ಗಣಪತಿ ವಿಸರ್ಜನಾ ಕೆರೆ: ಗೌರಿಕೆರೆ | ಗೌರಿಕೆರೆ ಸ್ವಚ್ಛಗೊಳಿಸಿದ ಶ್ರೀ ರಂಗನಾಥ ದೈವಜ್ಞ ಲೋಕ ಸಂಘ.
(ಸಾಗರ): ಕಳೆದ ನಾಲ್ಕು ವರ್ಷಗಳಿಂದ ಸಾಗರ ತಾಲ್ಲೂಕಿನ ತಾಳಗುಪ್ಪ ಗ್ರಾಮದ ಗೌರಿಕೆರೆಯನ್ನು ಇದೇ ಗಣೇಶ ಹಬ್ಬದ ಹಿಂದಿನ ದಿನ ಸ್ವಚ್ಚ ಮಾಡುತ್ತಿದ್ದು ಇದಕ್ಕೆ ಸಂಘದ ಸರ್ವ ಸದಸ್ಯರೂ ಸ್ಪಂದಿಸುತ್ತಾ ಬಂದಿದ್ದರು. ಅದೇ ರೀತಿ ಈ ವರ್ಷವೂ ಶ್ರೀ ರಂಗನಾಥ ದೈವಜ್ಞ ಲೋಕ ಸಂಘ (ರಿ) ತಾಳಗುಪ್ಪ, ಇವರಿಂದ ಸ್ವಚ್ಛತಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಇದರಲ್ಲಿ ಸಂಘದ ಸದಸ್ಯರುಗಳಾದ ಗಣೇಶ್ ಶೇಟ್ (ಅಧ್ಯಕ್ಷರು), ಮೋಹನ್ ಶೇಟ್ (ಕಾರ್ಯಾಧ್ಯಕ್ಷರು) ಮತ್ತು ಸದಸ್ಯರುಗಳಾದ ಕೃಷ್ಣಶೇಟ್, ಸುರೇಶ್ ಶೆಟ್ಟಿ, ಬಂಗಾರಿ ಶೇಟ್, ಸುನಿಲ್ ಶೇಟ್, ಸಮಂತ ಶೇಟ್, ಅವಿನಾಶ್ ಶೇಟ್,ಆಕಾಶ್ ಶೆಟ್ಟಿ, ಸಂದೀಪ್ ಶೆಟ್ಟಿ ಭಾಗವಹಿಸಿರುತ್ತಾರೆ.
ಇದೇ ರೀತಿ ಇನ್ನು ಮುಂದೆಯೂ ಅನೇಕ ಕೆಲಸಗಳನ್ನು ಮಾಡುವ ಆಸೆ ಇದೆ ಎಂದು ಸಂಘದ ಅಧ್ಯಕ್ಷರು ತಿಳಿಸಿದ್ದಾರೆ. ಅಲ್ಲದೆ ತಾಳಗುಪ್ಪ ಗ್ರಾಮದ ಎಲ್ಲಾ ಕೆರೆಗಳನ್ನು ಸ್ವಚ್ಛ ಮಾಡುವುದೇ ನಮ್ಮ ಸಂಘದ ಮುಖ್ಯ ಉದ್ದೇಶವಾಗಿದೆ. ಅಲ್ಲದೆ ಸಮಾಜಮುಖಿ ಕಾರ್ಯಗಳಿಗೆ ನಮ್ಮ ಸಂಘದ ಸಹಕಾರವಿದೆ ಎಂದು ಅಧ್ಯಕ್ಷರು ತಿಳಿಸಿದರು.
ವರದಿ:- ರಾಘವೇಂದ್ರ ತಾಳಗುಪ್ಪ