ಸಂಘದ ಸದಸ್ಯರಿಗೆ ಸರ್ಕಾರದ ಯೋಜನೆ ಹಾಗೂ ಕಾನೂನು ಅರಿವು ಕಾರ್ಯಕ್ರಮ.
(SHIVAMOGA): ಸಾಗರ ತಾಲೂಕಿನ ತುಮರಿ ವಲಯದ ಬ್ರಹ್ಮನ ಕೆಫೆ ಕಾರ್ಯಕ್ಷೇತ್ರದ ಲಕ್ಷ್ಮಿ ವೆಂಕಟೇಶ್ವರ್ ಜ್ಞಾನ ವಿಕಾಸ ಕೇಂದ್ರದಲ್ಲಿ ಇಂದು ವಕೀಲರದ ಶ್ರೀಮತಿ ಸರೋಜ ರಾಘವೇಂದ್ರ ಅವರು ಸಂಘದ ಸದಸ್ಯರಿಗೆ ಸರಕಾರಿ ಯೋಜನೆ ಮತ್ತು ಕಾನೂನುಗಳಿಗೆ ಸಂಬಂಧ ಪಟ್ಟಂತೆ ಮಾಹಿತಿಯನು ನೀಡಿದರು.
ಯೋಜನೆಯ ಈ ಕಾರ್ಯಕ್ರಮವು ತುಂಬಾ ಉತ್ತಮವಾಗಿದ್ದು ಹೆಣ್ಣು ಮಕ್ಕಳಲ್ಲಿ ಜಾಗ್ರತೆ ಮತ್ತು ಸ್ವಾವಲಂಬನೆ ಜೀವನವನ್ನು ನಡೆಸಲು ಧರ್ಮಸ್ಥಳ ಯೋಜನೆ ಮಾಡಿ ಕೊಟ್ಟಿರುವ ಕಾರ್ಯಕ್ರಮಗಳಾಗಿದ್ದು ಈ ತರಹದ ಕಾರ್ಯಕ್ರಮಗಳು ಪ್ರತಿ ಒಂದು ಕುಟುಂಬವು ಅನುಸರಿಸಿದರೆ ಮಾತ್ರವೇ ಯಾವ ಮಹಿಳೆ ಸಹ ಇಂದೇ ಉಳಿಯಲು ಎಂದು ವಿಶ್ವಾಸ ವ್ಯಕ್ತ ಪಡಿಸಿ ಸದಸ್ಯರಿಗೆ ತಿಳಿಸಿದರು. ಶ್ರೀ ಕ್ಷೇತ್ರದ ಯೋಜನೆ ಮಧ್ಯಮ ವರ್ಗದ ಜನರಿಗೆ ಅನುಕೂಲಕರವಾಗಿದೆ ಎಂದರು ಒಕ್ಕೂಟದ ಅಧ್ಯಕ್ಷರು ಜ್ಞಾನವಿಕಾಸ ಸಮನ್ವಯ ಅಧಿಕಾರಿ ಭಾಗವಹಿಸಿದ್ದರು.
ವರದಿ: ರಾಘವೇಂದ್ರ ತಾಳಗುಪ್ಪ