ದತ್ತ ಪೀಠದಲ್ಲಿ ಗ್ಯಾರವಿ ಹಬ್ಬ ಆಚರಣೆ, ನ್ಯಾಯಾಲಯದ ಆದೇಶ ಉಲ್ಲಂಘನೆ.
(CHIKKAMAGALURU): ಕರ್ನಾಟಕ ಟಿಪ್ಪುಸುಲ್ತಾನ್ ಚಾರಿಟಬಲ್ ಟ್ರಸ್ಟ್ ನಿಂದ ಬಾಬಾಬುಡನ್ ಗಿರಿಯಲ್ಲಿ ಗ್ಯರಾವಿ ಹಬ್ಬ ಆಚರಣೆ, ವಿಶ್ವ ಹಿಂದೂ ಪರಿಷತ್ ಬಜರಂಗದಳ ಚಿಕ್ಕಮಗಳೂರು ವತಿಯಿಂದ ವಿರೋಧ ವ್ಯಕ್ತ ಪಡಿಸಲಾಗಿದೆ. ಸೂಕ್ತ ಕ್ರಮ ಜರುಗಿಸದಿದ್ದಾರೆ ಹೋರಾಟಕ್ಕೂ ಸಿದ್ಧ.
ತಾ॥ 22-12-2024 ರಂದು ಶ್ರೀ ಗುರುದತ್ತಾತ್ರೇಯ ಸ್ವಾಮಿ ಪೀಠದಲ್ಲಿ ಮುಸಲ್ಮಾನರು ಗ್ಯಾರವಿ ಎಂಬ ಆಚರಣೆ ಮಾಡಿರುತ್ತಾರೆ. ಈ ಗ್ಯಾರವಿ ಆಚರಣೆಯಲ್ಲಿ ಕುರಿ ಕಡಿದು ಮಾಂಸಾಹಾರ ಊಟ ತಯಾರಿಸಿ ಹಲವಾರು ಜನರಿಗೆ ಬಡಿಸಿರುತ್ತಾರೆ. ಈ ಗ್ಯಾರವಿ ಆಚರಣೆಗೆ ಅನುಮತಿಯನ್ನು ಜಿಲ್ಲಾಧಿಕಾರಿಗಳು ಯಾವ ಆದೇಶದಂತೆ ನೀಡಿರುತ್ತಾರೆ. ಚಿಕ್ಕಮಗಳೂರು ಜಿಲ್ಲಾಧಿಕಾರಿಗಳು ಹಾಗೂ ಚಿಕ್ಕಮಗಳೂರು ಮುಜರಾಯಿ ಅಧಿಕಾರಿಗಳು ಈ ಆಚರಣೆಗೆ ಅನುಮತಿಸಿ ಭಾರತದ ಸರ್ವೋಚ್ಛ ನ್ಯಾಯಾಲಯದ ಆದೇಶವನ್ನು ಉಲ್ಲಂಘನೆ ಮಾಡಿರುತ್ತಾರೆ. ಈ ಅಧಿಕಾರಿಗಳನ್ನು ಅಮಾನತಿನಲ್ಲಿರಿಸಿ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು.
ಈ ಗ್ಯಾರವಿ ಆಚರಣೆಯಲ್ಲಿ ಊಟವನ್ನು ಅಲ್ಲಿರುವಂತಹ ಎಲ್ಲಾ ಜನರಿಗೂ ಮತ್ತು ಪೊಲೀಸ್ ಸಿಬ್ಬಂದಿಗಳಿಗೂ ಕೂಡ ಬಡಿಸಿರುತ್ತಾರೆ. ದತ್ತಪೀಠದಲ್ಲಿ ಯಾವುದೇ ತರಹದ ಹೊಸ ಆಚರಣೆಗೆ ಅವಕಾಶಗಳು ಇರುವುದಿಲ್ಲ. ದತ್ತಪೀಠಕ್ಕೆ ಒಂದು ವ್ಯವಸ್ಥಾಪನಾ ಸಮಿತಿ ನೇಮಕವಾಗಿದ್ದು, ಈ ಸಮಿತಿಗೆ ದತ್ತಜಯಂತಿ, ದತ್ತಮಾಲೆ ಮತ್ತು ಉರೂಸ್ ಆಚರಣೆ ಮಾಡಲು ಅವಕಾಶವಿರುತ್ತದೆ. ಆದರೆ ಈ ವ್ಯವಸ್ಥಾಪನಾ ಸಮಿತಿಯ ಗಮನಕ್ಕೆ ತರದೆ ಈ ಗ್ಯಾರವಿ ಆಚರಣೆಯನ್ನು ಮಾಡಲು ಜಿಲ್ಲಾಧಿಕಾರಿಗಳು ಅವಕಾಶ ಮಾಡಿಕೊಟ್ಟಿರುತ್ತಾರೆ. ಈ ಗ್ಯಾರವಿ ಅಚರಣೆಯನ್ನು ಮಾಡಿರುವಂತಹವರ ಮೇಲೆ ಜಿಲ್ಲಾಧಿಕಾರಿಗಳು ಯಾವ ಕ್ರಮ ಜರುಗಿಸಿದ್ದಾರೆ.
ಈ ಹಿಂದೆ ತಾ।। 20-12-2024 ರಂದು ವಿಶ್ವ ಹಿಂದೂ ಪರಿಷದ್ ವತಿಯಿಂದ ಗ್ಯಾರವಿ ಆಚರಣೆಗೆ ಅವಕಾಶ ನೀಡದಂತೆ ಮಾನ್ಯ ಜಿಲ್ಲಾಧಿಕಾರಿಗಳಿಗೆ ಪತ್ರದ ಮೂಲಕ ಕೂಡ ವಿನಂತಿ ಮಾಡಲಾಗಿತ್ತು.
ಆದ್ದರಿಂದ ಈ ವಿಷಯದ ಬಗ್ಗೆ ಜಿಲ್ಲಾಧಿಕಾರಿಗಳು ಮತ್ತು ಮುಜರಾಯಿ ಅಧಿಕಾರಿಗಳನ್ನು ಅಮಾನತ್ತು ಮಾಡಿ, ಸೂಕ್ತ ತನಿಖೆ ಮಾಡಿಸಿ ತಪ್ಪಿತಸ್ಥರ ಮೇಲೆ ಸೂಕ್ತ ಕ್ರಮ ಜರುಗಿಸಬೇಕು. ಒಂದು ವೇಳೆ ಈ ವಿಷಯದ ಬಗ್ಗೆ ತಾವೂ ಕ್ರಮ ತೆಗೆದುಕೊಳ್ಳದಿದ್ದ ಪಕ್ಷದಲ್ಲಿ ನಾವು ಹೋರಾಟ ಮಾಡಬೇಕಾಗುವುದು ಅನಿವಾರ್ಯವಾಗುತ್ತದು ಎಂದು ವಿಶ್ವ ಹಿಂದೂ ಪರಿಷತ್ ಬಜರಂಗದಳ ಚಿಕ್ಕಮಗಳೂರು ಇವರಿಂದ ತಿಳಿಸಲಾಗಿದೆ.