ಅ.7 ರಿಂದ ಕಡ್ಡಾಯವಾಗಿ ಆಸ್ತಿದಾರರು ಈ-ಸ್ವತ್ತು ಮಾಡಿಸಲು ಅರ್ಜಿ ಸಲ್ಲಿಸಬೇಕು
(SHIVAMOGA): ಸಾಗರ ನಗರಸಭೆ ವ್ಯಾಪ್ತಿಯಲ್ಲಿ 23,058 ಖಾತಾ ಆಸ್ತಿಯಿರುವ ನಗರಸಭೆ ವ್ಯಾಪ್ತಿಯಲ್ಲಿ ಕೇವಲ 7,108 ಆಸ್ತಿ ಈ-ಸ್ವತ್ತು ಹೊಂದಿದೆ. ಹೀಗಾಗಿ ಸರಕಾರದ ಆದೇಶದಂತೆ ಅ.7 ರಿಂದ ಕಡ್ಡಾಯವಾಗಿ ಆಸ್ತಿದಾರರು ಈ-ಸ್ವತ್ತು ಮಾಡಿಸಲು ಅರ್ಜಿ ಸಲ್ಲಿಸಬೇಕು ಎಂದು ಉಪವಿಭಾಗಾಧಿಕಾರಿ ಆರ್. ಯತೀಶ್ ಹೇಳಿದರು.
ಸಾಗರ ನಗರಸಭೆ ಆವರಣದಯಲ್ಲಿ ಸೋಮವಾರ ಈ-ಸ್ವತ್ತು ಕುರಿತು ಮಾಹಿತಿ ನೀಡಿದ ಅವರು, ತಮ್ಮ ಜಾಗವನ್ನು ಈ-ಸ್ವತ್ತು ಮಾಡುವುದರಿಂದ ಆಸ್ತಿ ಖರೀದಿ, ಮಾರಾಟ, ಭೋಗ್ಯಕ್ಕೆ ಕೊಡುವುದು, ತೆಗೆದುಕೊಳ್ಳುವುದು, ಬ್ಯಾಂಕ್ ನಿಂದ ಸಾಲಸೌಲಭ್ಯ ಇನ್ನಿತರೆ ಸೌಲಭ್ಯಕ್ಕೆ ಅನುಕೂಲವಾಗುತ್ತದೆ. ರಾಜ್ಯ ಸರಕಾರವು ಅ. 7ರಿಂದ ಈ-ಸ್ವತ್ತು ಕಡ್ಡಾಯಗೊಳಿಸಿದೆ. ಇದರಿಂದ ಸರಕಾರಕ್ಕೆ ಆದಾಯದ ಮೂಲವಾಗುವುದಲ್ಲದೆ, ತೆರಿಗೆ ವಂಚನೆ ತಪ್ಪಿಸಲು ಸಾದ್ಯಾವಿದೆ. ವ್ಯವಸ್ಥಿತವಾಗಿ ಖಾತೆ ಬದಲಾವಣೆಗೆ ಅನುಕೂಲವಾಗುತ್ತದೆ ಎಂದರು.
ನಗರಸಭೆ ವ್ಯಾಪ್ತಿಯಲ್ಲಿ ಬಾಕಿ ಇರುವ 15 ಸಾವಿರಕ್ಕೂ ಹೆಚ್ಚು ಆಸ್ತಿಗಳಿಗೆ ಈ-ಸ್ವತ್ತು ಮಾಡಿಸಿಲ್ಲ. ಇವೆಲ್ಲವನ್ನೂ ಕಾವೇರಿ ತಂತ್ರಾಶದಿಂದ ವ್ಯಾಪ್ತಿಗೆ ತರುವ ಮೂಲಕ ಈ-ಸ್ವತ್ತು ಮಾಡಿಸಲು ದಸರಾ ಹಬ್ಬದ ಬಳಿಕ ನಗರಸಭೆ ವತಿಯಿಂದ ಪ್ರತಿ ವಾರ್ಡ್ನಲ್ಲೂ ಸಭೆ ನಡೆಸಿ, ಸಾರ್ವಜನಿಕರಿಗೆ ಅಗತ್ಯ ಮಾಹಿತಿ ನೀಡುವುದು, ನಗರಸಭೆ ಕಚೇರಿಯನ್ನು ಮನೆಬಾಗಿಲಿಗೆ ತಂದು ಸ್ಥಳದಲ್ಲಿಯೆ ಅರ್ಜಿ ಪಡೆದು ಈ-ಸ್ವತ್ತು ಮಾಡಿಸಲಾಗುತ್ತದೆ. ಎಲ್ಲರೂ ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.
ಪೌರಾಯುಕ್ತ ಎಚ್.ಕೆ.ನಾಗಪ್ಪ, ಉಪ ನೋಂದಾಣಾಕಾರಿ ಚೇತನ್, ನಗರಸಭೆ ಕಂದಾಯಾಕಾರಿ ಮಮತಾ, ಹಲವು ಅಕಾರಿಗಳು ಹಾಜರಿದ್ದರು.
ವರದಿ: ರಾಘವೇಂದ್ರ ತಾಳಗುಪ್ಪ