ಚಿಕ್ಕಮಗಳೂರುನ್ಯೂಸ್

ರಾಜ್ಯಸರ್ಕಾರ ಬಣ್ಣ ಬಣ್ಣದ ಟೋಪಿಯ ಸರ್ಕಾರ – ಜಗದೀಶ್ಚಂದ್ರ.

ರಾಜ್ಯಸರ್ಕಾರ ಬಣ್ಣ ಬಣ್ಣದ ಟೋಪಿಯ ಸರ್ಕಾರ – ಜಗದೀಶ್ಚಂದ್ರ.

(CHIKKAMAGALURU): ಸ್ಥಗಿತಗೊoಡಿರುವ ಮಾಶಾಸನಗಳನ್ನು ಸರಿಯಾಗಿ ನೀಡಲು ಆಗ್ರಹ
ಸರ್ಕಾರ ನೀಡುತ್ತಿರುವ ವಿವಿಧ ಮಾಶಾಸನಗಳಲ್ಲಿ ಕಳೆದ 8 ತಿಂಗಳಿoದ ವಿವಿಧ ಕಾರಣವೊಡ್ಡಿ ಕಾಂಗ್ರೇಸ್ ನೇತೃತ್ವದ ರಾಜ್ಯ ಸರ್ಕಾರ ತಡೆವೊಡ್ಡಿ ಕೋಟ್ಯಾಂತರ ರೂಗಳನ್ನು ಯೋಜನೆಯ ಪಲಾನುಭವಿಗಳಿಗೆ ನೀಡದೇ ಮೋಸಮಾಡಿ ಓಟಿನ ಆಸೆಗೆ ಸೃಷ್ಟಿಸಿದ ಗ್ಯಾರೆಂಟಿ ಯೋಜನೆಗೆ ಹಣ ಹೊಂದಿಸುತ್ತಿರುವ ಅನುಮಾನ ವ್ಯಕ್ತವಾಗುತ್ತಿದೆಯಲ್ಲದೇ ಕಾಂಗ್ರೇಸ್ ನೇತೃತ್ವದ ಈ ರಾಜ್ಯಸರ್ಕಾರ ವಿವಿಧ ಬಣ್ಣದ ಟೋಪಿಗಳನ್ನು ಇಟ್ಟುಕೊಂಡಿದ್ದು ಜನತೆಗೆ ಒಂದೊoದು ಚುನಾವಣೆಯಲ್ಲಿ ಒಂದೊoದು ಬಣ್ಣದ ಟೋಪಿ ಹಾಕುತ್ತ ಜನತೆಗೆ ಮೋಸಮಾಡುತ್ತಿದೆ. ಎಂದು ಬಿಜೆಪಿ ವಕ್ತಾರ ಜಗದೀಶ್ಚಂದ್ರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಈ ಹಿಂದೆ ಬಂದoತ ಎಲ್ಲಾ ಸರ್ಕಾರಗಳು ದುರ್ಭಲ ಮತ್ತು ಹಿರಿಯನಾಗರೀಕರಿಗೆ ಅನುಕೂಲವಾಗಲೆಂದು ಹಲವು ಮಾಶಾಸನಗಳನ್ನು ಜಾರಿಗೊಳಿಸಿದ್ದವು. ನಂತರ ಬಿ ಎಸ್ ಯಡಿಯೂರಪ್ಪನವರ ಬಿಜೆಪಿ ಸರ್ಕಾರ ಕ್ರಾಂತಿಕಾರಕ ನಿಲುವು ಪ್ರದರ್ಶಿಸಿ ಕೇವಲ 4೦೦-5೦೦ ರೂ ಇದ್ದ ಮಾಶಾಸನವನ್ನು 1೦೦೦ -12೦೦ ಕ್ಕೆ ಏರಿಸಿ ಬಡವರ ಬೆನ್ನೆಲುಬಾಗಿ ನಿಂತರು. ಆದರೇ ಪ್ರಸ್ತುತ ಇರುವ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೇಸ್ ಸರ್ಕಾರ ಹೇಗಾದರೂ ಮಾಡಿ ಅಧಿಕಾರ ಹಿಡಿಯಬೇಕೆಂಬ ಹಪಾಹಪಿಯಲ್ಲಿ ಪ್ರಕಟಿಸಿದ ಗ್ಯಾರೆಂಟಿ ಯೋಜನೆಗೆ ಹಣ ಹೊಂದಿಸಲು ಹೆಣಗಾಡುತಿದ್ದು ಹಲವಾರು ವರ್ಷಗಳಿಂದ ಯಾವುದೇ ಅಡತಡೆ ಇಲ್ಲದೇ ಜನರಿಗೆ ತಲುಪುತಿದ್ದ ಮಾಶಾಸನಗಳು ಕಳೆದ ಡಿಸೆಂಬರ್ ನಿಂದ ಅರ್ದಕರ್ದ ಪಲಾನುಭವಿಗಳಿಗೆ ಬಾರದೇ ಪಲಾನುಭವಿಗಳು ಪೋಸ್ಟ್, ಬ್ಯಾಂಕ್ ನ ಎದುರು ಈ ಸರ್ಕಾರಕ್ಕೆ ಹಿಡಿಶಾಪ ಹಾಕುತ್ತಿರುವುದು ಸರ್ವೇ ಸಾಮಾನ್ಯವಾಗಿದೆ.

