ಕೃಷಿ ಕ್ಷೇತ್ರದ ಪರಿಸರ ಸ್ನೇಹಿ ಬಹುಪಯೋಗಿ ಯಂತ್ರ ಪರಿಚಯಿಸಿ ಜಪಾನ್ ನಲ್ಲಿ ನಡೆಯಲಿರುವ ಕಾರ್ಯಗಾರಕ್ಕೆ ಆಯ್ಕೆಯಾಗಿರುವ ಅನುಶ್ರೀಗೆ ಪಟ್ಟಣದಲ್ಲಿ ಶಿಕ್ಷಣ ಇಲಾಖೆಯಿಂದ ಸನ್ಮಾನ
(KOLARA): ಬಂಗಾರಪೇಟೆ: ಕೃಷಿ ಕ್ಷೇತ್ರದ ಅನುಕೂಲಕ್ಕೆ ಪರಿಸರ ಸ್ನೇಹಿ ಬಹೋಪಯೋಗಿ ಯಂತ್ರ ಪರಿಚಯಿಸಿ ಜಪಾನ್ ನಲ್ಲಿ ನಡೆಯುವ 7 ದಿನಗಳ ಕಾರ್ಯಗಾರದಲ್ಲಿ ಭಾಗವಹಿಸಲು ಆಹ್ವಾನ ಬಂದಿರುವ ಬಾಲಕಿ ಎನ್.ಅನುಶ್ರೀಗೆ ಶಿಕ್ಷಣ ಇಲಾಖೆ ಹಾಗೂ ಪೌಢ ಶಾಲಾ ಶಿಕ್ಷಕರ ಸಂಘ ವತಿಯಿಂದ ಸನ್ಮಾನಿಸಿ ಅಭಿನಂದನೆ ಸಲ್ಲಿಸಿದರು.
ಪಟ್ಟಣದ ಬಿಆರ್ಸಿ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ ಸರಳ ಸಮಾರಂಭದಲ್ಲಿ ಬಾಲಕಿ ಅನುಶ್ರೀರನ್ನು ಸನ್ಮಾನಿಸಿ
ಮಾತನಾಡಿದ, ಕ್ಷೇತ್ರಶಿಕ್ಷಣಾಧಿಕಾರಿ ಸುಕನ್ಯ ಕಿರಿಯ ವಯಸಿನಲ್ಲೆ ಅನುಶ್ರೀ ದೇಶ ಮೆಚ್ಚುವಂತ ಸಾಧನೆ ಮಾಡಿರುವುದು ಮೆಚ್ಚಲೇಬೇಕು.ಕುಗ್ರಾಮದಲ್ಲಿ ಜನಿಸಿದ ಬಾಲಕಿ ಸ್ವಂತ ಸೂರಿಲ್ಲದಿದ್ದರೂ ಮನೆಯಲ್ಲಿ ಬಡತನ ಇದ್ದರೂ ಸಹ ತನ್ನ ಪ್ರೌಢ ಶಾಲೆ ಶಿಕ್ಷಕಿ ಕವಿತಾ ಸಹಕಾರದೊಂದಿಗೆ ಪರಿಸರ ಸ್ನೇಹಿ ಕೃಷಿ ಉಪಕರಣವನ್ನು ಆವಿಷ್ಕಾರಗೊಳಿಸಿ ರಾಷ್ಟ್ರಮಟ್ಟದಲ್ಲಿ ಇನ್ಸ್ಪೈರ್ ಅವಾರ್ಡ್ ಪಡೆದುಕೊಂಡಿದ್ದರು.
ಈಗ ಈ ಬಾಲಕಿ ಸಾದನೆ ಕಂಡು ಜಪಾನ್ ದೇಶದಲ್ಲಿ ನಡೆಯುವ 7ದಿನಗಳ ಕಾರ್ಯಗಾರದಲ್ಲಿ ಭಾಗವಹಿಸಿ ತನ್ನ ಪ್ರತಿಭೆಯನ್ನು ಪ್ರದರ್ಶಿಸಲು ಆಹ್ವಾನ ಬಂದಿರುವುದು ಹೆಮ್ಮಯ ಸಂಗತಿಯಾಗಿದೆ.ಈ ಬಾಲಕಿಯು ಮತ್ತಷ್ಟು ವಿಜ್ಙಾನ ವಿಷಯದಲ್ಲಿ ಎತ್ತರಕ್ಕೆ ಬೆಳೆದು ಜಿಲ್ಲೆಯ ಕೀರ್ತಿಯನ್ನು ಎಲ್ಲೆಡೆ ಅರಳುವಂತೆ ಮಾಡಲಿ ಎಂದು ಹಾರೈಸಿದರು.
ಈ ಸಂದರ್ಭದಲ್ಲಿ ಬಿಆರ್ಸಿ ಶಶಿಕಲಾ ,ಕಾಮಸಮುದ್ರ ಕಾಲೇಜಿನ ಪ್ರಾಂಶುಪಾಲೆ ಬಸವರಾಜಮ್ಮ,ಜೂನಿಯರ್ ಕಾಲೇಜಿನ ಮುಖ್ಯಶಿಕ್ಷಕ ಶಂಕರಪ್ಪ, ವಿಜಿಕುಮಾರ್, ವೆಂಕಟೇಶ್,ಬಿ.ನಾಗರಾಜ್,ವೆಂಕಟಪತಿ,ಖದರ್ ಪಾಷ,ವಾಸಿಂ,ಮಂಜುಳಾ,ಮುಖಂಡ ಲಕ್ಷ್ಮಿನಾರಾಯಣ ಪ್ರಸಾದ್ ಮತ್ತಿತರರು ಇದ್ದರು.
ವರದಿ: ವಿಷ್ಣು ಕೋಲಾರ