ಬ್ರಿಟಿಷರ ವಿರುದ್ಧ ಸಿಡಿದೆದ್ದ ಒಬ್ಬ ಬುಡಕಟ್ಟು ಜನಾಂಗದ ವ್ಯಕ್ತಿ ಭಗವಾನ್ ಬಿರ್ಸಾ
(SHIVAMOGA): ಸಾಗರ :ಭಾರತ ಆಳಿಸಿಕೊಳ್ಳುವ ದೇಶ ಹೊರತು ಆಳುವ ದೇಶವಲ್ಲ ಎಂದು ತಿಳಿದು ಬ್ರಿಟಿಷರು ಭಾರತೀಯರ ಮೇಲೆ ದಬ್ಬಾಳಿಕೆ ಮಾಡಲು ಶುರು ಮಾಡಿದರು ಇಂತಹ ಸಂದರ್ಭದಲ್ಲಿ ಸಿಡಿದೆದ್ದ ಒಬ್ಬ ಬುಡಕಟ್ಟು ಜನಾಂಗದ ವ್ಯಕ್ತಿ ಅಂದರೆ ಅದು ಭಗವಾನ್ ಬಿರ್ಸಾ ಮುಂಡರವರು ಎಂದು ಸಾಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಸಣ್ಣ ಹನುಮಂತಪ್ಪ .ಜಿ ಮಾತನಾಡಿದರು.
ಇವರು ಇಂದು ಕಾಲೇಜಿನಲ್ಲಿ ನೆಹರು ಯುವ ಕೇಂದ್ರ ಶಿವಮೊಗ್ಗ ಹಾಗೂ ಭಾರತ ರಾಷ್ಟ್ರೀಯ ಸೇವಾ ಯೋಜನೆ ಮತ್ತು ಸಾಗರ್ ಯೂತ್ ಫೋರ್ಸ್ ಅಸೋಸಿಯೇಷನ್ ರವರು ಏರ್ಪಡಿಸಿದ ಭಗವಾನ್ ಬಿರ್ಸಾ ಮುಂಡ ಜಯಂತಿಯ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ ಮಾತನಾಡಿದರು.
ಭಾರತ ಸ್ವತಂತ್ರ ಹೋರಾಟಕ್ಕೆ ಲಕ್ಷಾಂತರ ಜನ ತಮ್ಮ ಜೀವನವನ್ನೇ ಮುಡಿಪಾಗಿಟ್ಟಿದ್ದಾರೆ. ಅದರಲ್ಲಿ ವಿಶೇಷವಾಗಿ ಬುಡಕಟ್ಟು ಜನಾಂಗದವರು ಮತ್ತು ಅಲೆಮಾರಿ ಜನಾಂಗದವರು ಕಾಡಿನಲ್ಲಿ ಕಾಡು ಪಾಪಗಳಂತೆ ಜೀವನ ನಡೆಸುತ್ತಿದ್ದರು. ಪರಿಸರದ ಜೊತೆ ತಮ್ಮ ಜೀವನ ಕಳೆಯುತ್ತಿದ್ದರು .ಇಂತಹ ಜನಾಂಗದವರಲ್ಲಿ ಒಬ್ಬರಾದ ಭಗವಾನ್ ಬಿರ್ಸಾ ಮುಂಡ ರವರು ತಮ್ಮ ಜನಾಂಗದ ಮೇಲೆ ಬ್ರಿಟಿಷರು ನಡೆಸುತ್ತಿರುವ ದೌರ್ಜನ್ಯವನ್ನು ವಿರೋಧಿಸಿ ಒಂದು ಗುಂಪನ್ನು ಕಟ್ಟಿ ಬ್ರಿಟಿಷರ ಅಟ್ಟಹಾಸ ಮುರಿಯಲು ಮುಂದಾದಗುತ್ತಾರೆ.
ಇವರು ಅಕ್ಷರಶಹ ಯಾವುದೇ ಹೆಸರಿಗಾಗಲಿ ,ಕೀರ್ತಿಗಾಗಲಿ ಹೋರಾಟವನ್ನು ಮಾಡಿದವರಲ್ಲ. ತಮ್ಮ ಬುಡಕಟ್ಟು ಜನಾಂಗದವರ ಮೇಲೆ ಮಿತಿಮೀರಿದ ದಬ್ಬಾಳಿಕೆ ,ದೌರ್ಜನ್ಯ ವಿರುದ್ಧ ಸಿಡಿದೆದ್ದು ಬ್ರಿಟಿಷರಿಗೆ ಕ್ರಾಂತಿಯ ಕಿಡಿ ಹೇಗಿರುತ್ತೆ ಎಂಬುದನ್ನು ಈ ನಾಯಕ ತೋರಿಸಿಕೊಟ್ಟಿದ್ದಾರೆ. ಇಂತಹ ಬುಡಕಟ್ಟು ಸ್ವತಂತ್ರ ಹೋರಾಟಗಾರನ ಫೋಟೋ ಇಂದಿಗೂ ಸಹ ಪಾರ್ಲಿಮೆಂಟಿನಲ್ಲಿ ಇದೆ.