ಕೇವಲ ಒಂದು ತಾಲ್ಲೂಕಿನಲ್ಲೇ ಈ ರೀತಿ ಆದರೇ ಇನ್ನೂ ರಾಜ್ಯಾದ್ಯಂತ ಇರುವ ತಾಲ್ಲೂಕಿನ ಮಾಶಾಸನ ನೀಡದೇ ಇರುವ ಮೊತ್ತ ಎಷ್ಟು ಕೋಟಿ ಆಗಬಹುದು. ಈ ಮಾಶಾಸನ ನಿಲುಗಡೆಯಲ್ಲಿ ರಾಜ್ಯಸರ್ಕಾರದ ನೇರ ಕೈವಾಡವಿದ್ದು ಈ ಬಗ್ಗೆ ತನಿಖೆಯಾಗಬೇಕಿದೆ. ಉದಾರಣೆಗೆ ನಮ್ಮ ನರಸಿಂಹರಾಜಪುರ ತಾಲ್ಲೂಕೊಂದರಲ್ಲಿ 6842 ವಿವಿಧ ಯೋಜನೆಗಳ ಪಲಾನುಭವಿಗಳಿದ್ದು ಇದರಲ್ಲಿ ಒಂದು ಅಂದಾಜಿನ ಪ್ರಕಾರ ಅರ್ದದಷ್ಟು ಪಲಾನುಭವಿಗಳಿಗೆ ಕಳೆದ 6-8 ತಿಂಗಳಿoದ ಮಾಶಾಸನ ಬಾರದೇ ಪರದಾಡುತಿದ್ದಾರೆ. ಸಂಬoದ ಪಟ್ಟ ಅಧಿಕಾರಿಗಳು ಕೇಳಿದರೆ ಹಲವು ಕಾರಣಗಳನ್ನು ನೀಡುತ್ತಾರೆ. ಇನ್ನೂ ಕೆಲ ಯಾರದೋ ಹೆಸರಿಗೆ ಅದೇ ಹೆಸರಿನ ಇನ್ಯಾವುದೋ ಆಧಾರ್ ಲಿಂಕ್ ಮಾಡಿ ಮಾಶಾಸನ ನಿಂತಿದೆ.

ರಾಜ್ಯ ಸರ್ಕಾರ ಮತಬೇಟೆಯ ಹುಚ್ಚು ಹಿಡಿಸಿಕೊಂಡು ಹಲವು ಗ್ಯಾರೆಂಟಿ ಯೋಜನೆಗೆ ಹಣ ಹೊಂದಿಸಲು ಹೆಣಗಾಡುತ್ತಿದೆ, ಈ ಸಂಬoದ ವಿಧಾನಸಭೆಯಲ್ಲಿ ಮಾತನಾಡಬೇಕಾಗಿದ್ದ ಶಾಸಕ ಟಿ.ಡಿ ರಾಜೇಗೌಡರು ಸಹ ತುಟಿ ಬಿಚ್ಚದೇ ಈ ಸಮಸ್ಯೆ ಕಣ್ಣಿಗೆ ಕಂಡರೂ ಕಾಣದಂತೆ ಜಾಣ ಕುರುಡು ಪ್ರದರ್ಶಿಸುತ್ತಿದ್ದು ನಾಚಿಕೆಗೇಡಿನ ಸಂಗತಿಯಾಗಿದೆ.
ನಮ್ಮ ನರಸಿಂಹ ರಾಜಪುರ ತಾಲ್ಲೂಕಿನಲ್ಲಿ ಇಂದಿರ ಗಾಂಧಿ ರಾಷ್ಟ್ರೀಯ ಹಿರಿಯನಾಗರೀಕರ ಮಾಶಾಸನದಲ್ಲಿ 1584, ಸಂದ್ಯಾ ಸುರಕ್ಷಾ ಯೋಜನೆಯಲ್ಲಿ ೨೪೩೪, ವಿಧವಾ ವೇತನ ವನ್ನು 1898, ವಿಕಲಾಂಗ ಚೇತನ ಮಾಶಾಸನದಲ್ಲಿ 764, ಮೈತ್ರಿ ಯೋಜನೆಯಲ್ಲಿ 1, ಮನಸ್ವಿನಿ ಯೋಜನೆಯಲ್ಲಿ 112 , ಪಾರ್ಮರ್ ವಿಡೋ ಯೋಜನೆಯಲ್ಲಿ ೪೯ ಒಟ್ಟು ೬೮೪೨ ಪಲಾನುಭವಿಗಳಿದ್ದಾರೆ.
ಕೂಡಲೇ ನರಸಿಂಹರಾಜಪುರ ತಾಲ್ಲೂಕಿನ ತಹಸಿಲ್ದಾರರೂ ಈ ಬಗ್ಗೆ ಗಮನಹರಿಸಿ ಯಾವ ಯಾವ ಪಲಾನುಭವಿಗಳ ಮಾಶಾಸನ ನಿಂತಿದೆಯೋ ಅವೆಲ್ಲವನ್ನೂ ಪುನ: ನೀಡಲು ಕ್ರಮ ಕೈಗೊಳ್ಳಬೇಕು ಎಂದು ಜಗದೀಶ್ಚಂದ್ರ ಆಗ್ರಹಿಸಿದ್ದಾರೆ.
    

Leave a Reply

Your email address will not be published. Required fields are marked *

Scan the code