Newsಕೋಲಾರ

ಕೋವಿಡ್ ವೆಂಟಲೇಟರ್ ಹಗರಣವನ್ನು ಸಿ.ಬಿ.ಐ ಗೆ ಒಪ್ಪಿಸಿ

ಕೋವಿಡ್ ವೆಂಟಲೇಟರ್ ಹಗರಣವನ್ನು ಸಿ.ಬಿ.ಐ ಗೆ ಒಪ್ಪಿಸಿ

(KOLARA) : ಬಂಗಾರಪೇಟೆ,  ಕೋವಿಡ್ ವೆಂಟಲೇಟರ್ ಹಗರಣವನ್ನು ಸಿ.ಬಿ.ಐ ಗೆ ಒಪ್ಪಿಸಿ ಗಡಿಭಾಗದ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ನಾಪತ್ತೆ ಆಗಿರುವ ವೈದ್ಯರನ್ನು ಹುಡುಕಿಕೊಟ್ಟು ಕೋಮಾಸ್ಥಿತಿಯಲ್ಲಿರುವ ವೈದ್ಯಕೀಯ ಸೇವೆಗೆ ಮರುಜೀವ ಕೊಟ್ಟು, ನಕಲಿ ಕ್ಲೀನಿಕ್‌ಗಳ ವಿರುದ್ದ ಕಾನೂನು ಕ್ರಮ ಕೈಗೊಂಡು ಬಡವರ ಆರೋಗ್ಯವನ್ನು ರಕ್ಷಣೆ ಮಾಡಬೇಕೆಂದು ರೈತ ಸಂಘದಿoದ ತಾಲ್ಲೂಕು ಆಸ್ಪತ್ರೆ ಮುಂದೆ ಕೋಳಿಗಳ  ಸಮೇತ ಹೋರಾಟ ಮಾಡಿ ತಾಲ್ಲೂಕು ಆರೋಗ್ಯಧಿಕಾರಿಗಳಿಗೆ ಮನವಿ ನೀಡಿ ಒತ್ತಾಯಿಸಲಾಯಿತು.
ಅಪಘಾತ ಹಾಗೂ ಹೆರಿಗೆ ತುರ್ತು ಪರಿಸ್ಥಿತಿಯಲ್ಲಿ ಆಸ್ಪತ್ರೆಗೆ ಬರುವ ಬಡ ರೈತ ಕೂಲಿ ಕಾರ್ಮಿಕರ ಕಾಲ ಕಸದಂತೆ ಕಾಣುವ ವೈದ್ಯರು ನರ್ಸಗಳ ಲಂಚ ಲಂಚ ಎಂದು ಬಡವರ ರಕ್ತ ಹೀರುವ ಜೊತೆಗೆ ಪೋನ್ ಕರೆ ಮಾಡಿದರೆ ಸ್ವೀಕರಿಸುವುದಿಲ್ಲ ರೋಗಿಗಳು ಸಾಯುತ್ತಿದ್ದರೂ ಮೊಬೈಲ್‌ಗಳಲ್ಲಿ ಸಂಭಾಷಣೆ ಜೊತೆಗೆ ವಾಟ್ಸ್ಪ್ ನೋಡುತ್ತಿರುವುದರಲ್ಲಿ ಬ್ಯೂಸಿಯಾಗಿರುವ ಭ್ರಷ್ಟಚಾರದ ಆಸ್ಪತ್ರೆ ಆಗಿದೆ ಎಂದು ರೈತ ಸಂಘದ ರಾಜ್ಯ ಉಪಾದ್ಯಕ್ಷ ಕೆ.ನಾರಾಯಣಗೌಡ ಅವ್ಯವಸ್ಥೆ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.
ಕೋವಿಡ್ ಅವದಿಯಲ್ಲಿ ಸರ್ಕಾರ ಹಾಗೂ ಆರೋಗ್ಯ ಸಚಿವರ ನಿರ್ಲಕ್ಷದಿಂದ ಸಾವಿರಾರು ಬಡವರ ಜೀವ ಸಮರ್ಪಕವಾಗಿ ವೆಂಟಿಲೇಟರ್ ಸಿಗದೆ ಕಳೆದುಕೊಂಡಿದ್ದು, ಬಡವರ ಸಾವಿನಲ್ಲೂ ನೂರಾರು ಕೋಟಿ ಲೂಟಿ ಮಾಡಿದ್ದು ಈ ಹಗರಣವನ್ನು ಸಿ.ಬಿ.ಐಗೆ ಒಪ್ಪಿಸಬೇಕೆಂದು ಒತ್ತಾಯಿಸಿದರು
ಕಿಡ್ನಿ ವೈಪಲ್ಯದಿಂದ ಸಮರ್ಪಕವಾದ ಚಿಕಿತ್ಸೆಗೆಗಾಗಿ ಖಾಸಗಿ ಆಸ್ಪತ್ರೆಯ ವೆಚ್ಚ ಭರಿಸಲಾಗದೆ ಸಾವಿರಾರು ರೋಗಿಗಳು ಸರ್ಕಾರಿ ಆಸ್ಪತ್ರೆಗಳಲ್ಲಿ ಸಿಗುವ ಉಚಿತ ಡಯಾಲೀಸಿಸ್ ಯಂತ್ರಗಳು ನಿರ್ವಹಣೆ ಇಲ್ಲದೆ ನುರಿತ ವೈದ್ಯರಿಲ್ಲದೆ ಕೋಮಾ ಸ್ಥಿತಿಯಲ್ಲಿರುವ ರೋಗಿಯಂತಾಗಿವೆ. ಜೀವ ಇದ್ದರೂ ಜೀವನ ಇಲ್ಲ ಅದೇ ರೀತಿ ಎಲ್ಲಾ ಸೌಕರ್ಯಗಳಿದ್ದರೂ ನೀರಿಲ್ಲ, ನೀರಿದ್ದರೂ, ವೈದ್ಯರಿಲ್ಲ, ವೈದ್ಯರಿದ್ದರೂ ಬಡವರ ಬಳಿ ಲಂಚ ಕೊಡಲು ಹಣವಿಲ್ಲ ಅಷ್ಟರ ಮಟ್ಟಿಗೆ ಡಯಾಲಿಸೀಸ್ ಕೇಂದ್ರಗಳು ಮೂಲೆ ಗುಂಪಾಗಿದ್ದರೂ ಸರಿಪಡಿಸದೆ ಖಾಸಗಿ ಆಸ್ಪತ್ರೆಗಳ ಮಾಲೀಕರ ಸರ್ಕಾರಿ ಆಸ್ಪತ್ರೆ ವೈದ್ಯರು ಕೈ ಜೊಡಿಸಿ ಆರೋಪ ಮಾಡಿದರು.

