ಪೊಲೀಸರಿಂದ ಅದ್ದೂರಿಯಾಗಿ ಗಣೇಶನ ಸ್ವಾಗತ..
(SHIVAMOGA): ಶಿವಮೊಗ್ಗ ಜಿಲ್ಲೆಯ ಆನಂದಪುರ ಪೊಲೀಸ್ ಠಾಣೆಯಲ್ಲಿ ಗಣಪತಿ ಹಬ್ಬದ ಪ್ರಯುಕ್ತ ಅದ್ದೂರಿಯಾಗಿ ಗಣಪತಿಯನ್ನು ತಂದು ಪ್ರತಿಷ್ಠಾಪಿಸಲಾಗಿತ್ತು.
ಗಣಪತಿ ಹಬ್ಬದ ದಿನಗಳಲ್ಲಿ ಪೊಲೀಸರು ಕೆಲಸದ ಒತ್ತಡ ದಿಂದಿರುತ್ತಾರೆ. ಕೆಲಸದಲ್ಲಿ ರಜೆ ಸಿಗದ ಕಾರಣ ಊರುಕೇರಿ ಗಳಿಗೆ ಹೋಗಿ ಹಬ್ಬದ ಸಂಭ್ರಮಾಚರಣೆ ಮಾಡಲಾಗುವುದಿಲ್ಲ.
ಆದ್ದರಿಂದ ಆನಂದಪುರ ಪೊಲೀಸ್ ಠಾಣೆಯಲ್ಲಿ ವಿಶೇಷವಾಗಿ ಗಣಪತಿಯನ್ನು ಪೋಲಿಸ್ ಸಿಬ್ಬಂದಿಗಳೇ ಅದ್ದೂರಿಯಿಂದ ತಂದು ಮಂಟಪವನ್ನು ಮಾಡಿ ಗಣಪತಿಯನ್ನು ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಯುವರಾಜ್ ಕಂಬಳಿ , ಸಹಾಯಕ ಸಬ್ ಇನ್ಸ್ಪೆಕ್ಟರ್ ದೇವಿದಾಸ್ ಮತ್ತು ವೆಂಕಟೇಶ್ ಹಾಗೂ ದಿವಾಕರ್ ನಾಯ್ಕ್, ಶಶಿಕುಮಾರ್, ಪರಶುರಾಮ್, ಜನಾರ್ಧನ್, ಸುಬ್ರಹ್ಮಣ್ಯ, ತಾಹಿರ್ , ನಿರಂಜನ್ ,ಸಂತೋಷ್ , ಪ್ರಶಾಂತ್, ಸಂತೋಷ್ ಮತ್ತಿತರರು ಇದ್ದರು.
ವರದಿ: ಅಮಿತ್ ಆರ್ ಆನಂದಪುರ