ಹೆಳವ ಸಮಾಜವು ಶೈಕ್ಷಣಿಕವಾಗಿ , ಸಾಮಾಜಿಕವಾಗಿ, ರಾಜಕೀಯವಾಗಿ ಮುಂದೆ ಬರಲು ಸಂಘಟಿತರಾಗಿ ಶ್ರಮಿಸಬೇಕು
(KOLARA): ಬಂಗಾರಪೇಟೆ: ಹೆಳವ ಸಮಾಜವು ಶೈಕ್ಷಣಿಕವಾಗಿ , ಸಾಮಾಜಿಕವಾಗಿ, ರಾಜಕೀಯವಾಗಿ ಮುಂದೆ ಬರಲು ಸಂಘಟಿತರಾಗಿ ಶ್ರಮಿಸಬೇಕು ಎಂದು ಅಖಿಲ ಕರ್ನಾಟಕ ಹೆಳವ ಸಮಾಜದ ಜಿಲ್ಲಾಧ್ಯಕ್ಷರಾದ ಶ್ರೀನಿವಾಸ್ ಎನ್ ವಿ ಸಲಹೆಯನ್ನು ನೀಡಿದರು.
ಪಟ್ಟಣದ ಹೆಳವ ಸಮುದಾಯದ ಭವನದಲ್ಲಿ ಶನಿವಾರ ಅಖಿಲ ಕರ್ನಾಟಕ ಹೆಳವ ಸಮಾಜ ಬಂಗಾರಪೇಟೆ ತಾಲೂಕು ಘಟಕವು 2025 ನೇ ಸಾಲಿನ ಕ್ಯಾಲೆಂಡರ್ ಬಿಡುಗಡೆ ಮಾಡಿ ಮಾತನಾಡಿದ ಅವರು ಹೆಳವ ಸಮುದಾಯದವರು ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳಲು ಸಂಘಟಿತರಾಗಬೇಕು. ಪುರಾತನ ಕಾಲದಲ್ಲಿ ವಿದ್ಯಾರ್ಹತೆಯಿಲ್ಲದಿದ್ದರೂ ಚಾಕಚಕ್ಯತೆಯಿಂದ ವಂಶಾವಳಿ ಹೇಳುವ ಬದುಕು ಕಟ್ಟಿಕೊಂಡು ಸಂಕಷ್ಟಗಳ ನಡುವೆ ಜೀವನ ಸವೆಸಿದ ಇಂತಹ ಕುಟುಂಬಗಳಿಗೆ ಸರ್ಕಾರಗಳು ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು ಎಂದರು.
ಹೇಳುವ ಸಮಾಜವು ರಾಜಕೀಯ ಪ್ರಾತಿನಿಧ್ಯವನ್ನು ಪಡೆಯಲು ಸಂಘಟಿತರಾಗಿ ಒಗ್ಗಟ್ಟನ್ನು ಪ್ರದರ್ಶಿಸಬೇಕು ಹಾಗೂ ನಮ್ಮ ಹಕ್ಕುಗಳನ್ನು ಪಡೆಯಲು ಸರ್ಕಾರದ ವಿರುದ್ಧ ಹೋರಾಟವನ್ನು ಸಂಘಟಿತರಾಗಿ ಮಾಡಬೇಕು ಎಂದು ತಿಳಿಸಿದರು
ಈ ಸಂದರ್ಭದಲ್ಲಿ ಖಜಾಂಚಿಗಳಾದ ಶ್ರೀನಿವಾಸ್ ಪಿವಿ ಮಾತನಾಡಿ ಸಮುದಾಯದಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡುವ ಮೂಲಕ ಅಜ್ಞಾನ, ಅಂಧಕಾರ, ಮೌಢ್ಯತೆ ತೊಲಗಿಸಿ ಸಮಾಜದ ಮುಖ್ಯ ವಾಹಿನಿಗೆ ಬರಬೇಕಿದೆ. ಸರಕಾರದಿಂದ ಅನೇಕ ಶೈಕ್ಷಣಿಕ ಸೌಲಭ್ಯಗಳಿದ್ದು, ಅದನ್ನು ಸರಿಯಾದ ರೀತಿಯಲ್ಲಿ ಸದುಪಯೋಗಪಡಿಸಿಕೊಳ್ಳಬೇಕಿದೆ. ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆದುಕೊಳ್ಳುವ ಮೂಲಕ ಸಮಾಜದಲ್ಲಿ ಒಳ್ಳೆಯ ಸಂಸ್ಕಾರ, ಮೌಲ್ಯಗಳನ್ನು ಬೆಳೆಸಿಕೊಳ್ಳುವ ಮುಖಾಂತರ ಉತ್ತಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ತಾಲ್ಲೂಕು ಘಟಕದ ಅಧ್ಯಕ್ಷ ವೆಂಕಟೇಶ್ ಜಿ ಪದಾಧಿಕಾರಿಗಳಾದ ಸತೀಶ್, ಮುರಳಿ, ಶ್ರೀರಾಮ್ ,ಲಕ್ಷ್ಮಣ್ ನಾಗರಾಜ್ ನಾರಾಯಣಸ್ವಾಮಿ ಶಿವಕುಮಾರ್, ಮಂಜುನಾಥ್ ನಾರಾಯಣಪ್ಪ ಚಲಪತಿ, ಗೋವಿಂದ್ ,ಕೃಷ್ಣಮೂರ್ತಿ, ಗಂಗಾಧರ್ ಉಪಸ್ಥಿತರಿದ್ದರು.
ವರದಿ: ವಿಷ್ಣು ಕೋಲಾರ