ಬಿಜೆಪಿ ಪಕ್ಷದ ಅಭ್ಯರ್ಥಿಯಾದ ಹೂಲಯ್ಯನವರಿಗೆ 18 ಸದಸ್ಯರ ಬೆಂಬಲದಿಂದ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ
(CHITRADURGA): ಮೊಳಕಾಲ್ಮುರು: ತಾಲೂಕಿನ ಅಶೋಕ ಸಿದ್ದಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ರಾಮಸಾಗರ ಹೂಲಯ್ಯ ಓಬಣ್ಣ ಹಾಗೂ ಉಪಾಧ್ಯಕ್ಷರಾಗಿ ರುದ್ರಮ್ಮ ಆಯ್ಕೆಗೊಂಡಿದ್ದಾರೆ. ಎಂದು ಚುನಾವಣಾಧಿಕಾರಿ ಉಪ ತಹಸೀಲ್ದಾರ್ ಮಹಾಂತೇಶ್ ಹಾಗೂ ಸಿ ಡಿ ಪಿ ಓ ನವೀನ್ ಕುಮಾರ್ ರವರು ಘೋಷಣೆ ಮಾಡಿದರು…
ಮಂಗಳವಾರ ನಡೆದ ಚುನಾವಣೆಯಲ್ಲಿ ಪರಿಶಿಷ್ಟ ಪಂಗಡ ಜಾತಿ ಪುರುಷಗೆ ಮೀಸಲಾದ ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿ ಪಕ್ಷದಿಂದ ಹೂಲಯ್ಯ ಹಾಗೂ ಎದುರಾಳಿಯಾಗಿ ಕಾಂಗ್ರೆಸ್ ಅಭ್ಯರ್ಥಿಯಾದ ಎಂ ತಿಪ್ಪೇಸ್ವಾಮಿ ಅವರು ನಾಮಪತ್ರ ಸಲ್ಲಿಸಿದ್ದರು..
ಸಾಮಾನ್ಯ ಸಭೆ ಕರೆದು ನಾಮಪತ್ರ ಪರಿಶೀಲನೆ ಮಾಡಲಾಯಿತು. ಅಶೋಕ ಸಿದ್ದಾಪುರ ಗ್ರಾಮ ಪಂಚಾಯಿತಿಯ 23 ಸದಸ್ಯರು ಸಭೆಗೆ ಹಾಜರಿದ್ದರು. ನಾಮಪತ್ರ ಹಿಂಪಡೆಯದಿದ್ದಿದ್ದರಿಂದ ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿ ಹಾಗೂ ಕಾಂಗ್ರೆಸ್ ನಿಂದ ನಾಮಪತ್ರ ಸಲ್ಲಿಕೆಯಾಗಿದ್ದರಿಂದ ಬಿಜೆಪಿ ಪಕ್ಷದ ಅಭ್ಯರ್ಥಿಯಾದ ಹೂಲಯ್ಯನವರಿಗೆ 18 ಸದಸ್ಯರ ಬೆಂಬಲದಿಂದ ಅವರನ್ನು ಅಧ್ಯಕ್ಷ ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ಚುನಾವಣಾ ಪ್ರಕ್ರಿಯೆ ಮುಕ್ತಾಯಗೊಳ್ಳುತ್ತಿದ್ದಂತೆ ನೂತನ ಅಧ್ಯಕ್ಷರಿಗೆ. ಅಧಿಕಾರ ಹಸ್ತಾಂತರ ಮಾಡಲಾಯಿತು. ಅಧಿಕಾರ ಸ್ವೀಕರಿಸಿ ಅಧ್ಯಕ್ಷ ಹೂಲಯ್ಯಮಾತನಾಡಿ, ನಾವು ಜನರ ಸೇವಕರು. ಜನರ ಆಶಯಕ್ಕೆ ತಕ್ಕಂತೆ ಕಾನೂನಾತ್ಮಕ ಅಭಿವೃದ್ಧಿಗೆ ಶ್ರಮಿಸುವುದಾಗಿ ಭರವಸೆ ನೀಡಿದರು.
ರಾಂಪುರ ಪೊಲೀಸ್ ಠಾಣೆಯ ಉಪನಿರೀಕ್ಷಕರಾದ ಮಹೇಶ್ ಲಕ್ಷ್ಮಣ್ ಹೊಸಪೇಟೆ ರವರು ಬಂದೋಬಸ್ ಕಲ್ಪಿಸಿದ್ದರು.
ಈ ಸಂದರ್ಭದಲ್ಲಿ ಮೊಳಕಾಲ್ಮೂರು ಮಂಡಲ ಅಧ್ಯಕ್ಷರಾದ ಡಾಕ್ಟರ್ ಎಂ ಮಂಜುನಾಥ್,ಜಿರಳ್ಳಿ ತಿಪ್ಪೇಸ್ವಾಮಿ, ಮಾಜಿ ತಾಲೂಕು ಪಂಚಾಯತ್ ಅಧ್ಯಕ್ಷರಾದ ಎಚ್ ಮೂರ್ತಿ, ಕರ್ನಾಟಕ ದಲಿತ ಸಂಘರ್ಷ ಸಮಿತಿಯ ತಾಲೂಕ್ ಸಂಚಾಲಕರದ ದೇವಸಮುದ್ರ ಚಂದ್ರಣ್ಣ, ರವಿ ಸ್ವಾಮಿ, ನಿಂಗಣ್ಣ, ಮುರ್ಕಲಯ್ಯ, ಬಸವರಾಜ್, ದೇವೇಂದ್ರಪ್ಪ, ರಪ್ಪ ಮಲ್ಲಿ, ಶಂಕ್ರಪ್ಪ, ಗ್ರಾಮ ಪಂಚಾಯತಿ ಸದಸ್ಯರಾದ ಎಸ್ಆರ್ ಪರಮೇಶ್ವರಪ್ಪ, ಉರ್ಥಳ್ ರವಿ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯಾದ ಪ್ರದೀಪ್ ಕುಮಾರ್,ಸಿ ವಿ ಕಾರ್ಯದರ್ಶಿಯಾದ ಸಿದ್ದೇಶ್ವರ, ಬಿಲ್ ಕಲೆಕ್ಟರ್ ಹೊನ್ನೂರಪ್ಪ ಎಂ, ಡಾಟಾ ಎಂಟ್ರಿ ಆಪರೇಟರ್ ಚಿದಾನಂದಪ್ಪ, ಹಾಗೂ ಊರಿನ ಗ್ರಾಮಸ್ಥರು ಬಿಜೆಪಿ ಪಕ್ಷದ ಅಭಿಮಾನಿಗಳು ಇನ್ನು ಮುಂತಾದವರು ಉಪಸ್ಥಿತರಿದ್ದರು.
ವರದಿ: ಸಿದ್ದೇಶ ಜಿ ಮೊಳಕಾಲ್ಮೂರು.