ಶ್ರವಣದೋಷವಿರುವ ವಿಕಲಚೇತನ ವಿದ್ಯಾರ್ಥಿ ಎಸ್ಎಸ್ಎಲ್ಸಿ ಪರೀಕ್ಷೇಯಲ್ಲಿ ಕನ್ನಡ ಮಾದ್ಯಮದಲ್ಲಿ ಶಾಲೆಗೆ ಪ್ರಥಮ
(KOLARA): ಕೋಲಾರ : 2023-24 ನೇ ಸಾಲಿನ ಎಸ್ಎಸ್ಎಲ್ಸಿ ಫಲಿತಾಂಶವು ಮೇ9 ರಂದು ಪ್ರಕಟಗೊಂಡಿದ್ದು, ನಗರದ ಸರ್ಕಾರಿ ಪದವಿಪೂರ್ವ ಪ್ರೌಢ ಶಾಲೆಯ ಶೇ 75% ಶ್ರವಣದೋಷವಿರುವ ವಿಕಲಚೇತನ ವಿದ್ಯಾರ್ಥಿ ಕೆ.ಸಿ.ಚರಣ್ ಕನ್ನಡ ಮಾಧ್ಯಮದಲ್ಲಿ ಉತ್ತಮ ಅಂಕಗಳಿಸುವ ಮೂಲಕ ಶಾಲೆಗೆ ಪ್ರಥಮ ಸ್ಥಾನವನ್ನು ಪಡೆದಿರುತ್ತಾನೆ.
ನಗರದ ಕುರುಬರಪೇಟೆಯ ನಿವಾಸಿಗಳಾದ ಪತ್ರಕರ್ತ ಕೆ.ಎನ್.ಚಂದ್ರಶೇಖರ್ ಮತ್ತು ಕೆ.ಎಂ.ರಮ್ಯ ದಂಪತಿಗಳ ಮಗನಾದ ಕೆ.ಸಿ.ಚರಣ್ ಹುಟ್ಟಿದಾಗಿನಿಂದ ಶ್ರವಣದೋಷ ವಿದ್ದು, ಮೈಸೂರಿನ ವಾಕ್ ಮತ್ತು ಶ್ರವಣ ಸಂಸ್ಥೆಯಲ್ಲಿ ತರಬೇತಿ ಪಡೆದು ನಂತರ ಮಹಿಳಾ ಸಮಾಜ ಕನ್ನಡ ಮಾಧ್ಯಮ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣವನ್ನು ಮುಗಿಸಿ ನಂತರ ನಗರದ ಸರ್ಕಾರಿ ಪದವಿಪೂರ್ವ ಪ್ರೌಢ ಶಾಲೆಯ (ಜೂನಿಯರ್ ಕಾಲೇಜ್) ನಲ್ಲಿ ವ್ಯಾಸಂಗ ಮಾಡುತ್ತಿದ್ದು, 2023-24 ನೇ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಸರ್ಕಾರದಿಂದ ವಿಕಲಚೇತನರಿಗೆ ಸಿಗುವ ವಿನಾಯಿತಿ ಹಾಗೂ ಸಹಾಯಕ ಪರೀಕ್ಷಾರ್ಥಿ ಸೌಲಭ್ಯ ಪಡೆಯದೇ ಸಾಮಾನ್ಯ ವಿದ್ಯಾರ್ಥಿಯಂತೆ ಪರೀಕ್ಷೆ ಬರೆದು ಕನ್ನಡ ಮಾಧ್ಯಮದಲ್ಲಿ ಒಟ್ಟು 379 ಶೇ 60.64 ಅಂಕಗಳನ್ನು ಪಡೆಯುವ ಮೂಲಕ ಶಾಲೆಗೆ ಪ್ರಥಮ ಸ್ಥಾನವನ್ನು ಪಡೆದಿರುತ್ತಾನೆ.
ಶೇ 75% ಶ್ರವಣದೋಷವಿರುವ ವಿಕಲಚೇತನಾದರು ಕಠಿಣ ಪರಿಶ್ರಮ ಹಾಗೂ ತಂದೆ ತಾಯಿಗಳ ಸಹಕಾರ ದಿಂದ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಗಳಿಸಿದ ಕೆ.ಸಿ.ಚರಣ್ ನನ್ನು ಶಾಲೆಯ ಉಪ ಪ್ರಾಂಶುಪಾಲರು ಹಾಗೂ ಶಿಕ್ಷಕ ವೃಂದದವರು ಶ್ಲಾಘಿಸಿ, ಅಭಿನಂದನೆಗಳನ್ನು ತಿಳಿಸಿದ್ದಾರೆ.
ವರದಿ: ವಿಷ್ಣು ಕೋಲಾರ