ಕರ್ನಾಟಕ ರಕ್ಷಣಾ ವೇದಿಕೆ (ಶಿವರಾಮೇಗೌಡ ರ ಬಣ ) ವತಿಯಿಂದ ಧ್ವಜ ಸ್ತಂಭ ಕಾರ್ಯಕ್ರಮ.
(SHIVAMOGA): ಸಾಗರ: ಬಳಸೆಗೋಡಿನ ಮನೆಯ ಮುಂಭಾಗ ಜಾಗದಲ್ಲಿ ತಾಲೂಕು ಅಧ್ಯಕ್ಷರಿಂದ ಧ್ವಜ ಸ್ತಂಭವನ್ನು ಪ್ರತಿಷ್ಠಾಪಿಸಲಾಯಿತು ನಂತರ ವೇದಿಕೆ ಕಾರ್ಯಕ್ರಮವನ್ನು ಶಾಲಾ ಮಕ್ಕಳಿಂದ ನಾಡಗೀತೆಯ ಮುಕಾಂತರ ಪ್ರಾರಂಭಿಸಿ ನಂತರ ತಾಲೂಕು ಅಧ್ಯಕ್ಷರಾದ ಮಂಜುನಾಥ್ ರವರು ಉದ್ಘಾಟನೆ ಮಾಡಿದರು ನಂತರ ಮುಖ್ಯಮಂತ್ರಿ ಅತಿಥಿಗಳು ಕನ್ನಡ ನಾಡು ನುಡಿ ಬಗ್ಗೆ ಭಾಷಣ ಮಾಡಿದರು.
ಕಾರ್ಯಕ್ರಮದಲ್ಲಿ ವಿವಿಧ ಕ್ರೀಡೆಗಳಲ್ಲಿ ಶಾಲಾ ಮಕ್ಕಳು ವಿಜೇತರದವರಿಗೆ ಪದಕ ಮತ್ತು ಬಡ ವಿದ್ಯಾರ್ಥಿ ಗಳಿಗೆ ಪಠ್ಯ ಪುಸ್ತಕಗಳನ್ನು ವಿತರಿಸಿದರು ತಾಲೂಕು ಅಧ್ಯಕ್ಷರು ಕೊನೆಯಲ್ಲಿ ಮಾತನಾಡುತ್ತ ನಮ್ಮ ತಾಲೂಕಿನಲ್ಲಿ ದಿನ ದಲಿತರಿಗೆ ಬಡವರಿಗೆ ನಮ್ಮ ಕೈಯಲ್ಲಿ ಆಗುವ ಸಹಾಯವನ್ನು ಮಾಡಿ ಅವರ ಏಳಿಗೆಗೆ ಶ್ರಮಿಸೋಣ ನಮ್ಮ ರಾಜ್ಯದ ಭಾಷೆ, ನೆಲ ಜಲ ಯಾವುದಕ್ಕೆ ಧಕ್ಕೆಯಾದರೂ ನಾವು ಹೋರಾಟ ಮಾಡಲು ಸದಾ ಸಿದ್ದರಿರಬೇಕು ಎಂದು ತಿಳಿಸಿದರು ಕಾರ್ಯಕ್ರಮದಲ್ಲಿ ಮಾಜಿ ನಗರಸಭಾ ಅಧ್ಯಕ್ಷರಾದ ಮಹೇಶ್, ವೆಂಕಟೇಶ್ ಬಳಸಗೋಡು, ಮಂಜುನಾಥ್, ಮಾಜಿ ಗ್ರಾಮ ಪಂಚಾಯತ್ ಉಪಾಧ್ಯಕ್ಷರು, ಪ್ರಶಾಂತ್ ಮಾಜಿ ಗ್ರಾಮಪಂಚಾಯತ್ ಸದಸ್ಯರು,ಕುಮಾರ್ ಶೆಟ್ಟಿ, ಮಾಜಿ ಗ್ರಾ. ಪ. ಸದಸ್ಯರು, ನಾಗರಾಜ್ ಕಲ್ಮೇನೇ, ಮೋಹನ್ ಹೇಗ್ಗೋಡು, ನಿಸರ್ಗ ಡಾಬಾ ರಾಘವೇಂದ್ರ, ಮಂಜುನಾಥ್, ಕನ್ನಪ್ಪ ಗೌಡ, ರಾಘವೇಂದ್ರ ಬಳಸಗೋಡು, ಹರೀಶ್ ಬಳಸಗೋಡು, ಇನ್ನೂ ಅನೇಕ ಮುಖಂಡರು ಭಾಗವಹಿಸಿ ಕಾರ್ಯಕ್ರಮ ಯಶಸ್ವಿ ಗೊಳಿಸಿದರು.
ವರದಿ: ರಾಘವೇಂದ್ರ ತಾಳಗುಪ್ಪ