Entertainmentನ್ಯೂಸ್ಮನರಂಜನೆ

ಭಾರತದ ರಾಷ್ಟ್ರಪಿತ ಗಾಂಧಿ. ಭಾರತದ ರಾಷ್ಟ್ರೀಯ ಹೋರಾಟದಲ್ಲಿ ಗಾಂಧಿಯವರ ಪಾತ್ರ ಬಹಳ ಪ್ರಮುಖವಾದದ್ದು.

ಭಾರತದ ರಾಷ್ಟ್ರಪಿತ ಗಾಂಧಿ. ಭಾರತದ ರಾಷ್ಟ್ರೀಯ ಹೋರಾಟದಲ್ಲಿ ಗಾಂಧಿಯವರ ಪಾತ್ರ ಬಹಳ ಪ್ರಮುಖವಾದದ್ದು.

(ARTICAL): ಭಾರತದ ರಾಷ್ಟ್ರೀಯ ಹೋರಾಟದಲ್ಲಿ ಗಾಂಧಿಯವರ ಪಾತ್ರ ಬಹಳ ಪ್ರಮುಖವಾದದ್ದು. ಇವರನ್ನು ರಾಷ್ಟ್ರಪಿತ, ಮಹಾತ್ಮ ಮುಂತಾದ ಹೆಸರಿಂದ ಕರೆಯಲಾಗುತ್ತದೆ. ಇವರು ಮೂಲತಃ ಗುಜರಾತಿನ ಪೊರ ಬಂದರನಲ್ಲಿ 1869 ಅಕ್ಟೋಬರ್ 2 ರಂದು ತಂದೆ ಮೋಹನ್ ದಾಸ್, ತಾಯಿ ಪುತಲಿ ಬಾಯಿ ಯವರ ಮಗನಾಗಿ ಜನಿಸುತ್ತಾರೆ.

ಭಾರತದಲ್ಲಿ ಪದವಿ ಶಿಕ್ಷಣವನ್ನು ಮುಗಿಸಿ ಇಂಗ್ಲೆಂಡಿಗೆ ಹೋಗಿ ಕಾನೂನು ಪದವಿಯನ್ನು ಪಡೆದುಕೊಂಡು. ಅಲ್ಲೇ ವಕೀಲ ವೃತ್ತಿಯನ್ನು ಮಾಡುತ್ತಿದ್ದರು.1915 ರಲ್ಲಿ ಭಾರತಕ್ಕೆ ಬರುತ್ತಾರೆ. ಅವರು ಭಾರತಾದ್ಯಂತ ಪ್ರವಾಸ ಮಾಡಿ ಜನರ ಜೀವನ ಸ್ಥಿತಿಗತಿ ತಿಳಿದುಕೊಂಡರು.1916 ರಲ್ಲಿ ಸಬರಮತಿ ಆಶ್ರಮವನ್ನು ಸ್ಥಾಪಿಸಿ ಸತ್ಯ ಮತ್ತು ಅಹಿಂಸೆ ಆದರ್ಶಗಳನ್ನು ಅನುಸರಿಸಲಾರಂಭಿಸಿದರು.

ಮೊದಮೊದಲು ಇವರು 1917ರಲ್ಲಿ ಚಂಪಾರಣ್ಯ ಸತ್ಯಾಗ್ರಹವನ್ನು ನಡೆಸಿ ನೀಲಿ ಬೆಳೆಗಾರರ ಸಮಸ್ಯೆಯನ್ನು ಬಗೆಹರಿಸುತ್ತಾರೆ. 1918 ರಲ್ಲಿ ಅಹಮದ್ ಬಾದ್ ನ ಗಿರಣಿ ಕಾರ್ಮಿಕರ ಪರವಾಗಿನಿಂತು ಅವರಿಗೆ ನ್ಯಾಯವನ್ನು ಒದಗಿಸುತ್ತಾರೆ. ಹಾಗೆಯೇ 1918 ರಲ್ಲಿ ಖೇಡ ಸತ್ಯಾಗ್ರಹವನ್ನು ಬ್ರಿಟಿಷರ ವಿರುದ್ಧವಾಗಿ ನಡೆಸಿ ರೈತರ ತೆರಿಗೆಯಲ್ಲಿ ವಿನಾಯಿತಿ ಪಡೆಯುತ್ತಾರೆ.

