ಬದುಕಿನಲ್ಲಿ ಶಿಕ್ಷಣ ಎಷ್ಟು ಮುಖ್ಯ ಮತ್ತು ಉನ್ನತ ಶಿಕ್ಷಣಕ್ಕೆ ಇರುವಂತ ದಾರಿಗಳು
(SHIVAMOGA):ಸಾಗರದ ಕರ್ಕಿಕೊಪ್ಪ ಕಾರ್ಯಕ್ಷೇತ್ರದ ಸಾಧನ ಜ್ಞಾನ ವಿಕಾಸ ಕೇಂದ್ರದಲ್ಲಿ ಯೋಜನೆಯ ವತಿಯಿಂದ ಸರ್ಕಾರಿ ಶಾಲೆಯ ನುರಿತ ಶಿಕ್ಷಕರಾದ ವೆಂಕಟೇಶ್ ಸರ್ ಇವರನ್ನು ಕಾರ್ಯಕ್ರಮಕ್ಕೆ ಕರೆಸಿ ಬದುಕಿನಲ್ಲಿ ಶಿಕ್ಷಣ ಎಷ್ಟು ಮುಖ್ಯ ಮತ್ತು ಉನ್ನತ ಶಿಕ್ಷಣಕ್ಕೆ ಇರುವಂತ ದಾರಿಗಳು ಮತ್ತು ಹೆತ್ತವರು ಮಕ್ಕಳ ವಿದ್ಯಾಭ್ಯಾಸದಲ್ಲಿ ವಹಿಸಬೇಕಾದ ಜವಾಬ್ದಾರಿಗಳ ಕುರಿತು ಮಾಹಿತಿ ನೀಡಲಾಯಿತು,
ತಾಲೂಕಿನ ಸಮನ್ವಯ ಅಧಿಕಾರಿಯಾದ ಗೌರಮ್ಮ ಇವರು ಸದಸ್ಯರೆಲ್ಲರಿಗೂ ಆಟೋಟ ಸ್ಪರ್ಧೆಯನ್ನು ಏರ್ಪಡಿಸಿ ಬಹುಮಾನವನು ವಿತರಣೆ ಮಾಡಿದರು. ಕಾರ್ಯಕ್ರಮದಲ್ಲಿ ಸೇವಾಪ್ರತಿನಿಧಿ ಆಶಾ ಮತ್ತು ಕೇಂದ್ರದ ಎಲ್ಲಾ ಸದಸ್ಯರು ಭಾಗವಾಯಿಸಿ ಯಶಸ್ವಿ ಮಾಡಿದರು, ಧರ್ಮಸ್ಥಳ ಯೋಜನೆಯ ಕಾರ್ಯಕ್ರಮವು ಅತ್ಯುತ್ತಮ ಎಂದು ಕರ್ಕಿಕೊಪ್ಪ ಗ್ರಾಮಸ್ಥರು ಸಂತಸ ವ್ಯಕ್ತ ಪಡಿಸಿದರು. ಈ ಸಂದರ್ಭದಲ್ಲಿ ಗ್ರಾಮಸ್ಥರು ಸಂಘದ ಪದಾಧಿಕಾರಿಗಳು ಹಾಜರಿದ್ದರು.
ವರದಿ: ರಾಘವೇಂದ್ರ ತಾಳಗುಪ್ಪ