ದೇವಸ್ಥಾನಗಳ ಕಾರ್ಯಕ್ರಮದಲ್ಲಿ ಹಿಂದೂ ಸಮಾಜ ಒಗ್ಗೂಡಬೇಕು –ಆರ್ ಡಿ ಮಹೇಂದ್ರ
(CHIKKAMAGALURU): ಹಿಂದೂ ಸಮಾಜದ ಹಬ್ಬ ಹರಿದಿನಗಳಲ್ಲಿ ಹಲವಾರು ಹಬ್ಬಗಳು ಕೇವಲ ಕೌಟುಂಬಿಕ ವಾಗಿ ಮನೆಯ ಆಚರಣೆಗಳಾಗಿದ್ದು ಕೇಲವೇ ಕೆಲವು ಹಬ್ಬಗಳು ಸಾರ್ವಜನಿಕವಾಗಿ ಅದ್ದೂರಿಯಿಂದ ಆಚರಿಸಲ್ಪಡುತ್ತಿದೆ. ಈ ರೀತಿ ಸರ್ವ ಜನರನ್ನು ಸಮಾಜದಲ್ಲಿ ಏಕ ರೂಪವಾಗಿ ಕಾಣುವ ಸ್ಥಳಗಳೆಂದರೇ ಅದುವೇ ನಮ್ಮ ಮಠ, ಮಂದಿರಗಳು ಮತ್ತು ದೇವಸ್ಥಾನಗಳು. ಈ ರೀತಿಯಾಗಿ ದೇವಸ್ಥಾನಗಳಲ್ಲಿ ಎಲ್ಲರೂ ಸೇರಿ ಆಚರಿಸುವ ಶ್ರೀ ಶಬರಿಮಲೆ ಅಯ್ಯಪ್ಪ ವೃತಾಚರಣೆಗೆ ಅದರದ್ದೇ ಆದ ಮಹತ್ವವಿದೆ. ಹಿಂದೂ ಸಮಾಜ ಒಗ್ಗೂಡಲು ಸಮಾಜಬಾಂದವರು ಯಾವುದೇ ಜಾತಿ ಮತ ಬೇದ ಮರೆತು ಎಲ್ಲರೂ ಒಂದೇ ಎನ್ನುವ ಭಾವನೆ ಮೂಡಿಬರಲು ದೇವಸ್ಥಾನಗಳಲ್ಲಿ ಹೆಚ್ಚು ಹೆಚ್ಚಾಗಿ ಧಾರ್ಮಿಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ಶ್ರೀ ಅಯ್ಯಪ್ಪ ಸೇವಾ ಸಮಿತಿ ರೇಣುಕನಗರದ ಅಧ್ಯಕ್ಷ ಶ್ರೀ ಆರ್ ಡಿ ಮಹೇಂದ್ರ ತಿಳಿಸಿದ್ದಾರೆ.
ಬಾಳೆಹೊನ್ನೂರಿನ ರೇಣುಕನಗರದ ಶ್ರೀ ಎ ಕೆ ಪಿ ಕೃಷ್ಣಪೊದುವಾಳ್ ಗುರುಸ್ವಾಮಿಯವರ ನೇತ್ರುತ್ವದಲ್ಲಿ ಮುಂಬರುವ ಜನವರಿ 1 ರಂದು ನೆಡೆಯಲಿರುವ ಶ್ರೀ ಅಯ್ಯಪ್ಪ ದೀಪೋತ್ಸವ ಅನ್ನದಾನ ಮತ್ತು ಧಾರ್ಮಿಕ ಸಭಾ ಕಾರ್ಯಕ್ರಮಗಳಿಗೆ ದೀಪ ಬೆಳಗುವುದರ ಮೂಲಕ ಚಾಲನೆಯಿತ್ತು ಮಾತನಾಡಿ ಕಳೆದ 32 ವರ್ಷಗಳಿಂದ ಈ ಅನ್ನದಾನ ಕಾರ್ಯಕ್ರಮ ಶ್ರೀ ಪ್ರಸನ್ನ ಗಣಪತಿ ದೇವಸ್ಥಾನದ ಆವರಣದಲ್ಲಿ ನಡೆಯುತಿದ್ದು ಈ ಭಾಗದ ಸಮಸ್ತ ಅಯ್ಯಪ್ಪ ಭಕ್ತರ ಪಾಲ್ಗೊಳ್ಳುವಿಕೆಯಿಂದ ಮತ್ತು ಸಹಕಾರದಿಂದ ಅದ್ದೂರಿಯಾಗಿ ನೆಡೆಯುತಿದ್ದು ಜನವರಿ 1/2024 ರಂದು ಸರಿ ಸುಮಾರು 5000 ಜನರಿಗೆ ಅನ್ನದಾನದ ಕಾರ್ಯಕ್ರಮ ಹಮ್ಮಿಕೊಂಡಿದ್ದು ಅಂದು ಮಧ್ಯಾಹ್ನ ಮತ್ತು ರಾತ್ರಿ ಎರೆಡೂ ಹೊತ್ತು ಸಹ ಅನ್ನದಾನ ಕಾರ್ಯಕ್ರಮವಿರುತ್ತದೆ. ನಿತ್ಯ ಶ್ರೀ ಅಯ್ಯಪ್ಪನ ಸನ್ನಿಧಿಯಲ್ಲಿ ದೀಪೋತ್ಸವ ಮತ್ತು ಶಾಸ್ತ್ರೋಕ್ತ ಪೂಜೆ ಅಭಿಷೇಕಗಳು ಸ್ವಾಮಿಗೆ ಗುರುಸ್ವಾಮಿಯವರ ನೇತೃತ್ವದಲ್ಲಿ ನೆಡೆಯುತಿದೆ ಈ ಬಾರಿ ಅನ್ನದಾನ ಕಾರ್ಯಕ್ರಮ ಅಧೂರಿಯಾಗಿ ಆಚರಿಸಲು ಸಮಿತಿ ನಿರ್ದರಿಸಿದ್ದು ಈ ಎಲ್ಲಾ ಕಾರ್ಯಕ್ರಮಗಳಿಗೆ ಪರಮಪೂಜ್ಯ ಶ್ರೀ ರಂಭಾಪುರಿ ಜಗದ್ಗುರುಗಳು ಮತ್ತು ಪರಮಪೂಜ್ಯ ವಿನಯಗುರೂಜಿಯವರ ಶುಭಾಶೀರ್ವಾದದೊಂದಿಗೆ ಎಲ್ಲಾ ಕಾರ್ಯಗಳು ಜರುಗಲಿವೆ ಎಂದು ತಿಳಿಸಿದರು,
ದೀಪೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಪುರೋಹಿತರಾದ ಶ್ರೀ ಸುಭ್ರಮಣ್ಯ ಭಟ್ ರವರು ಶ್ರೀ ಅಯ್ಯಪ್ಪ ಸ್ವಾಮಿಯವರಿಗೆ ಮಂತ್ರ ಸಹಿತ ಶಾಸ್ತ್ರೋಕ್ತ ಪೂಜೆ ನೆಡೆಯುವ ಕೆಲವೇ ಕೆಲವು ಸನ್ನಿಧಿಯಲ್ಲಿ ರೇಣುಕನಗರದ ಶ್ರೀ ಅಯ್ಯಪ್ಪ ಸೇವಾ ಸಮಿತಿ ಸನ್ನಿಧಿಯೂ ಒಂದಾಗಿದ್ದು ಗುರುಸ್ವಾಮಿಯವರು ತಮ್ಮ ಗುರುಸ್ವಾಮಿಯವರು ತಮ್ಮ 81 ನೇ ಇಳಿವಯಸ್ಸಿನಲ್ಲಿಯೂ ಸಹ ನೂರಾರು ಶಿಷ್ಯಂದಿರಿಗೆ ಮಾಲೆ ಧರಿಸಿ, ವ್ರತಾಚರಣೆ ಪೂಜಾ ಕೈಂಕರ್ಯ ನಡೆಸುತ್ತಿರುವುದು ಬಾಳೆಹೊನ್ನೂರಿನ ಅಯ್ಯಪ್ಪ ಭಕ್ತರಿಗೆ ಸಂತಸದ ವಿಚಾರ ಎಂದು ನುಡಿದರು
