ನ.10ರಂದು ನಡೆಯಲಿರುವ ಯರಗೋಳ ಡ್ಯಾಮ್ ಉದ್ಘಾಟನೆಗೆ ಪಕ್ಷಾತೀತವಾಗಿ ಎಲ್ಲಾ ಪಕ್ಷದ ನಾಯಕರು ಭಾಗವಹಿಸಿ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ಗೋವಿಂದರಾಜು
ಬಂಗಾರಪೇಟೆ: ನ.10ರಂದು ಮಾನ್ಯ ಮುಖ್ಯಮಂತ್ರಿಗಳಾದಂತಹ ಸಿದ್ದರಾಮಯ್ಯನವರಿಂದ ನಡೆಯಲಿರುವ ಯರಗೋಳ ಡ್ಯಾಮ್ ಉದ್ಘಾಟನೆಗೆ ಸಮಾರಂಭಕ್ಕೆ ಎಲ್ಲಾ ಪಕ್ಷದ ಜನಪ್ರತಿನಿಧಿಗಳು ಹಾಗೂ ತಾಲೂಕಿನ ಸಾರ್ವಜನಿಕ ಬಂಧುಗಳು ಪಕ್ಷಾತೀತವಾಗಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಡಿಸಿಸಿ ಬ್ಯಾಂಕ್ ನಿರ್ದೇಶಕ ಗೋವಿಂದರಾಜು ಮನವಿ ಮಾಡಿದರು.
ತಾಲೂಕಿನ ಯರಗೋಳ ಡ್ಯಾಮ್ ಉದ್ಘಾಟನೆಗೆ ನಡೆಯುತ್ತಿರುವ ಕಾಮಗಾರಿಗಳನ್ನು ಪರಿಶೀಲಿಸಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಕೋಲಾರ ಜಿಲ್ಲೆಯ ಕುಡಿಯುವ ನೀರಿನ ಮಹತ್ವಕಾಂಕ್ಷಿಯ ಬೃಹತ್ ಯೋಜನೆ ಇದು, ತಾಲೂಕಿನ 45 ಹಳ್ಳಿಗಳಿಗೆ ಹಾಗೂ ಕೋಲಾರ,ಬಂಗಾರಪೇಟೆ, ಮಾಲೂರು ತಾಲೂಕಿಗಳಿಗೆ ಕುಡಿಯುವ ನೀರಿನ ಯೋಜನೆಯನ್ನು ಸನ್ಮಾನ್ಯ ಮುಖ್ಯಮಂತ್ರಿಗಳು ಹಾಗೂ ಬಂಗಾರಪೇಟೆ ಶಾಸಕ ಎಸ್ ಎನ್ ನಾರಾಯಣಸ್ವಾಮಿ ಅವರ ನೇತೃತ್ವದಲ್ಲಿ ಹಮ್ಮಿಕೊಂಡಿದ್ದೇವೆ ಎಂದರು.
ಈ ಕಾರ್ಯಕ್ರಮಕ್ಕೆ ರಾಜ್ಯದ ಹಲವು ಸಚಿವರು, ಹಾಗೂ ಜಿಲ್ಲೆಯ ಶಾಸಕರು, ಜನಪ್ರತಿನಿಧಿಗಳು ಸಾರ್ವಜನಿಕ ಬಂಧುಗಳು ಪಕ್ಷಾತೀತವಾಗಿ ಈ ಕಾರ್ಯಕ್ರಮಕ್ಕೆ ಭಾಗವಹಿಸಿ ಯರಗೋಳ್ ಯೋಜನೆ ಸಂಗಮವಾಗಬೇಕು ಎಲ್ಲ ಪಕ್ಷದ ನಾಯಕರು ಒಗ್ಗಟ್ಟಿನಿಂದ ಈ ಕಾರ್ಯಕ್ರಮಕ್ಕೆ ಭಾಗವಹಿಸಿ ಎಂದು ಮನವಿ ಮಾಡಿದರು.
ಬೂದಿಕೋಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ ವಿ ನಾಗರಾಜ್ ಮಾತನಾಡಿ, ಮಾನ್ಯ ಮಾಜಿ ಮುಖ್ಯಮಂತ್ರಿಗಳದಂತಹ ಕುಮಾರಸ್ವಾಮಿಯವರು ಯರಗೋಳ ಡ್ಯಾಮ್ ಬಳಿ ಬಂದು ಇದುವರೆಗೂ ಸಹ ಬಂದಿಲ್ಲ, ಅವರು ಶಂಕುಸ್ಥಾಪನೆ ಮಾಡಿದ್ದು ಕೋಲಾರದ ಜೂನಿಯರ್ ಕಾಲೇಜ್ ಮೈದಾನದಲ್ಲಿ ನಂತರ ಅಲ್ಲಿಂದ ಹಾಗೆ ತೆರಳಿದರು. ಅವರು ಶಂಕು ಸ್ಥಾಪನೆ ಮಾಡಿದ ನಂತರ 150 ಕೋಟಿ ಬಿಡುಗಡೆ ಮಾಡಿದ್ದು ಸತ್ಯ, ಆದರೆ ಅವರ ಕೊಟ್ಟ ಹಣ ಕೇವಲ ಪೈಪ್ ಲೈನ್ ಗಳಿಗೆ ಮಾತ್ರ ಸೀಮಿತವಾಗಿದೆ. ನಂತರ ನಮ್ಮ ಶಾಸಕ ಎಸ್ಎನ್ ನಾರಾಯಣಸ್ವಾಮಿ ಅವರು ಶಾಸಕರಾದ ಮೇಲೆ ಮಾನ್ಯ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಹಾಗೂ ಮಾಜಿ ಶಾಸಕ ಶ್ರೀನಿವಾಸ್ ಗೌಡರು ಮತ್ತು ಬಂಗಾರಪೇಟೆ ಶಾಸಕರು ತಂಡ ಮಾಡಿಕೊಂಡು ಮುಖ್ಯಮಂತ್ರಿಗಳ ಬಳಿ ಹೋಗಿ ನಮಗೆ ಕುಡಿಯುವ ನೀರಿನ ಸಮಸ್ಯೆ ಬಹಳ ಇದೆ ಅದಕ್ಕಾಗಿ ಯರಗೋಳ ಡ್ಯಾಮ್ ಅನ್ನು ಹೇಗಾದರೂ ಮಾಡಿ ನಿರ್ಮಾಣ ಮಾಡಿಕೊಂಡು ಎಂದು ಒತ್ತಡ ಹಾಕಿದ ನಂತರ 240 ಕೋಟಿ ಬಿಡುಗಡೆ ಮಾಡಿಸಿದರು.
