ಮಹಿಳೆಯರಿಂದಲೇ ದೀಪ ಬೆಗಿಸುವುದರ ಮೂಲಕ ಕಾರ್ಯಕ್ರಮ ಮತ್ತು ಗೃಹಲಕ್ಷ್ಮಿ ಯೋಜನೆ ಅನುಷ್ಠಾನ
ಮಹಿಳೆಯರಿಂದಲೇ ದೀಪ ಬೆಗಿಸುವುದರ ಮೂಲಕ ಕಾರ್ಯಕ್ರಮ ಮತ್ತು ಗೃಹ ಲಕ್ಷ್ಮಿ ಯೋಜನೆ ಅನುಷ್ಠಾನ*
ಕಾಂಗ್ರೆಸ್ ಪಕ್ಷವು ಚುನಾವಣೆ ಸಂದರ್ಭದಲ್ಲಿ ತಮ್ಮ ಪ್ರಣಾಳಿಕಯಲ್ಲಿ ಘೋಷಣೆ ಮಾಡಿದ 5 ಗ್ಯಾರಂಟಿಯಲ್ಲಿ ಇಂದು ಗೃಹಲಕ್ಷ್ಮಿ ಗ್ಯಾರಂಟಿ ಜಾರಿ ಗೊಳಿಸಲಾಗಿದೆ. ರಾಜ್ಯದ ಗೃಹಲಕ್ಷ್ಮಿ ಪಾಲನುಭವಿ ಮಹಿಳೆಯರ ಮುಖದಲ್ಲಿ ಮಂದಹಾಸ ಮೂಡಿದೆ. ರಾಜ್ಯದ್ಲಲಿನ ಮಹಿಳೆಯರ ಉನ್ನತೀಕರಣದ ಸಲುವಾಗಿ ಕಾಂಗ್ರೆಸ್ ಸರ್ಕಾರವು ಚುನಾವಣೆ ಮೊದಲು ಜಾರಿ ತರಲು ನಿರ್ಧರಿಸಿದ ರಾಜ್ಯ ಸರ್ಕಾರದ ಯೋಜನೆಯ್ಲಲಿ ಒಂದಾದ ಗೃಹಲಕ್ಷ್ಮಿ ಯೋಜನೆ ಬಾಳೆಹೊನ್ನೂರಿನಲ್ಲಿ ಅದ್ದೂರಿಯಾಗಿ ಅನುಷ್ಠಾನ ಕಾರ್ಯಕ್ರಮ ನೆರವೇರಿದ್ದು.
ತಾಲ್ಲೂಕ್ಕಿನ ಎಲ್ಲಾ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರು ಮತ್ತು ಸದಸ್ಯರು ಇವರ ಸಹಯೋಗದೊಂದಿಗೆ ಗೃಹಲಕ್ಷ್ಮಿ ಯೋಜನೆ ಅನುಷ್ಠಾನ ಕಾರ್ಯಕ್ರಮ ನಡೆದಿದ್ದು.
ರಾಜ್ಯದ ಕಾಂಗ್ರೆಸ್ ಸರ್ಕಾರವು ಘೋಷಣೆ ಮಾಡಿದಂತೆ ಇಂದು ಅನುಷ್ಠಾನ ಕಾರ್ಯ್ರಮಕ್ಕೆ ಸಾವಿರಕ್ಕೂ ಹೆಚ್ಚು ಗೃಹಲಕ್ಷ್ಮೀ ಆರ್ಹರು ಬಾಗಿಯಾಗಿದ್ದಾರೆ. ಮನೆ ಮನೆಯ್ಲಲಿ ನಾನೇ ನಾಯಕಿ ಎಂದು ರಂಗೋಲಿಗಳು ರಾರಾಜಿಸುತ್ತಿವೆ. ಮನೆಯ ಲಕ್ಷ್ಮಿಯರಿಗೆ ಇಂದು ಹಬ್ಬದ ವಾತಾವರಣ ಮೂಡಿದೆ.
ನಾಡದೇವತೆಯಾದ ಚಾಮುಂಡೇಶ್ವರಿ ಆಶೀರ್ವಾದದೊಂದಿಗೆ ಮೈಸೂರಿನಲ್ಲಿ ನಡಯುತ್ತಿರುವ ಇಂದು ಗೃಹಲಕ್ಷ್ಮಿ ಯೋಜನೆ ಅನುಷ್ಠಾನ ಅದ್ದೂರಿಯಾಗಿ ನೆಡೆಯಲ್ಲಿದ್ದು. ಗೃಹಲಕ್ಷ್ಮೀ ಯೋಜನೆಗೆ ಚಾಲನೆ ನೀಡಲು ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಬೃಹತ್ ವೇದಿಕೆ ನಿರ್ಮಾಣ ಮಾಡಲಾಗಿದೆ. ಹಾಗೂ ಕಾರ್ಯಕ್ರಮವನ್ನು ನೇರ ಪ್ರಸಾರದ ಕಾರ್ಯಕ್ರಮವನ್ನು ವೀಕ್ಷಣೆ ಮಾಡಬಹುದಾಗಿತ್ತು.
ಸಾವಿರಾರು ಮಹಿಳೆಯರು ಈ ಯೋಜನಯ ಫಲನುಭವಿಗಳಾಗಿದ್ದು ಅನುಷ್ಠಾನ ಕಾರ್ಯ್ರಮವು ಸರಿಯಾಗಿ 10 ಗಂಟೆಗೆ ಆರಂಬಗೊಳ್ಳಲಿದೆ ಎಂದು ಪ್ರಚಾರ ಮಾಡಿ ಇನ್ನೂ ಆರಂಭ ವಾಗದ ಕಾರಣ ಕಾರ್ಯಕ್ರಮದ್ಲಲಿ ನೆರೆದಿದ್ದ ಮಹಿಳೆಯರು ಗರಂ ಆಗಿದ್ದರು. ನಂತರ ಕಾರ್ಯಕ್ರಮ ಉದ್ಘಾಟನೆ ಮಾಡಿದ ನಂತರ ಮಹಿಳೆಯರು ಫುಲ್ ಕುಷಿಯಾಗಿ ಕಾರ್ಯಕ್ರಮ ವೀಕ್ಷಣೆ ಮಾಡಿದರು.
ರವಿಚಂದ್ರ ಮಾಜಿ ಸದಸ್ಯರು 2000 ರೂಗಳನು ಬ್ಯಾಂಕ್ ಖಾತೆಯಲ್ಲಿ RD ಇಡುವಂತೆ ತಿಳಿಸಿದರು ಕಷ್ಟ ಕಾಲಕ್ಕೆ ಬರುವುದು ಗ್ರುಹಲಕ್ಷ್ಮಿ ಹಣ ಎಂದು ಮಾತನಾಡಿದರು.ಹಾಗೂ ವೇದಿಕೆ ಮೇಲೆ ಉಪಸ್ಥಿತರಿದ್ದ ಎಲ್ಲರೂ ಗೃಹಲಕ್ಷ್ಮಿ ಯೋಜನೆ ಮತ್ತು ರಾಜ್ಯ ಸರ್ಕಾರದ ಬಗ್ಗೆ ಸರ್ಕಾರ ನುಡದಂತೆ ನಡೆದ್ದಿದೆ ಎಂದು ತಿಳಿಸಿದರು.
Super