ಅಂತರಗಂಗೆ ಬುದ್ಧಿಮಾಂದ್ಯ ಮಕ್ಕಳಿಗೆ ಉಚಿತ ನೇತ್ರ ತಪಾಸಣೆ
(KOLARA): ಕೋಲಾರ : ಬೆಂಗಳೂರಿನ ಶಂಕರ್ ಕಣ್ಣಿನ ಆಸ್ಪತ್ರೆ ಮತ್ತು ಟೈಟಾನ್ ಕಂಪನಿಯ ಸಹಯೋಗದಲ್ಲಿ ನಡೆದ ನನ್ನ ಕಣ್ಣು ಯೋಜನೆಯಡಿ ಶುಕ್ರವಾರ ನಗರದ ಅಂತರಗಂಗೆ ಬುದ್ದಿಮಾಂದ್ಯ ವಿಕಲಚೇತನ ಮಕ್ಕಳಿಗೆ ಮತ್ತು ವಯೋವೃದ್ಧರಿಗೆ ಉಚಿತ ನೇತ್ರ ತಪಾಸಣಾ ಶಿಬಿರವನ್ನು ಏರ್ಪಡಿಸಲಾಗಿತ್ತು.
ಶಂಕರ ಕಣ್ಣಿನ ಆಸ್ಪತ್ರೆ ಮತ್ತು ಟೈಟಾನ್ ಕಂಪನಿಯು ನನ್ನ ಕಣ್ಣು ಯೋಜನೆಯಡಿಯಲ್ಲಿ ಸುಮಾರು 6 ವರ್ಷಗಳಿಂದ ಸತತವಾಗಿ ನೇತ್ರ ತಪಾಸಣೆ ಮತ್ತು ಶಸ್ತ್ರಚಿಕಿತ್ಸೆ ಹಾಗೂ ಉಚಿತವಾಗಿ ಕನ್ನಡಕ ವಿತರಣೆ ಮಾಡುತ್ತಿರುವುದು ಪ್ರಶಂಸನೀಯ ಎಂದು ಅಂತರಗಂಗೆ ಬುದ್ದಿಮಾಂದ್ಯ ವಿಕಲಚೇತನ ಶಾಲೆಯ ಶಂಕರ್ ರವರು ತಿಳಿಸಿದರು.
ಅಂತರಗಂಗೆ ಬುದ್ದಿಮಾಂದ್ಯ ವಿಕಲಚೇತನ ಶಾಲೆಯ ಮಕ್ಕಳಿಗೆ ಮತ್ತು ವಯೋವೃದ್ಧರಿಗೆ ಬೆಂಗಳೂರಿನ ಶಂಕರ್ ಕಣ್ಣಿನ ಆಸ್ಪತ್ರೆಯ ವೈದ್ಯರಾದ ಪ್ರಬಿನ್, ಮತ್ತು ಸುನಿಲ್ ರವರು ನೇತ್ರ ತಪಾಸಣೆ ಮಾಡಿದರು.
ಮನುಷ್ಯನಿಗೆ ಎಲ್ಲಾ ಸಂಪತ್ತು ಇದ್ದರೂ ಅದನ್ನು ಸವಿಯಬೇಕಾದರೆ ಆರೋಗ್ಯ ಉತ್ತಮವಾಗಿರಬೇಕು. ಪ್ರಪಂಚ ನೋಡಿ ಆನಂದಿಸಬೇಕಾದರೆ ಕಣ್ಣನ್ನು ಜೋಪಾನವಾಗಿ ಇಟ್ಟುಕೊಳ್ಳಬೇಕು ಎಂದು ಶಂಕರ್ ಕಣ್ಣಿನ ಆಸ್ಪತ್ರೆಯ ಕ್ಯಾಂಪ್ ಮುಖ್ಯಸ್ಥ ಸಂತೋಷ್ ರವರು ತಿಳಿಸಿದರು.
ಬೆಂಗಳೂರಿನ ಶಂಕರ್ ಕಣ್ಣಿನ ಆಸ್ಪತ್ರೆ ಮತ್ತು ಟೈಟಾನ್ ಕಂಪನಿಯ ಸಹಯೋಗದಲ್ಲಿ ನಡೆದ ನನ್ನ ಕಣ್ಣು ಯೋಜನೆಯಡಿಯಲ್ಲಿ 60ಕ್ಕೂ ಹೆಚ್ಚು ಮಕ್ಕಳು ಮತ್ತು ವಯೋವೃದ್ಧರಿಗೆ ಉಚಿತ ನೇತ್ರ ತಪಾಸಣೆ ಮಾಡಿ ಕನ್ನಡಕಕ್ಕೆ 9 ಜನ ಆಯ್ಕೆಯಾದರು.ಮತ್ತು ಹೆಚ್ಚಿನ ಚಿಕಿತ್ಸೆ ಮತ್ತು ಶಸ್ತ್ರಚಿಕಿತ್ಸೆಗೆ 9 ಜನ ಆಯ್ಕೆಯಾಗಿದ್ದಾರೆ. ಕನ್ನಡಕಕ್ಕೆ ಆಯ್ಕೆಯಾದವರಿಗೆ ಕೆಲವೇ ದಿನಗಳಲ್ಲಿ ಉಚಿತವಾಗಿ ವಿತರಣೆ ಮಾಡಲಾಗುವುದು ಮತ್ತು ಹೆಚ್ಚಿನ ಚಿಕಿತ್ಸೆ ಮತ್ತು ಶಸ್ತ್ರಚಿಕಿತ್ಸೆಗೆ ಒಳಪಟ್ಟವರಿಗೆ ಬೆಂಗಳೂರಿನ ಶಂಕರ್ ಕಣ್ಣಿನ ಆಸ್ಪತ್ರೆಗೆ ಕರೆತರಲು ಮನವಿ ಮಾಡಿದರು ಹಾಗೂ ಹೆಚ್ಚಿನ ಚಿಕಿತ್ಸೆ ಮತ್ತು ಶಸ್ತ್ರಚಿಕಿತ್ಸೆ ಉಚಿತವಾಗಿ ಮಾಡಿಸಲಾಗುವುದು ಎಂದರು.
ಇದೇ ಸಂದರ್ಭದಲ್ಲಿ ಕೋಲಾರ ನಗರದ ಅಂತರಗಂಗೆ ಬುದ್ದಿಮಾಂದ್ಯ ವಿಕಲಚೇತನ ಶಾಲೆಯ ಶಂಕರ್, ಪ್ರಜ್ಞಾ ಶಂಕರ್, ಬೆಂಗಳೂರಿನ ಶಂಕರ್ ಕಣ್ಣಿನ ಆಸ್ಪತ್ರೆಯ ಕ್ಯಾಂಪ್ ಮುಖ್ಯಸ್ಥ ಸಂತೋಷ್, ಅಭಿಜಿತ್, ಅನೀಲ್, ಅಂತರಗಂಗೆ ಬುದ್ದಿಮಾಂದ್ಯ ವಿಕಲಚೇತನ ಶಾಲೆಯ ಮಕ್ಕಳು, ವಯೋವೃದ್ಧರು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ವರದಿ: ವಿಷ್ಣು ಕೋಲಾರ