ಇದರ ಫಲ ಏನಿದ್ದರೂ ಎಸ್ಎನ್ ನಾರಾಯಣಸ್ವಾಮಿ ರವರಿಗೆ ಹಾಗೂ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರಿಗೆ ಸೇರಿದ್ದು ಎಂದರು. ಬೂದಿಕೋಟೆ ಭಾಗದ ಎಲ್ಲಾ ಸಾರ್ವಜನಿಕರು ಹಾಗೂ ಜನಪ್ರತಿನಿಧಿಗಳು ಈ ಕಾರ್ಯಕ್ರಮಕ್ಕೆ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ತಿಳಿಸಿದರು.
ಬಂಗಾರಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೋಪಾಲಗೌಡ ಮಾತನಾಡಿ,ವಿಶೇಷವಾಗಿ ಸಿದ್ದರಾಮಯ್ಯನವರು ನವಂಬರ್ 10ರಂದು ಬೆಳಿಗ್ಗೆ 11 ಗಂಟೆಗೆ ಯರಗೋಳ್ ಯೋಜನೆಯನ್ನು ಉದ್ಘಾಟನೆ ಮಾಡಲು ಯರಗೋಳ ಡ್ಯಾಮ್ ಬಳಿನೆ ಬಂದು ಮಾಡಲಿದ್ದಾರೆ.
ಈ ಕಾರ್ಯಕ್ರಮಕ್ಕೆ ಸುಮಾರು 25,000 ಜನ ತಾಲೂಕಿನಿಂದ ಸೇರಲಿದ್ದಾರೆ. ಇಂದು ಅದಕ್ಕಾಗಿ ಎಲ್ಲಾ ವ್ಯವಸ್ಥೆಯನ್ನು ಮಾಡುವುದಕ್ಕೆ ಇಂದು ಕಾಮಸಮುದ್ರದಲ್ಲೂ ಸಹ ಪೂರ್ವಭಾವಿ ಸಭೆಯನ್ನು ನಡೆಸಲಾಗಿದೆ. ಸಿದ್ದರಾಮಯ್ಯನವರು ಭಾಗವಹಿಸುವ ಈ ಕಾರ್ಯಕ್ರಮಕ್ಕೆ ಎಲ್ಲಾ ಪಕ್ಷದ ನಾಯಕರು ಮುಖಂಡರು ಹಾಗೂ ಕಾಂಗ್ರೆಸ್ನ ಎಲ್ಲಾ ಮುಖಂಡರು, ಜನಪ್ರತಿನಿಧಿಗಳು, ಕಾಂಗ್ರೆಸ್ ಕಾರ್ಯಕರ್ತರು, ಗ್ರಾಮ ಪಂಚಾಯತಿಯ ಅಧ್ಯಕ್ಷರು,ಉಪಾಧ್ಯಕ್ಷರು ಹಾಗೂ ಸದಸ್ಯರು ಮುಖಂಡರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಸಿದ್ದರಾಮಯ್ಯನವರು ನೀರು ಕೊಟ್ಟ ಮಹಾನುಭಾವ ಮೊದಲಿಗೆ ಕೆ ಸಿ ವ್ಯಾಲಿ ನೀರನ್ನು ನೀಡಿದರು ಈಗ ಕುಡಿಯುವುದಕ್ಕೆ ಯರಗೋಳ ನೀರನ್ನು ನೀಡುತ್ತಿದ್ದಾರೆ.ಇದರಿಂದ ಜಿಲ್ಲೆಯ ಎಲ್ಲಾ ಸಾರ್ವಜನಿಕ ಬಂಧುಗಳು ಭಾಗವಹಿಸಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಬಲಮಂದೆ ಗ್ರಾಮ ಪಂಚಾಯಿತಿಯ ಹಾಲಿ ಸದಸ್ಯ ಹಾಗೂ ಮಾಜಿ ಅಧ್ಯಕ್ಷ ರಾಮಪ್ಪ, ಮುಖಂಡರಾದ ಚಿಕ್ಕವಲಗಮಾದಿ ಮುನಿರಾಜು, ಅರಳುಕುಂಟೆ ವೆಂಕಟೇಶ್, ಗ್ರಾಮ ಪಂಚಾಯತಿ ಸದಸ್ಯ ಚಿಕ್ಕಣ್ಣ, ಪ್ರದೀಪ್, ರವಿ,ವೆಂಕಟೇಶ್, ಮಲ್ಲೇಶ್,ಬಾಬುಗೌಡ, ಚಿಕ್ಕಮಾರಹಳ್ಳಿ ವೆಂಕಟೇಶ್ ಮೊದಲಾದವರು ಇದ್ದರು.
ವರದಿ ವಿಷ್ಣು ಕೋಲಾರ