ಆರೋಗ್ಯವೇ ಭಾಗ್ಯ ಎಂಬುದು ಅನಾರೋಗ್ಯವೇ ಭಾಗ್ಯ ಎಂಬoತಾಗಿದೆ. ಗಡಿಭಾಗದ ಕೂಲಿ ಕಾರ್ಮಿಕರ ಆರೋಗ್ಯದ ಪರಿಸ್ಥಿತಿ ಕೋಟಿ ಕೋಟಿ ವೆಚ್ಚದಲ್ಲಿ ಸರ್ಕಾರ ಜನಸಮಾನ್ಯರಿಗೆ ಉತ್ತಮ ಆರೋಗ್ಯ ಚಿಕಿತ್ಸೆ ಸಿಗಲಿ ಎಂದು ಅಭಿವೃದ್ದಿಪಡಿಸಿರುವ ಗಡಿಭಾಗದ ಪ್ರಾಥಮಿಕ ಆರೋಗ್ಯ ಕೇಂದ್ರಗಳು ತಾಜ್‌ಮಹಲ್‌ನಂತೆ ನೋಡಲು ಬಹು ಸುಂದರವಾಗಿವೆ ಆದರೆ ಚಿಕಿತ್ಸೆ ಮಾತ್ರ ಮರಿಚೀಕೆ ಆಗಿದೆ ಎಂದು ಕಿಡಿ ಕಾರಿದರು.
24 ಗಂಟೆ ಕೆಲಸ ನಿರ್ವಹಿಸಬೇಕಾದ ವೈದ್ಯರು ತಮಗೆ ಇಷ್ಟ ಬಂದ ರೀತಿ ಕೆಲಸಕ್ಕೆ ಬಂದು ಮೂರು ದಿನದ ಹಾಜರಾತಿಯನ್ನು ಒಂದೇ ದಿನದಲ್ಲಿ ನೀಡುವ ಜೊತೆಗೆ ಆಸ್ಪತ್ರೆಯಲ್ಲಿ ಕೆಲಸ ನಿರ್ವಹಿಸುವ ನರ್ಸ್ಗಳು, ಅಟೆಂಡರ್‌ಗಳು ಸಮಯಕ್ಕೆ ಸರಿಯಾಗಿ ತುರ್ತು ಪರಿಸ್ಥಿತಿಗಳಾದ ಅಪಘಾತ, ಹೆರಿಗೆ , ಹಾಗೂ ಚಿಕ್ಕಪುಟ್ಟ ಸಮಸ್ಯೆಗಳಿಗೆ ಆಸ್ಪತ್ರೆಗೆ ಬಂದರೆ ಗಡಿಭಾಗದ ಜನ ಯಾವ ಪಾಪ ಮಾಡಿದ್ದಾರೋ ಗೊತ್ತಿಲ್ಲ ಉತ್ತಮ ಚಿಕಿತ್ಸೆ ದೊರಯದೆ ಖಾಸಗಿ ಆಸ್ಪತ್ರೆಗಳ ದುಬಾರಿ ವೆಚ್ಚ ಭರಿಸದೆ ವೈದ್ಯಕೀಯ ಗಂದ ಗಾಳಿ ಗೊತ್ತಿಲ್ಲದ ನಕಲಿ ವೈದ್ಯರಿಂದ ಚಿಕಿತ್ಸೆ ಪಡೆದು ಪ್ರಾಣ ಕಳೆದುಕೊಳ್ಳಬೇಕಾದ ಮಟ್ಟಕ್ಕೆ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಹದಗೆಟ್ಟಿದ್ದರೂ ಸಮಸ್ಯೆಯನ್ನು ಗಂಭೀರವಾಗಿ ಜನಪ್ರತಿನಿದಿಗಳು ಪರಿಗಣಿಸದೇ ಇರುವುದು ದುರಾದೃಷ್ಠಕರ ಎಂದು ಅವ್ಯವಸ್ಥೆ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯ ಮುಖಂಡ ಮರಗಲ್ ಶ್ರೀನಿವಾಸ್ ಮಾತನಾಡಿ ಗಡಿಭಾಗದ ಕೂಲಿ ಕಾರ್ಮಿಕರಿಗೆ ಸರ್ಕಾರಿ ಆಂಬ್ಯೂಲೆನ್ಸ್ 108 ತುರ್ತು ಪರಿಸ್ಥಿತಿಯಲ್ಲಿ ಕರೆ ಮಾಡಿದರೆ ಸುತ್ತಿ ಬಳಸಿ ಬಡರೋಗಿಯ ಪ್ರಾಣ ಪಕ್ಷಿ ಹಾರಿದ ಮೇಲೆ ಸೇವೆ ಸಿಗುತ್ತದೆ ಎಂಬ ಮಾಹಿತಿ ಬರುತ್ತದೆ ಅಷ್ಟರ ಮಟ್ಟಿಗೆ ಸರ್ಕಾರಿ ಆಂಬ್ಯೂಲೆನ್ಸ್ 108 ಹದಗೆಟ್ಟಿರುವುದರಿಂದ ಇದನ್ನೇ ಬಂಡವಾಳ ಆಗಿಸಿಕೊಂಡಿರುವ ಖಾಸಗಿ ಆಂಬ್ಯೂಲೆನ್ಸ್ ಮಾಲೀಕರು ಬಡರೋಗಿಗಳನ್ನು ಸುಲಿಗೆ ಮಾಡುತ್ತಿದ್ದರೂ ಅವ್ಯವಸ್ಥೆಯನ್ನು ಸರಿಪಡಿಸದೇ ಖಾಸಗಿ ವ್ಯಕ್ತಿಗಳ ಜೊತೆ ಶಾಮೀಲಾಗಿ ಬಡವರ ಜೀವವನ್ನು ಸರ್ಕಾರಿ ವೈದ್ಯರೇ ಕಸಿಯುತ್ತಿದ್ದಾರೆಂದು ಅಸಮಾದಾನ ವ್ಯಕ್ತಪಡಿಸಿದರು.

