ಸುಟ್ಟು ಬೂದಿಯಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

Leave a Reply

Your email address will not be published. Required fields are marked *

Scan the code