1919ರಲ್ಲಿ ಬ್ರಿಟಿಷ್ ಸರ್ಕಾರ ರೌಲೆಟ್ ಕಾಯ್ದೆ ಅಡಿ ಬ್ರಿಟಿಷ್ ಸೇನಾಧಿಕಾರಿಯದ ಜನರಲ್ ಡಯರ್ ಎಂಬುವನು ಪಂಜಾಬಿನ ಅಮೃತಸರ ಎಂಬಲ್ಲಿ ನರೆದಿದ್ದ ಜನರ ಮೇಲೆ ಗುಂಡು ಹಾರಿಸುತ್ತಾನೆ. ಇದರಿಂದ ಮನನೊಂದ ಗಾಂಧಿ ಹಾಗೂ ರವೀಂದ್ರನಾಥ್ ಟಾಗೋರ್ ತಮ್ಮ ಪದವಿ ಪುರಸ್ಕಾರಗಳನ್ನೆಲ್ಲ ಬ್ರಿಟಿಷ್ ಸರಕಾರಕ್ಕೆ ಹಿಂತಿರುಗಿಸುತ್ತಾರೆ. ಹಾಗೆ ಖಿಲಾಫತ್ ಚಳುವಳಿಗೆ ಬೆಂಬಲ ನೀಡುತ್ತಾರೆ.

ಇಲ್ಲಿಂದ ಗಾಂಧಿಯವರು ಭಾರತ ರಾಷ್ಟ್ರೀಯ ಚಳುವಳಿಯಲ್ಲಿ ಇಳಿಯುತ್ತಾರೆ. ಇದರಿಂದ 1920 ರಿಂದ 1947ರ ಅವಧಿಯನ್ನು ಗಾಂಧಿ ಯುಗ, ಗಾಂಧಿ ಮಾದರಿ, ಹೀಗೆ ಹೆಚ್ಚು ಹಲವಾರು ಹೆಸರುಗಳಿಂದ ಕರೆಯುತ್ತಾರೆ. ಇವರು ಮೊದಲು 1920 ರಲ್ಲಿ ಅಸಹಕರ ಚಳುವಳಿಗೆ ಕರೆಯನ್ನು ನೀಡುತ್ತಾರೆ. ಸ್ವದೇಶಿ ಆಂದೋಲನಕ್ಕೆ ಚಾಲನೆ ನೀಡುತ್ತಾರೆ. ವಿದೇಶಿ ವಸ್ತುಗಳನ್ನು ಸುಟ್ಟು ಹಾಕುತ್ತಾರೆ.1922 ರಲ್ಲಿ ಚೌರ ಚೌರಿ ಎಂಬ ಗ್ರಾಮದಲ್ಲಿ ಶಾಂತಿಯುತವಾಗಿ ಹೋರಾಟ ನಡೆಸುತ್ತಿರುವ ಚಳುವಳಿ ಕ್ರಾಂತಿಯ ಮಾರ್ಗ ತಲುಪಿತು ಇದರಿಂದ ಮನನೊಂದು ಗಾಂಧಿ ಅಸಹಕಾರ ಚಳುವಳಿ ಹಿಂದಕ್ಕೆ ಪಡೆಯುತ್ತಾರೆ.

1930 ರಲ್ಲಿ ಗಾಂಧೀಜಿ ಅವರು ಕಾನೂನು ಭಂಗ ಚಳುವಳಿಯನ್ನು ಕರೆ ನೀಡಿ ಬ್ರಿಟಿಷರ ಕಾನೂನು ಅನುಸರಿಸಬಾರದು ಅವುಗಳನ್ನು ಮುರಿದು ಹಾಕುವಂತೆ ಕರೆ ನೀಡುತ್ತಾರೆ. ಇದರಿಂದ ಬ್ರಿಟಿಷ್ ಸರ್ಕಾರ ಗಾಂಧಿ ಮತ್ತು ಹಲವಾರು ನಾಯಕರನ್ನು ಬಂಧಿಸುತ್ತಾರೆ. ನಂತರದ ಹೊರ ಬಂದ ಗಾಂಧಿ ಉಪ್ಪಿನ ಸತ್ಯಾಗ್ರಹ ಆರಂಭಿಸಿ. ಬ್ರಿಟೀಷ್ ಸರ್ಕಾರ ವಿದಿಸಿದ ಉಪ್ಪಿನ ತೆರಿಗೆಯನ್ನು ಮುರಿದು ಹಾಕುತ್ತಾರೆ. ತಾವೇ ಸ್ವತಃ ದಂಡಿಯಲ್ಲಿ ಉಪ್ಪನ್ನು ತಯಾರಿಸಿ ಜನರಿಗೆ ಹಂಚುತ್ತಾರೆ. ಇದು ಇಡೀ ಭಾರತದಾತ್ಯಂತ ಈ ಚಳುವಳಿ ಹಬ್ಬುತದೆ.