ಕಾರ್ಯಕ್ರಮದಲ್ಲಿ ಗುರುಸ್ವಾಮಿಗಳಾದ ಎಕೆಪಿ ಕೃಷ್ಣಪೊದುವಾಳ್ರವರು, ಗಣಪತಿ ಸಮಿತಿಯ ಶ್ರೀ ರಾಮಣ್ಣ, ಸಮಿತಿಯ ಖಜಾಂಚಿ ಜಗದೀಶ್ಚಂದ್ರ, ಸಮಿತಿಯ ಉಪಾಧ್ಯಕ್ಷರಾದ ರವಿಸ್ವಾಮಿ, ಸಂಚಾಲಕರಾದ ಕೋಟಿ ರಮೇಶ್ ನಟರಾಜ್ಸ್ವಾಮಿ, ಮನುಸ್ವಾಮಿ, ಮಂಜುರಾಜುಸ್ವಾಮಿ, ಮಾಲಾದಾರಿಗಳಾದ ಅಕ್ಷಯ್, ಆರ್ಮುಗಂ,ಎಸ್.ಮಂಜು,ರಕ್ಷಿತ್, ಸರವಣ,ಆದಿತ್ಯ, ಆಕಾಶ್,ಶರವಣ, ಮುರುಗೇಶ್, ಮೂರ್ತಿ,ಮುರುಗೇಶ್, ಸುಜಯ್, ಸೂರ್ಯ,ಶಿವಗಣೇಶ್,ಸುರೇಶ್,ಪ್ರಶಾಂತ್, ಪೊನ್ನಯ್ಯ, ಗಣೇಶ್, ಸಂತೋಷ್, ನಾರಾಯಣ್, ಶ್ರೀಮತಿ ಸರೋಜಾ ಪೊಂಗಾವನ್ ಇನ್ನಿತರ ಸ್ವಾಮಿಗಳು ಉಪಸ್ಥಿತರಿದ್ದರು.
ಸುಮಾರು 4000 ಸಾವಿರ ಹಿಂದೂ ಮನೆಗಳ ಸಂಪರ್ಕ:
ಕಳೆದ ವರ್ಷ ಚಾಲನೆಯಿತ್ತ ಮನೆ ಮನೆ ಸಂಪರ್ಕ ಕಾರ್ಯಕ್ರಮವು ಇಂದಿನಿಂದಲೇ ಆರಂಭವಾಗಿದ್ದು ರೇಣುಕನಗರ, ಅಕ್ಷರನಗರ, ವೀರಭದ್ರೇಶ್ವರ ನಗರ, ಮೆಣಸು ಕೂಡಿಗೆ, ಮಠ ರಸ್ತೆ, ಶ್ರೀ ರಂಭಾಪುರಿ ಮಠ , ಸೋಮೇಶ್ವರ ನಗರ, ಕಂಚಿಕೂಡಿಗೆ, ಬಸವನಕಟ್ಟೆ, ತುದಿಹಡ್ಲು, ವಾಟುಕೂಡಿಗೆ,ಕಡ್ಲೆಮಕ್ಕಿ, ನ.ರಾ.ಪುರ ರಸ್ತೆ, ವಿವೇಕನಗರ ಹಾಗೂ ಬಾಳೆಹೊನ್ನೂರು ನಗರದ ಒಟ್ಟು 4000 ಸಾವಿರ ಮನೆಗಳಿಗೆ ಮುಂದಿನ 8 ದಿನ ಅಯ್ಯಪ್ಪ ಮಾಲಾದಾರಿಗಳು ಮನೆ ಮನೆ ಸಂಪರ್ಕಮಾಡಿ ಕರಪತ್ರ ನೀಡಿ ಅನ್ನದಾನ ಕಾರ್ಯಕ್ರಮಕ್ಕೆ ಆಹ್ವಾನ ಪತ್ರಿಕೆ ನೀಡುತಿದ್ದು ಈ ಬಾರಿಯಿಂದ ಸೇವೆಯನ್ನು ಸಲ್ಲಿಸಿದ ಭಕ್ತರಿಗೆ ಶಬರಿಮಲ ಯಾತ್ರೆಯ ನಂತರ ಭಸ್ಮ ಪ್ರಸಾದ ಕಳಿಸುವ ವ್ಯವಸ್ಥೆಯನ್ನು ಸೇವಾ ಸಮಿತಿ ಮಾಡಲಿದೆ ಎಂದು ಆರ್ ಡಿ ಮಹೇಂದ್ರ ತಿಳಿಸಿದ್ದಾರೆ.