ಹದಿನೈದು ದಿನ ಗಣೇಶೋತ್ಸವ ಸಂಭ್ರಮ
66ನೇ ವರ್ಷದ ಉತ್ಸವಕ್ಕೆ ಸೆ.7ರಂದು ಚಾಲನೆ| ಶೃಂಗೇರಿ ಜಗದ್ಗುರುಗಳು ಭಾಗಿ
(CHIKKAMAGALURU): ಚಿಕ್ಕಮಗಳೂರು ಜಿಲ್ಲೆಯಲ್ಲಿ ಅತಿ ಹೆಚ್ಚು ಜನ ಸೇರುವ, 66ನೇ ಗಣೇಶೋತ್ಸವ ಸಂಭ್ರಮಕ್ಕೆ ಸಜ್ಜಾಗಿರುವ ಬಾಳೆಹೊನ್ನೂರು ಪಟ್ಟಣದ ವಿದ್ಯಾಗಣಪತಿ ಸೇವಾ ಸಮಿತಿ ವತಿಯಿಂದ ೬೬ನೇ ವರ್ಷದ ವಿದ್ಯಾಗಣಪತಿ ಮಹೋತ್ಸವ ಸೆ.7ರಿಂದ 21ರವರೆಗೆ ಒಟ್ಟು 15 ದಿನಗಳ ಕಾಲ ವಿಜೃಂಭಣೆಯಿOದ ನಡೆಯಲಿದೆ ಎಂದು ಸಮಿತಿಯ ಕಾರ್ಯದರ್ಶಿ ಸುರೇಂದ್ರ ಹಾಗೂ ಸಿ.ವಿ.ಸುನೀಲ್ ಜಂಟಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಸೆ.7ರಂದು ಬೆಳಿಗ್ಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ವಿದ್ಯಾಗಣಪತಿಯ ಪ್ರತಿಷ್ಠಾಪನೆ ನಡೆಯಲಿದೆ. ಪ್ರತಿನಿತ್ಯ ಮಧ್ಯಾಹ್ನ, ರಾತ್ರಿ ವಿದ್ಯಾಗಣಪತಿಗೆ ಮಹಾಪೂಜಾ ನೆರವೇರಲಿದೆ. ಪ್ರತಿನಿತ್ಯ ರಾತ್ರಿ 8 ಗಂಟೆಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ನಾಡಿನ ಹೆಸರಾಂತ ಕಲಾ ತಂಡಗಳು, ಪ್ರಖ್ಯಾತ ಕಲಾವಿದರುಗಳು ಭಾಗವಹಿಸಲಿದ್ದಾರೆ
ಸೆ.20ರಂದು ಬೆಳಿಗ್ಗೆ ಗಣಪತಿ ಸನ್ನಿಧಿಯಲ್ಲಿ ಗಣಹೋಮ ನಡೆಯಲಿದೆ. ಸಂಜೆ 9 ಗಂಟೆಗೆ ಗಣೇಶೋತ್ಸವದ ಸಮಾರೋಪ ಸಮಾರಂಭ ನಡೆಯಲಿದ್ದು, ಶೃಂಗೇರಿ ಜಗದ್ಗುರು ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಲಿದ್ದಾರೆ.
ಸೆ.21ರಂದು ಮಧ್ಯಾಹ್ನ 15 ಸಾವಿರಕ್ಕೂ ಅಧಿಕ ಭಕ್ತರಿಗೆ ಅನ್ನ ಸಂತರ್ಪಣೆ ನಡೆಯಲಿದೆ, ಬಳಿಕ ವಿಸರ್ಜನಾ ಪೂಜೆ ನೆರವೇರಲಿದ್ದು, ಮಧ್ಯಾಹ್ನ 3 ಗಂಟೆಯ ಬಳಿಕ ವಿದ್ಯಾಗಣಪತಿಯ ಉತ್ಸವ ಪಟ್ಟಣದಲ್ಲಿ ನಡೆಯಲಿದೆ. ಉತ್ಸವದಲ್ಲಿ ಚಲಿಸುವ ಆರ್ಕೆಸ್ಟ್ರಾ, ಕೀಲುಕುದುರೆ, ಗೊಂಬೆ, ಕರಗ ನೃತ್ಯ, ಚಂಡೆ, ಹಲಗೆವಾದನ ಸೇರಿದಂತೆ ಹಲವು ಆಕರ್ಷಣೆಗಳು ಇರಲಿದೆ. ಜೇಸಿ ವೃತ್ತದ ಬಳಿ ವಿಶೇಷ ಸಿಡಿಮದ್ದು ಪ್ರದರ್ಶನ ನಡೆಯಲಿದೆ. ನಂತರ ವಿದ್ಯಾಗಣಪತಿಯನ್ನು ಭದ್ರಾನದಿಯಲ್ಲಿ ಜಲಸ್ತಂಭನಗೊಳಿಸಲಾಗುವುದು ಎಂದು ತಿಳಿಸಿದ್ದಾರೆ.
