ಪ್ರಗತಿಪರ ಸಂಘಟನೆಗಳ ಒಕ್ಕೂಟದಿಂದ ಹಾಸನದಲ್ಲಿ ನಡೆದ ಪೆನ್ ಡ್ರೈವ್ ಪ್ರಕರಣ ವಿರೋಧಿಸಿ ಹಾಸನ ಚಲೋ
(SHIVAMOGA): ಸಾಗರ: ಪ್ರಸ್ತಾವಿಕವಾಗಿ ಶಿವಾನಂದ ಕುಗ್ವೆ ಮಾತನಾಡಿ ಹಾಸನದಲ್ಲಿ ನಡೆದ ಪೆನ್ ಡ್ರೈವ್ ಪ್ರಕರಣ ಇಡಿ ನಾಗರಿಕ ಸಮಾಜ ತಲೆತಗ್ಗಿಸುವ ಕೆಲಸ ಆಗಿದೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇತರಹದ ಘಟನೆ ಮರುಕಳಿಸದಂತೆ ಕ್ರಮ ಜರಗಿಸುವುದು ಅನಿವಾರ್ಯವಾಗಿದೆ ಇದಕ್ಕೆ ಎಲ್ಲಾ ಪ್ರಗತಿಪರರು ಸಾಮಾಜಿಕ ಕಳಕಳಿವುಳ್ಳುವವರು ಇ ಹೋರಾಟದ ಮೂಲಕ ಮಹಿಳೆಯರಿಗೆ ನ್ಯಾಯ ಸಿಗುವಲ್ಲಿ ಪ್ರಮುಖ ಪಾತ್ರ ವಹಿಸಬೇಕಾಗಿದೆ.
ರಾಜ್ಯ ಜನವಾದಿ ಮಹಿಳಾ ಸಂಘದ ರಾಜ್ಯ ಉಪಾಧ್ಯಕ್ಷೆಯಾದ ಕೆ.ಎಸ್.ವಿಮಲ ಮಾತನಾಡುತ್ತಾ. ಮೊದಲು ಬಳ್ಳಾರಿ ಯಲ್ಲಿ ಘಣಿದಣಿಗಳ ರಾಜ್ಯಭಾರ ಆಗಿತ್ತು ಆದರೆ ಇಗ ಹಾಸನವಾಗಿದೆ. ಹಾಸನದಲ್ಲಿ ಹಣ ಬಲ ರಾಜಕೀಯ ಬಲ ಎಲ್ಲಾ ಇಟ್ಟುಕೊಂಡು ಸಾರ್ವಜನಿಕರಿಗೆ ಪಾಳೆಗಾರಿಕೆ ಮಾಡ್ತಾ ಇರುವ ಇನ್ನು ಎಷ್ಟು ಹೆಣ್ಣು ಮಕ್ಕಳಿಗೆ ಅನ್ಯಾಯ ಮಾಡ್ತಾರೆ. ಇದಕ್ಕೆಲ್ಲಾ ನಮ್ಮ ತರಹದ ಇನ್ನು ಅನೇಕ ಪ್ರಗತಿಪರರು ಇವರ ವಿರುದ್ಧ ಧ್ವನಿ ಎತ್ತುವ ಮೂಲಕ ಅವರ ಪಾಳೆಗಾರಿಕೆ ನಿಲ್ಲಿಸಬೇಕು ಎಂದರು. ಇದೇ ತಿಂಗಳ 30ನೇ ತಾರೀಖಿನಿಂದ ಇಡೀ ರಾಜ್ಯದ ಎಲ್ಲಾ ಪ್ರಗತಿಪರರು ಸೇರಿ ಹಾಸನ ಚೆಲೋ ಎಂಬ ಕಾರ್ಯಕ್ರಮದಡಿ ಯಲ್ಲಿ ಪಾಲ್ಗೊಂಡು ಪ್ರಜ್ವಲ್ ರೇವಣ್ಣ ಅವರಿಗೆ ಸರಿಯಾದ ಶಿಕ್ಷೆಯಾಗಬೇಕು. ಇನ್ನು ರಾಜ್ಯದಲ್ಲಿ ಇತರಹದ ಘಟನೆ ಮರುಕಳಿಸದಂತೆ ಜಾಗ್ರತೆ ವಹಿಸಬೇಕು. ನಮ್ಮ ಹದಿನಾಲ್ಕು ಬೇಡಿಕೆಗಳನ್ನು ಮುಂದಿಟ್ಟು ಈ ಹೋರಾಟ ಮಾಡ್ತಾ ಇದಿವಿ ಇದಕ್ಕೆಲ್ಲಾ ಸರ್ಕಾರ ಉತ್ತರಿಸಬೇಕು ಎಂದರು ಪ್ರಜ್ವಲ್ ರೇವಣ್ಣ ಅವರನ್ನು ಕರೆತರುವಲ್ಲಿ ಕೇಂದ್ರ ಸರ್ಕಾರದ ಮುಂದಾಗಬೇಕು ಎಂದರು.
ಈ ಸಂದರ್ಭದಲ್ಲಿ ಕೆ.ಎಸ್.ವಿಮಲ, ಶಿವಾನಂದ ಕುಗ್ವೆ, ಸುರೇಂದ್ರ ನಾಥ್, ವೃಂದಾ ಹೆಗಡೆ, ವಸಂತ್ ಕುಗ್ವೆ, ಮೋಹನ್ ಮೂರ್ತಿ, ವಸಂತ್ ಕುಮಾರ್, ಗೂಳಗೂಡು ನಾರಾಯಣ್, ಹೆಚ್.ಬಿ.ರಾಘವೇಂದ್ರ, ಹಾಗೂ ಇನ್ನಿತರರು ಪಾಲ್ಗೊಂಡಿದ್ದರು.
ವರದಿ: ರಾಘವೇಂದ್ರ ತಾಳಗುಪ್ಪ