ಮಲೆನಾಡಿನ ಕೆಲ ಬಾಗಗಳಲ್ಲಿ ವರ್ಷದ ಮೊದಲ ಮಳೆ: ರೈತರಲ್ಲಿ ಭರವಸೆ ಮೂಡಿಸಿದ ದಿಡೀರ್ ಮಳೆ.
(CHIKKAMAGALURU): ಮಲೆನಾಡು ಹಾಗೂ ಚಿಕ್ಕಮಗಳೂರು ಭಾಗಗಳಲ್ಲಿ ಇಂದು ಮಧ್ಯಾಹ್ನದಿಂದ ಮೋಡ ಕವಿದ ವಾತಾವರಣ ಉಂಟಾಗಿದೆ ಕಾಫಿ ಗಿಡಗಳು ಹಾಗೂ ಅಡಕೆ ತೋಟಗಳಿಗೆ ನೀರು ಉಣಿಸುವಿಕೆ ನಡೆಸುತ್ತಿದ್ದು. ನೀರಿಲ್ಲದೆ ತತ್ತರಿಸುತ್ತಿದ್ದಾರೆ.
ದಿನಾಂಕ 11.03.2024 ರಂದು ಚಿಕ್ಕಮಗಳೂರು ಜಿಲ್ಲೆಯ ಕೆಲ ಭಾಗ ಮೋಡ ಕವಿದ ವಾತಾವರಣ ಉಂಟಾಗಿ ಮಳೆ ಉದುರಿದ್ದು, ಬೇಸಿಗೆಯ ಹಾಗೂ ಬರಗಾಲದ ಬಿಸಿಲಿನಿಂದ ತತ್ತರಿಸುತ್ತಿದ್ದ ರೈತರಿಗೆ ಮಳೆ ಮಂದಹಾಸ ಮೂಡಿಸಿದೆ.
ಬರಗಾಲ ಹಾಗೂ ಬೇಸಿಗೆಯಿಂದ ನೀರಿಗಾಗಿ ಪರದಾಡುತ್ತಿರುವ ಕರ್ನಾಟಕದ ಎಲ್ಲಾ ಜಿಲ್ಲೆಗಳು ಹಾಗೂ ತಾಲೂಕುಗಳು ನೀರಿಲ್ಲದೆ ಬರಡಾಗಿದೆ. ದಿಡೀರನೆ ಮಧ್ಯಾಹ್ನದ ಹೊತ್ತಿಗೆ ಮೋಡ ಕವಿದ ವಾತಾವರಣ ಉಂಟಾಗಿ ಮಳೆಯು ಹನಿ ಹನಿ ಹುದಿರಿದೆ. ಬರಗಾಲದಲ್ಲಿ ಬೇಯುತ್ತಿರುವ ಮಲೆನಾಡಿಗೆ ವರ್ಷದ ಮೊದಲ ಮಳೆಯಾಗಿದೆ.