ಭೀಕರ ಅಪಘಾತ ಓಮಿನಿ ಜಕಂ, ನಾಲ್ವರು ಸ್ಥಳದಲ್ಲಿ ಸಾವು
(CHIKKAMAGALURU): ಧರ್ಮಸ್ಥಳ ದರ್ಶನ ಮುಗಿಸಿ ಮನೆಗೆ ತೆರಳುತ್ತಿದ್ದ ಒಂದೇ ಕುಟುಂಬದ ನಾಲ್ವರು ಅಪಘಾತಕ್ಕೆ ಸಿಲುಕಿ ಸಾವಿಗಿಡಾಗಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ಕೊಟ್ಟಿಗೆಹಾರ ಬಳಿ ಲಾರಿ ಹಾಗೂ ಓಮಿನಿ ನಡುವೆ ಮುಖಾಮುಖಿ ಡಿಕ್ಕಿಯಾಗಿದ್ದು ಸ್ಥಳದಲ್ಲೇ ನಾಲ್ವರು ಅಪಘಾತಕ್ಕೆ ಬಲಿಯಾಗಿದ್ದಾರೆ. ಮೆಸ್ಕಾಂ ಲಾರಿ ಹಾಗೂ ಚಿತ್ರದುರ್ಗದ ಓಮಿನಿ ನಡುವೆ ಅಪಘಾತ ಸಂಭವಿಸಿದೆ. ಧರ್ಮಸ್ಥಳದಿಂದ ಬರುತ್ತಿದ್ದ ಓಮಿನಿ ಹಾಗೂ ಅದರ ಹಿಂದೆಯೇ ಬರುತ್ತಿದ್ದ ಆಲ್ಟೊ ಕಾರಿಗೆ ಮೆಸ್ಕಾಂ ಲಾರಿಯು ಗುದ್ದಿದ ಪರಿಣಾಮ ಒಂದೇ ಕುಟುಂಬದ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಅಪಘಾತದಲ್ಲಿ ಸಾವನ್ನಪ್ಪಿದ ಚಿತ್ರದುರ್ಗದ ಹೊಳಲ್ಕೆರೆ ಸಮೀಪದ ಪ್ರೇಮ (58) ಪ್ರಭಾಕರ್ (45) ಮಂಜಯ್ಯ(60) ಹಂಪಯ್ಯ(65) ಸಾವನಪ್ಪಿದ ದುರ್ದೈವಿಗಳು ಹಾಗೂ 12 ಜನರು ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.