ಸರ್ಕಾರಿ ಆಸ್ಪತ್ರೆಗಳ ಅವ್ಯವಸ್ಥೆ ಖಾಸಗಿ ಆಸ್ಪತ್ರೆಗಳ ದುಬಾರಿ ವೆಚ್ಚ ಈ ಎರಡನ್ನೂ ಬಂಡವಾಳ ಆಗಿಸಿಕೊಂಡಿರುವ ವೈದ್ಯಕೀಯ ಕ್ಷೇತ್ರದ ಗಂದ ಗಾಳಿ ಗೊತ್ತಿಲ್ಲದ ಆಂದ್ರ ಮೂಲದ ತಮಿಳುನಾಡು ಮೂಲದ ನಕಲಿ ವೈದ್ಯರು ಗಡಿಭಾಗಗಳಲ್ಲಿ ನಕಲಿ ದಾಖಲೆಗಳನ್ನು ಇಟ್ಟುಕೊಂಡು ಬಡವರ ಜೀವದ ಜೊತೆಗೆ ಚೆಲ್ಲಾಟ ಆಡುತ್ತಿದ್ದರೂ ಬೀಗ ಜಡಿದು ಕ್ರಿಮಿನಲ್ ಮೊಕದ್ದಮೆ ದಾಖಲು ಮಾಡಬೇಕಾದ ತಾಲ್ಲೂಕು ಆರೋಗ್ಯ ಅಧಿಕಾರಿಗಳೇ ಅವರಿಗೆ ಕುಮ್ಮಕ್ಕು ನೀಡುತ್ತಿದ್ದಾರೆಂದು ಆರೋಪ ಮಾಡಿದರು.
24 ಗಂಟೆಯಲ್ಲಿ ಗಡಿಭಾಗದ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ನಾಪತ್ತೆ ಆಗಿರುವ ವೈದ್ಯರನ್ನು ಹುಡುಕಿಕೊಟ್ಟು ಕೋಮಾಸ್ಥಿತಿಯಲ್ಲಿರುವ ಡಯಾಲಿಸಿಸ್ ಕೇಂದ್ರಕ್ಕೆ ಮರುಜೀವ ಕೊಟ್ಟು, ನಕಲಿ ಕ್ಲೀನಿಕ್‌ಗಳ ವಿರುದ್ದ ಕಾನೂನು ಕ್ರಮ ಕೈಗೊಂಡು ಬಡವರ ಆರೋಗ್ಯವನ್ನು ರಕ್ಷಣೆ ಮಾಡಬೇಕೆಂದು ಮನವಿ ನೀಡಿ ಒತ್ತಾಯ ಮಾಡಿದರು.
ಮನವಿ ಸ್ವೀಕರಿಸಿ ಮಾತನಾಡಿದ ಆರೋಗ್ಯ ಅಧಿಕಾರಿಗಳು ಗಡಿಭಾಗದ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಹಾಗೂ ಆಂಬ್ಯೂಲೆನ್ಸ್ ಅವ್ಯವಸ್ಥೆ ವಿರುದ್ದ ಸಂಬoಧಪಟ್ಟ ಅಧಿಕಾರಿಗಳ ಜೊತೆ ಚರ್ಚೆ ಮಾಡಿ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದರು.