ಭಾರತದ ರಾಜಕೀಯ ವಿಚಾರಗಳು ಚರ್ಚೆ ನಡೆಸುವ ಬ್ರಿಟಿಷ್ ಸರ್ಕಾರ ಭಾರತೀಯ ನಾಯಕರನ್ನು ಇಂಗ್ಲೆಂಡ್ ಆಹ್ವಾನಿಸುತ್ತದೆ. ದುಂಡುಮೇಜಿನ ಸಮ್ಮೇಳನಕ್ಕೆ. 1930ರಲ್ಲಿ ಮೊದಲ ದುಂಡುಮೇಜಿನ ಸಮ್ಮೇಳನ ನಡೆದಾಗ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಭಾಗವಹಿಸಲಿಲ್ಲ. 1931 ರಲ್ಲಿ ಎರಡನೇ ದುಂಡುಮೇಜಿನ ಸಮ್ಮೇಳನದಲ್ಲಿ ಗಾಂಧಿ ಹಾಗೂ ಭಾರತೀಯ ರಾಷ್ಟ್ರೀಯ ಕಾಂಗ್ರೆಸಿಗರು ಭಾಗವಹಿಸಿದರು ಬ್ರಿಟಿಷ್ ಸರ್ಕಾರ ಕೆಲವು ಬೇಡಿಕೆ ಈಡೇರಿಸಲು ಭರವಸೆ ನೀಡಿತು. 1932 ರಲ್ಲಿ ನಡೆದ 3ನೇ ದುಂಡು ಮೇಜಿನ ಸಮ್ಮೇಳನದಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಭಾಗವಹಿಸಲಿಲ್ಲ. ಇದರಿಂದ ಈ ಮೂರು ಸಮ್ಮೇಳನಗಳು ವಿಫಲವಾದವು.

1939ರಲ್ಲಿ ಎರಡನೇ ಮಹಾಯುದ್ಧ ಆರಂಭಗೊಳ್ಳುತ್ತದೆ . ಇದರಿಂದ ಬ್ರಿಟಿಷ್ ಸರ್ಕಾರ. ಯುದ್ಧದಲ್ಲಿ ಭಾರತೀಯರು ನಮ್ಮ ಪರವಾಗಿ ನಿಲ್ಲಲು ಮನವೊಲಿಸಲು ಪ್ರಯತ್ನ ಮಾಡುತ್ತಾರೆ. ಇದನ್ನು ಗಾಂಧೀಜಿ ತಿರಸ್ಕರಿಸಿ.1942 ರಲ್ಲಿ ಭಾರತ ಬಿಟ್ಟು ತೊಲಗಿ ಚಳುವಳಿಯನ್ನು ಆರಂಭ ಮಾಡುತ್ತಾರೆ. “ಮಾಡು ಇಲ್ಲವೇ ಮಡಿ “ಇಂದು ಘೋಷಿಸುತ್ತಾರೆ. ಇಡೀ ಭಾರತದಾತ್ಯಂತ ಚಳುವಳಿ ವ್ಯಾಪಕವಾಗಿ ಹರಡುತ್ತದೆ. ಇದರಿಂದ ಕೆರಳಿದ ಬ್ರಿಟಿಷರು ಭಾರತಿಯ ನಾಯಕರನ್ನು ಬಂಧಿಸಿ ಜೈಲಿಗೆ ಹಾಕುತ್ತಾರೆ.

ಬ್ರಿಟಿಷ್ ಅಧಿಕಾರಿ ಸ್ಟಾಫರ್ಡ್ ಕ್ರಿಪ್ಸ್ ಎಂಬುವರು ಭಾರತೀಯರ ಮನವೊಲಿಸಲು ಬಂದು ಎರಡನೇ ಮಹಾಯುದ್ಧ ಮುಗಿದ ನಂತರ ಭಾರತಕ್ಕೆ ಸ್ವಾತಂತ್ರ್ಯ ನೀಡಿವ ಭರವಸೆ ನೀಡಿದನು. ಆದರೆ ಗಾಂಧಿಯವರು ಈ ಸಲಹೆಯನ್ನು ತಿರಸ್ಕರಿಸಿ “ಮುಳುಗುತ್ತಿರುವ ಬ್ಯಾಂಕಿನ ಮುಂದಿನ ದಿನಗಳ ಚೆಕ್ಕು” ಎಂದು ಅಭಿಪ್ರಾಯ ಪಡುತ್ತಾರೆ.