ಇಂತಹ ಆದರ್ಶ ವ್ಯಕ್ತಿಗಳ ಬದುಕನ್ನು ನಮ್ಮ ವೈಯಕ್ತಿಕ ಜೀವನದಲ್ಲಿ ರೂಡಿಸಿಕೊಳ್ಳೋಣ ಎಂದರು.
ಇತಿಹಾಸ ಪ್ರಾಧ್ಯಾಪಕರಾದ ರಾಜು ರವರು ಮಾತನಾಡಿ ಪ್ರಪಂಚದ ಅನೇಕ ದೇಶಗಳಲ್ಲಿ ಅದರಲ್ಲಿ ಭಾರತವು ಸೇರಿ ತಳ ಸಮುದಾಯದ ಜನಾಂಗದವರು ಅಂದರೆ ಬುಡುಕಟ್ಟು, ಅಲೆಮಾರಿ, ಹಾಗೂ ಆದಿವಾಸಿಗಳು ಮೊದಲಿಂದಲೂ ಶೋಷಣೆಗೆ ಮತ್ತು ದೌರ್ಜನ್ಯಕ್ಕೆ ಒಳಗಾದಂತಹ ಸಮುದಾಯಗಳಾಗಿವೆ. ಈ ಜನಾಂಗದವರು ಅಂದಿನಿಂದಲೂ ಸಹ ತಮ್ಮ ಅಸ್ತಿತ್ವಕ್ಕಾಗಿ ನಿರಂತರವಾಗಿ ಹೋರಾಟ ಮಾಡುತ್ತಲೇ ಬಂದಿದ್ದಾರೆ.ಆದರೆ ಭಗವಾನ್ ಬಿರ್ಸಾ ಮುಂಡ ಜಯಂತಿ.
ಭಾರತ ಆಳಿಸಿಕೊಳ್ಳುವ ದೇಶ ಹೊರತು ಆಳುವ ದೇಶವಲ್ಲ ಎಂದು ತಿಳಿದು ಬ್ರಿಟಿಷರು ಭಾರತೀಯರ ಮೇಲೆ ದಬ್ಬಾಳಿಕೆ ಮಾಡಲು ಶುರು ಮಾಡಿದರು ಇಂತಹ ಸಂದರ್ಭದಲ್ಲಿ ಸಿಡಿದೆದ್ದ ಒಬ್ಬ ಬುಡಕಟ್ಟು ಜನಾಂಗದ ವ್ಯಕ್ತಿ ಅಂದರೆ ಅದು ಭಗವಾನ್ ಬಿರ್ಸಾ ಮುಂಡರವರು ಎಂದು ಸಾಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಸಣ್ಣ ಹನುಮಂತಪ್ಪ .ಜಿ ಮಾತನಾಡಿದರು.
ಇವರು ಇಂದು ಕಾಲೇಜಿನಲ್ಲಿ ನೆಹರು ಯುವ ಕೇಂದ್ರ ಶಿವಮೊಗ್ಗ ಹಾಗೂ ಭಾರತ ರಾಷ್ಟ್ರೀಯ ಸೇವಾ ಯೋಜನೆ ಮತ್ತು ಸಾಗರ್ ಯೂತ್ ಫೋರ್ಸ್ ಅಸೋಸಿಯೇಷನ್ ರವರು ಏರ್ಪಡಿಸಿದ ಭಗವಾನ್ ಬಿರ್ಸಾ ಮುಂಡ ಜಯಂತಿಯ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ ಮಾತನಾಡಿದರು.
ಭಾರತ ಸ್ವತಂತ್ರ ಹೋರಾಟಕ್ಕೆ ಲಕ್ಷಾಂತರ ಜನ ತಮ್ಮ ಜೀವನವನ್ನೇ ಮುಡಿಪಾಗಿಟ್ಟಿದ್ದಾರೆ. ಅದರಲ್ಲಿ ವಿಶೇಷವಾಗಿ ಬುಡಕಟ್ಟು ಜನಾಂಗದವರು ಮತ್ತು ಅಲೆಮಾರಿ ಜನಾಂಗದವರು ಕಾಡಿನಲ್ಲಿ ಕಾಡು ಪಾಪಗಳಂತೆ ಜೀವನ ನಡೆಸುತ್ತಿದ್ದರು. ಪರಿಸರದ ಜೊತೆ ತಮ್ಮ ಜೀವನ ಕಳೆಯುತ್ತಿದ್ದರು .ಇಂತಹ ಜನಾಂಗದವರಲ್ಲಿ ಒಬ್ಬರಾದ ಭಗವಾನ್ ಬಿರ್ಸಾ ಮುಂಡ ರವರು ತಮ್ಮ ಜನಾಂಗದ ಮೇಲೆ ಬ್ರಿಟಿಷರು ನಡೆಸುತ್ತಿರುವ ದೌರ್ಜನ್ಯವನ್ನು ವಿರೋಧಿಸಿ ಒಂದು ಗುಂಪನ್ನು ಕಟ್ಟಿ ಬ್ರಿಟಿಷರ ಅಟ್ಟಹಾಸ ಮುರಿಯಲು ಮುಂದಾದಗುತ್ತಾರೆ.