ಹೋರಾಟದ್ಲಲಿ, ಜಿಲ್ಲಾದ್ಯಕ್ಷ ಈಕಂಬಳ್ಳಿ ಮಂಜುನಾಥ್, ಕದರಿನತ್ತ ಅಪ್ಪೋಜಿರಾವ್ ಕಿರಣ್, ಚಾಂದ್‌ಪಾಷ್, ಜಾವೇದ್ , ಆರೀಪ್, ಬಾಬಾಜಾನ್, ಮುನಿಯಪ್ಪ, ಯಲ್ಲಪ್ಪ, ಕಾಮಸಮುದ್ರ ಹೋ.ಅ ಮುನಿಕೃಷ್ಣ, ವಿಶ್ವ, ಗರುಡಕೆಂಪನಹಳ್ಳಿ ಮುನಿರಾಜು, ಮಂಗಸoದ್ರ ತಿಮ್ಮಣ್ಣ, ಹರೀಶ್, ರಾಮಸಾಗರ ವೇಣು, ಸುರೇಶ್‌ಬಾಬು, ಶೈಲಜ, ರಾಧಮ್ಮ, ಶೋಭ, ರತ್ನಮ್ಮ ಶಕುಂತಲ, ಲಕ್ಮಮ್ಮ ,ಮುಂತಾದವರಿದ್ದರು.

ವರದಿ ವಿಷ್ಣು ಕೋಲಾರ

Leave a Reply

Your email address will not be published. Required fields are marked *

Scan the code