ಮಲೆನಾಡುಶಿವಮೊಗ್ಗ

ತಾಲೂಕಿನ ಆದ್ಯಂತ ವಿಪರೀತ ಮಳೆಯಿಂದ ಅಪಾರ ಪ್ರಮಾಣದ ಹಾನಿ.

ತಾಲೂಕಿನ ಆದ್ಯಂತ ವಿಪರೀತ ಮಳೆಯಿಂದ ಅಪಾರ ಪ್ರಮಾಣದ ಹಾನಿ.

(SHIVAMOGA): ಸಾಗರ:ತಾಲ್ಲೂಕಿನ ಕೋಳೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ವಿಪರೀತ ಮಳೆಗಾಳಿಯಿಂದ ಎರಡು ಮನೆಗಳ ಮೇಲೆ ಮರ ಮುರಿದು ಬಿದ್ದು ಅಪಾರ ಪ್ರಮಾಣದ ನಷ್ಟವುಂಟದ ಘಟನೆ ಮಂಗಳವಾರ ನಡೆದಿದೆ.
ಗೋಡೆಕೊಪ್ಪ ಗ್ರಾಮದ ಚಿಪ್ಪಾಳಿಕೊಪ್ಪ ಪುರುಷೋತ್ತಮ ಅವರ ಮನೆ ಮೇಲೆ ದೊಡ್ಡ ಗಾತ್ರದ ಮರ ಮುರಿದು ಬಿದ್ದು ಮನೆ ಭಾಗಶಃ ಜಖಂಗೊಂಡಿದೆ. ಮನೆಯಲ್ಲಿದ್ದ ಒಬ್ಬರಿಗೆ ಸ್ವಲ್ಪ ಪೆಟ್ಟಾಗಿದ್ದು, ಉಳಿದವರು ಅದೃಷ್ಟವಶಾತ್ ಬಚಾವಾಗಿದ್ದಾರೆ. ಮನೆಯೊಳಗೆ ಇದ್ದ ಎಲ್ಲ ವಸ್ತುಗಳು ನಾಶವಾಗಿದೆ. ಶೆಡ್ಡಿಕೊಪ್ಪ ಗ್ರಾಮದಲ್ಲಿ ಮನೆಯ ಮೇಲೆ ಮರ ಬಿದ್ದು ಮನೆ ಸಂಪೂರ್ಣ ಜಖಂಗೊಂಡಿದೆ.
ಸ್ಥಳಕ್ಕೆ ಕೋಳೂರು ಗ್ರಾಮ ಪಂಚಾಯ್ತಿ ಅಧ್ಯಕ್ಷ ನವೀನ್ ಗೌಡ, ಶಾಸಕರ ಆಪ್ತ ಕಾರ್ಯದರ್ಶಿ ಶ್ರೀನಿವಾಸ್ ಮೂರ್ತಿ, ಗ್ರಾಮ ಪಂಚಾಯ್ತಿ ಸದಸ್ಯರು, ಅಧಿಕಾರಿಗಳು ಭೇಟಿ ನೀಡಿ ತಾತ್ಕಾಲಿಕ ಪರಿಹಾರ ನೀಡಿದ್ದಾರೆ.

ವರದಿ: ರಾಘವೇಂದ್ರ ತಾಳಗುಪ್ಪ

Leave a Reply

Your email address will not be published. Required fields are marked *

Scan the code