ಸಾಗರ ಪಟ್ಟಣದ ಮಾರಿಕಾಂಬಾ ದೇವಸ್ಥಾನದಲ್ಲಿ ಅಷ್ಟಬಂಧದ ಪ್ರಯುಕ್ತ ಗಣಹೋಮ ನಡೆಯಿತು.
(SHIVAMOGA): ಸಾಗರದ ಇತಿಹಾಸ ಪ್ರಸಿದ್ಧ ಪಟ್ಟಣದ ಶ್ರೀ ಮಾರಿಕಾಂಬಾ ದೇವಸ್ಥಾನದಲ್ಲಿ ಬುಧವಾರದಿಂದ ಮೂರು ದಿನಗಳ ಕಾಲ ನಡೆಯಲಿರುವ ಅಷ್ಟಬಂಧ, ಬ್ರಹ್ಮ ಕಲಶೋತ್ಸವ ಕಾರ್ಯಕ್ರಮಕ್ಕೆ ಇಂದು ಚಾಲನೆ ನೀಡಲಾಯಿತು…ಮೊದಲ ದಿನವಾದ ಇಂದು ಗಂಗಾ ಪೂಜೆ, ಗಣಹೋಮಗಳು ನಡೆಯಿತು.
ಇದೆ ಸಮಯದಲ್ಲಿ ಶ್ರೀ ಮಾರಿಕಾಂಬಾ ದೇವಸ್ಥಾನಗಳ ವ್ಯವಸ್ಥಾಪಕ ಸಮಿತಿ ವತಿಯಿಂದ 42 ವರ್ಷದ ಬಳಿಕ ಇದೆ ವರ್ಷ ನಡೆಯುತ್ತಿರುವ ಅಷ್ಟಬಂಧ ಕಾರ್ಯಕ್ರಮದಲ್ಲಿ ಬುಧವಾರ ಮುಂಜಾನೆ ಪಟ್ಟಣದ ಗಣಪತಿ ದೇವಸ್ಥಾನದಿಂದ ಗಂಗಾ ಪೂಜೆಯೊಂದಿಗೆ ಅಷ್ಟಬಂಧ ಸಾಮಗ್ರಿಗಳನ್ನು ಮೆರವಣಿಗೆ ಮೂಲಕ ಮಾರಿಕಾಂಬಾ ದೇವಸ್ಥಾನಕ್ಕೆ ಗಂಗೆಯನ್ನು ತಂದು ಮಾರಿಕಾಂಬಾ ತವರು ಮನೆ ಹಾಗೂ ಗಂಡನಮನೆ ದೇವಸ್ಥಾನದಲ್ಲಿ ಪ್ರತಿಷ್ಟಾಪಿಸಿ, ಗಣಹೋಮ ನಡೆಸಿ.
ವೇ.ಬ್ರ. ಹೃಷಿಕೇಶ ಬಾಯರಿ ಬಾರ್ಕೂರ್ ಅವರ ನೇತೃತ್ವದಲ್ಲಿ ಮೊದಲ ದಿನದ ಪೂಜಾ ಕರ್ಯಕ್ರಮಗಳು ನಡೆಯಿತು. ಸಮಿತಿ ಅಧ್ಯಕ್ಷ ಕೆ.ಎನ್.ನಾಗೇಂದ್ರ, ಪ್ರಧಾನ ಕಾರ್ಯದರ್ಶಿ ಗಿರಿಧರ ರಾವ್, ಉಪಾಧ್ಯಕ್ಷ ಸುಂದರಸಿಂಗ್, ಪ್ರಮುಖರಾದ ಟಿ.ವಿ.ಪಾಂಡುರಂಗ, ತಾರಾಮೂರ್ತಿ, ನವೀನ್, ಲೋಕೇಶ ಕುಮಾರ್, ಆರ್.ಚಂದ್ರು, ಗಂಗಾಧರ ಜಂಬಿಗೆ, ಮೋಹನ್, ಜಯರಾಮ್ ಸೇರಿದಂತೆ ನೂರಾರು ಭಕ್ತರು ಪೂಜಾ ಕರ್ಯದಲ್ಲಿ ತೊಡಗಿಕೊಂಡಿದ್ದರು.
ವರದಿ: ರಾಘವೇಂದ್ರ ತಾಳಗುಪ್ಪ