ಅರಣ್ಯ ಇಲಾಖೆ ಸಿಬ್ಬಂದಿಗಳು ನೋಟಿಸ್ ನೀಡದೆ ಬೆಳೆ ನಾಶಪಡಿಸಿದ; ಆರೋಪ
(ಚಿಕ್ಕಮಗಳೂರು): ಕಳಸ ಇಡಕಿಣಿ ಗ್ರಾಮದ ಹೆಮ್ಮಕ್ಕಿಯ ಸುಕನಕೊಳಲು ಪ್ರದೇಶದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ತಮ್ಮ ತೋಟದಲ್ಲಿ ಬೆಳೆದ ಕಾಫಿ ಗಿಡ, ಕಾಳುಮೆಣಸು ಬಳ್ಳಿಗಳನ್ನು ಕಡಿದು ನಾಶ ಮಾಡಿದ್ದಾರೆ ಎಂದು ರೈತ ಅಣ್ಣಪ್ಪ ಎಂಬುವವರು ಆರೋಪಿಸಿದ್ದಾರೆ.
ನಮ್ಮ ಊರಿನಲ್ಲಿ 10 ಕುಟುಂಬಗಳಿಗೆ 40 ವರ್ಷಗಳ ಹಿಂದೆಯೇ ತಲಾ ಒಂದೊಂದು ಎಕರೆ ಭೂಮಿ ಮಂಜೂರಾಗಿತ್ತು. ಆದರೆ ಈಗ ಅರಣ್ಯ ಇಲಾಖೆ ಅಧಿಕಾರಿಗಳು ಯಾವುದೆ ನೋಟಿಸ್ ನೀಡದೆ ಏಕಾಏಕಿ ತಮ್ಮ ತೋಟಕ್ಕೆ ನುಗ್ಗಿ ನಾವು ಬೆಳೆದಿದ್ದ 500 ಕಾಫಿ ಗಿಡ 100ಕ್ಕೂ ಹೆಚ್ಚು ಕಾಳುಮೆಣಸು ಬಳ್ಳಿಗಳನ್ನು ಕಿತ್ತು ಬಿಸಾಕ್ಕಿದ್ದಾರೆ. ಎಂದು ಅಣ್ಣಪ್ಪ ರವರು ಆರೋಪಿಸಿದ್ದಾರೆ.