ಸಾಂಸ್ಕೃತಿಕ ಕಾರ್ಯಕ್ರಮಗಳು
ಸೆ.7 – ಸ್ಥಳೀಯ ಭಕ್ತವೃಂದದವರಿOದ ಭಜನಾ ಕಾರ್ಯಕ್ರಮ
ಸೆ.8 – ಶಿವಮೊಗ್ಗ ಲಲಿತಮ್ಮ ತಂಡದಿOದ ಹರಿಕಥಾ ಪ್ರಸಂಗ
ಸೆ.8- ಸಾರ್ವಜನಿಕರಿಗಾಗಿ ಛದ್ಮ ವೇಷ ಸ್ಪರ್ಧೆ
ಸೆ.10 – ಸೀತೂರು ವಿನಾಯಕ ಯಕ್ಷಗಾನ ಮಂಡಳಿಯಿOದ ವಜ್ರದೈವ ಬೊಬ್ಬರ್ಯ ಯಕ್ಷಗಾನ.
ಸೆ.11 – ಸ್ಥಳೀಯ ಶಾಲಾ ಕಾಲೇಜು ವಿದ್ಯಾರ್ಥಿಗಳಿಂದ ಮನರಂಜನಾ ಕಾರ್ಯಕ್ರಮ.
ಸೆ.12– ಉಡುಪಿ ಕಲಾಮಯಂ ತಂಡದಿOದ ಜಾನಪದ ನೃತ್ಯ, ಸಂಗೀತ.
ಸೆ.13 – ಮಂಗಳೂರಿನ ಪ್ರಶಾಂತ್ಬಾಬು ತಂಡದಿOದ ಸಂಗೀತ ರಸಸಂಜೆ.
ಸೆ.14 – ಜೇಸಿಐ ಸಂಸ್ಥೆ ಸಹಯೋಗದಲ್ಲಿ ರಾಜ್ಯಮಟ್ಟದ ನೃತ್ಯ ಸ್ಪರ್ಧೆ.
ಸೆ.15 – ಮಂಗಳೂರಿನ ಕಲಾಸಂಗಮ ಕಲಾವಿದರಿಂದ ಮಣಿಕಂಠ ಮಹಿಮೆ ನಾಟಕ.
ಸೆ.16 – ನಿಶ್ಚಲ್ ಜಾದೂಗಾರ್ ತಂಡದಿOದ ಮ್ಯಾಜಿಕ್ ಪ್ರದರ್ಶನ.
ಸೆ.17 – ಬಿ.ಲೋಕನಾಥ್ ಭದ್ರಾವತಿ ಬ್ರರ್ಸ್ ತಂಡದಿOದ ಆರ್ಕೆಸ್ಟ್ರಾ.
ಸೆ.18 – ಮಂಜೇಶ್ವರದ ಶಾರದಾ ಆರ್ಟ್ಸ್ ಕಲಾವಿದರಿಂದ ಕಥೆ ಎಡ್ಡೆಂಡು ತುಳು ನಾಟಕ.
ಸೆ.19 – ಮಂಗಳೂರು ಚೇತನ್ ಶೆಟ್ಟಿ ನೇತೃತ್ವದ ಡ್ಯಾನ್ಸಿಂಗ್ ಸ್ಟಾರ್ ತಂಡದಿoದ ನೃತ್ಯ ಪ್ರದರ್ಶನ.
ಸೆ.20 – ಕೊಪ್ಪದ ಎನ್.ತಾಜ್ ನೇತೃತ್ವ ರಿದಂ ಲೈವ್ ಮ್ಯೂಸಿಕ್ ತಂಡದಿ0ದ ಆರ್ಕೆಸ್ಟ್ರಾ.
ಸೆ.21– ಮೆಲೋಡಿ ಮೇರ್ಸ್ ತಂಡದಿoದ ಸಂಗೀತ ರಸಮಂಜರಿ ಕಾರ್ಯಕ್ರಮ.