ಇವರು ಅಕ್ಷರಶಹ ಯಾವುದೇ ಹೆಸರಿಗಾಗಲಿ ,ಕೀರ್ತಿಗಾಗಲಿ ಹೋರಾಟವನ್ನು ಮಾಡಿದವರಲ್ಲ. ತಮ್ಮ ಬುಡಕಟ್ಟು ಜನಾಂಗದವರ ಮೇಲೆ ಮಿತಿಮೀರಿದ ದಬ್ಬಾಳಿಕೆ ,ದೌರ್ಜನ್ಯ ವಿರುದ್ಧ ಸಿಡಿದೆದ್ದು ಬ್ರಿಟಿಷರಿಗೆ ಕ್ರಾಂತಿಯ ಕಿಡಿ ಹೇಗಿರುತ್ತೆ ಎಂಬುದನ್ನು ಈ ನಾಯಕ ತೋರಿಸಿಕೊಟ್ಟಿದ್ದಾರೆ. ಇಂತಹ ಬುಡಕಟ್ಟು ಸ್ವತಂತ್ರ ಹೋರಾಟಗಾರನ ಫೋಟೋ ಇಂದಿಗೂ ಸಹ ಪಾರ್ಲಿಮೆಂಟಿನಲ್ಲಿ ಇದೆ.
ಇಂತಹ ಆದರ್ಶ ವ್ಯಕ್ತಿಗಳ ಬದುಕನ್ನು ನಮ್ಮ ವೈಯಕ್ತಿಕ ಜೀವನದಲ್ಲಿ ರೂಡಿಸಿಕೊಳ್ಳೋಣ ಎಂದರು.
ಇತಿಹಾಸ ಪ್ರಾಧ್ಯಾಪಕರಾದ ರಾಜು ರವರು ಮಾತನಾಡಿ ಪ್ರಪಂಚದ ಅನೇಕ ದೇಶಗಳಲ್ಲಿ ಅದರಲ್ಲಿ ಭಾರತವು ಸೇರಿ ಅನೇಕ ತಳ ಸಮುದಾಯದ ಜನಾಂಗದವರು ಅಂದರೆ ಬುಡುಕಟ್ಟು, ಅಲೆಮಾರಿ, ಹಾಗೂ ಆದಿವಾಸಿಗಳು ಮೊದಲಿಂದಲೂ ಅನೇಕ ಶೋಷಣೆಗೆ ಮತ್ತು ದೌರ್ಜನ್ಯಕ್ಕೆ ಒಳಗಾದಂತಹ ಸಮುದಾಯಗಳಾಗಿವೆ. ಈ ಜನಾಂಗದವರು ಅಂದಿನಿಂದಲೂ ಸಹ ತಮ್ಮ ಅಸ್ತಿತ್ವಕ್ಕಾಗಿ ನಿರಂತರವಾಗಿ ಹೋರಾಟ ಮಾಡುತ್ತಲೇ ಬಂದಿದ್ದಾರೆ. ಆದರೆ ಭಾರತದಲ್ಲಿ ಬುಡಕಟ್ಟು ಜನಾಂಗದ ನಾಯಕನಾದ ಭಗವಾನ್ ಬಿರ್ಸಾ ಮುಂಡ ರವರು ಇದನೆಲ್ಲ ಅಂತ್ಯಗೊಳಿಸಲು ಹೋರಾಟಕ್ಕೆ ಇಳಿಯುತ್ತಾರೆ ಎಂದರು.
ಪ್ರಾಸ್ತಾವಿಕ ನುಡಿಗಳನ್ನು ರಾಷ್ಟ್ರೀಯ ಸೇವಾ ಯೋಜನೆಯ ಘಟಕ ಎರಡರ ಸಂಯೋಜನಾಧಿಕಾರಿ ಮಮತಾ ಹೆಗಡೆ ಮಾಡಿದರು. ಈ ಸಂದರ್ಭದಲ್ಲಿ ಸಾಗರ್ ಯೂತ್ ಫೋರ್ಸ್ ಅಸೋಸಿಯೇಷನ್ ಮುಖ್ಯಸ್ಥರಾದ ಪುಷ್ಪಲತಾ ಹಾಗೂ ಭಾರತಿ ಮತ್ತು ಇತರರು ಉಪಸ್ಥಿತರಿದ್ದರು.
ವರದಿ: ರಾಘವೇಂದ್ರ ತಾಳಗುಪ್ಪ