ಪಟ್ಟಣದಲ್ಲಿ ಎಸ್ ಎನ್ ಪ್ರೀಮಿಯರ್ ಲೀಗ್ ಆವೃತ್ತಿ ವತಿಯಿಂದ ಜಿಲ್ಲಾ ಮಟ್ಟದ ಟೆನ್ನಿಸ್ ಬಾಲ್ ಕ್ರಿಕೆಟ್ ಟೂರ್ನಮೆಂಟ್
(ಕೋಲಾರ):ಬಂಗಾರಪೇಟೆ ಪಟ್ಟಣದಲ್ಲಿ ಎಸ್ ಎನ್ ಪ್ರೀಮಿಯರ್ ಲೀಗ್ ಆವೃತ್ತಿ ವತಿಯಿಂದ ನಡೆಯಲಿರುವ ಜಿಲ್ಲಾ ಮಟ್ಟದ ಟೆನ್ನಿಸ್ ಬಾಲ್ ಕ್ರಿಕೆಟ್ ಟೂರ್ನಮೆಂಟ್ ಕಾರ್ಯಕ್ರಮವನ್ನು ಮೂರು ದಿನಗಳಿಂದ ಹಮ್ಮಿಕೊಳ್ಳಲಾಗಿತ್ತು. ಇಂದು ಕೊನೆಯ ದಿನದಲ್ಲಿ
ಪ್ರಥಮ ಬಹುಮಾನ ₹-50.000 ನಗದು ಹಾಗು ಆಕರ್ಷಕ ಟ್ರೋಪಿಯನ್ನು ಕೆಜಿಎಫ್ ಸಚಿನ್ ಸ್ಪೋರ್ಟ್ಸ್ ತಂಡದವರು ಪಡೆದುಕೊಂಡರು , ದ್ವಿತೀಯ ಬಹುಮಾನ ₹-25.000 ನಗದು ಆಕರ್ಷಕ ಟ್ರೋಪಿಯನ್ನು ಕೋಲಾರದ ಪಿ ಆರ್ ಡಬ್ಲ್ಯೂ ತಂಡದವರು ಪಡೆದುಕೊಂಡರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರದ ಜೀವನ್, ಬಾಬು ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಹರೀಶ್, ಮುತ್ತು ಹರೀಶ್ ಕುಮಾರ್, ಚಿನ್ನ ಮೊದಲಾದವರು ಇದ್ದರು.
ವರದಿ: ವಿಷ್ಣು ಕೋಲಾರ