ಗಾಂಧಿಯವರ ಹೋರಾಟಕ್ಕೆ ಮಣಿದ ಬ್ರಿಟಿಷ್ ಸರ್ಕಾರ ಭಾರತಕ್ಕೆ ಸ್ವತಂತ್ರ ಬಿಟ್ಟು ಕೊಡಲು ಬಯಸಿದರು. ಆದರೆ ಮುಸ್ಲಿಂ ಲೀಗ್ ಪ್ರತ್ಯೇಕ ಪಾಕಿಸ್ತಾನ ಬೇಡಿಕೆಯನ್ನು ಮುಂದೆ ಇಟ್ಟರು.ಇದನ್ನು ಬ್ರಿಟಿಷ್ ಸರ್ಕಾರ ಒಪ್ಪಲಿಲ್ಲ. ಮುಸ್ಲಿಂ ಲೀಗ್ ನಾಯಕರಾದ ಮಹಮದ್ ಅಲಿ ಜಿನ್ನಾ ಅವರು “ನೇರ ಕಾರ್ಯಚರಣೆಗೆ” ಕರೆ ನೀಡುತ್ತಾರೆ. ಇದರಿಂದ ಭಾರತದಲ್ಲಿ ಹಿಂಸಾತ್ಮಕ ಚಟುವಟಿಕೆ ಸಂಭವಿಸಿದವು. ಆಗ ಸ್ವಾತಂತ್ರ್ಯ ಬಿಟ್ಟುಕೊಡಲು ಭಾರತಕ್ಕೆ ಬಂದ ಕೊನೆಯ ವೈಸರಾಯ್ ಲಾರ್ಡ್ ಮೌಂಟ್ ಬ್ಯಾಟನ್ ಭಾರತ ಮತ್ತು ಪಾಕಿಸ್ತಾನ ಎಂಬ ಎರಡು ದೇಶಗಳನ್ನಾಗಿ ಮಾಡಿ ಭಾರತಕ್ಕೆ ಸ್ವತಂತ್ರ ಬಿಟ್ಟುಕೊಡಲು ನಿರ್ಧರಿಸಿದನು. ಆದರೆ ಗಾಂಧೀಜಿಯವರು ದೇಶದ ವಿಭಜನೆಯನ್ನು ಇಷ್ಟಪಡಲಿಲ್ಲ ಆದರೂ ಸಹ ದೇಶ ಎರಡು ಭಾಗವನ್ನಾಗಿ 1947 ಅಗಸ್ಟ್ 15 ವಿಭಜನೆ ಗೊಂಡಿತು. ಈ ಭಾರತ ಸ್ವತಂತ್ರ ಹೋರಾಟದಲ್ಲಿ ಗಾಂಧಿಯವರ ಪಾತ್ರ ಹಿರಿದಾದದ್ದು. ಇದನ್ನು ಅರಿಯದೆ ನ್ಯಾಥರಾಮ್ ಗೂಡ್ಸೆ 1948 ಜನವರಿ 31 ರಂದು ಗಾಂಧಿಯನ್ನು ಹತ್ಯೆ ಮಾಡಲಾಗುತ್ತದೆ. ಇದರಿಂದ ಇವರ ಮರಣದ ದಿನವನ್ನು ಹುತಾತ್ಮರ ದಿನವೆಂದು ಆಚರಿಸಲಾಗಿದೆ. ಹೀಗೆ ಗಾಂಧೀಜಿಯವರು ಸತ್ಯಾ ,ಶಾಂತಿ, ಅಹಿಂಸೆ .ಎಂಬ ತತ್ವದ ಹೋರಾಟ ನಡೆಸಿ ಭಾರತಕ್ಕೆ ಸ್ವತಂತ್ರ ಕೊಡಲು ಯಶಸ್ವಿಯಾದರು.

ಅಮಿತ್ . ಆರ್ ಆನಂದಪುರ

Leave a Reply

Your email address will not be published. Required fields are marked *

Scan the code